ಕೊಪ್ಪಳ:- ಸಚಿವ ಶಿವರಾಜ್ ತಂಗಡಗಿಯನ್ನು ಮಂತ್ರಿ ಎನ್ನಬೇಕಾ? ಕಂತ್ರಿ ಎನ್ನಬೇಕಾ? ಎಂದು ಹೇಳುವ ಮೂಲಕ ಜನಾರ್ದನ ರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
DK Shivakumar: ನಾನು ಸಿಎಂ ಆಗ್ತೇನೆ, ಅದ್ಕೆ ಯಾವುದೇ ಮೋಸ ಆಗಲ್ಲ – ಡಿಕೆ ಶಿವಕುಮಾರ್!
ಶಿವರಾಜ್ ತಂಗಡಗಿ ಅವರನ್ನು ವಿರೋಧಿಸೋ ಭರದಲ್ಲಿ ರೆಡ್ಡಿ ನಾಲಿಗೆ ಹರಿಬಿಟ್ಟಿದ್ದಾರೆ. ಸಚಿವ ಶಿವರಾಜ್ ತಂಗಡಗಿ ವಿರುದ್ಧ ಮಾಜಿ ಸಚಿವ ಜನಾರ್ದನ ರೆಡ್ಡಿ ಲಘು ಹೇಳಿಕೆ ನೀಡಿದ್ದಾರೆ. ತಂಗಡಗಿಯನ್ನು ಮಂತ್ರಿ ಎನ್ನಬೇಕೋ, ಕಂತ್ರಿ ಎನ್ನಬೇಕೋ ಆ ಭಗವಂತನಿಗೆ ಗೊತ್ತು! ಅಂತ ರೆಡ್ಡಿ ಹೇಳಿದ್ದಾರೆ. ಹೀಗೆ ಮೋದಿ ವಿರುದ್ದ ಸಚಿವ ಶಿವರಾಜ್ ತಂಗಡಗಿ ಮಾತನಾಡಿದ್ರೆ, ಜನ್ರು ಮಂತ್ರಿ ಅಂತ ಕರೆಯೊಲ್ಲ ಕಂತ್ರಿ ಎಂದೇ ಕರೆಯುತ್ತಾರೆ ಅಂತ ಟೀಕಿಸಿದ್ದಾರೆ.
ಮೋದಿ ಮೋದಿ ಎಂದರೆ ಯುವಕರ ಕಪಾಳಕ್ಕೆ ಹೊಡೆಯಿರಿ ಎಂಬ ತಂಗಡಗಿ ಹೇಳಿಕೆಯನ್ನು ಪ್ರಸ್ತಾಪಿಸಿ, ಅವರಿಗೆ ಟಾಂಗ್ ಕೊಟ್ರು. ತಂಗಡಗಿ ಕಪಾಳಕ್ಕೆ ನಾವು ಹೊಡೆಯೋದು ಬೇಕಾಗಿಲ್ಲ. ಅದು ನಮ್ಮ ಸಂಸ್ಕಾರ ಅಲ್ಲ, ಅದು ನಮ್ಮ ಸಂಸ್ಕೃತಿಯೂ ಅಲ್ಲ ಅಂತ ಹೇಳಿದ್ರು.
ಮೋದಿ ಬಗ್ಗೆ ಕೆಟ್ಟದಾಗಿ ಮಾತನಾಡೋ ತಂಗಡಗಿಗೆ ಬುದ್ದಿವಾದ ಹೇಳುವ ಸಂಸ್ಕಾರ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಕಾಂಗ್ರೆಸ್ ಪಕ್ಷ ಅಂದ್ರೆ ಅದು ಸಂಸ್ಕೃತಿ ಇಲ್ಲದ ಪಕ್ಷ. ಕಾಂಗ್ರೆಸ್ ಅನ್ನೋದು ಇಟಲಿ ಪಕ್ಷ ಅಂತ ಜನಾರ್ದನ ರೆಡ್ಡಿ ಲೇವಡಿ ಮಾಡಿದ್ರು.
ನಾವೆಲ್ಲ ಮೋದಿಗೆ ವೋಟು ಹಾಕಬೇಕು. ವೋಟು ಹಾಕುವ ಮೂಲಕ ಶಿವರಾಜ್ ತಂಗಡಗಿ ಅವರ ಎರಡು ಕಪಾಳಕ್ಕೆ ಟಪಾರ್… ಟಪಾರ್… ಎಂದು ಹೊಡೆದ ಹಾಗೆ ಆಗಬೇಕು ಅಂತ ಮತದಾರರಿಗೆ ರೆಡ್ಡಿ ಕರೆ ನೀಡಿದ್ರು.