ಬಾಗಲಕೋಟೆ: ಪಾಕಿಸ್ತಾನದ ಪರ ಘೋಷಣೆ ಕೂಗುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೊಳಿಸಬೇಕು” ಎಂದು ವಕ್, ಅಲ್ಪಸಂಖ್ಯಾತರ ಖಾತೆ ಸಚಿವ ಜಮೀರ್ ಅಹಮ್ಮದ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಚರಂತಿಮಠದ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಶನಿವಾರ ಕಾಂಗ್ರೆಸ್ನಿಂದ ಆಯೋಜಿಸಲಾಗಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಅವರ ಪರ ಮತಪ್ರಚಾರ ಭಾಷಣ ಮಾಡಿದರು.
ಅಸ್ಸಲ್ಲಾಂ ಅಲೈಕುಂ ಎಂದು ಪ್ರಚಾರ ಭಾಷಣ ಪ್ರಾರಂಭಿಸಿದ ಅವರು, ಜೈ ಭೀಮ್ ಅನ್ನುತ್ತಾ ಭಾಷಣ ಮುಂದುವರಿಸಿದರು. ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರು ಹುಟ್ಟಿರದಿದ್ದರೆ, ನಮ್ಮ ಅಸ್ತಿತ್ವವೇ ಇರುತ್ತಿರಲಿಲ್ಲ. ಹೀಗೆ ನಿಮ್ಮ ಮುಂದೆ ಬಂದು ನಾನು ಮಾತಾಡುವುದು ಸಾಧ್ಯವಿರಲಿಲ್ಲ ಎಂದರು. ನಾನು ಮೊದಲು ಹಿಂದೂಸ್ತಾನಿ, ಆ ಮೇಲೆ ಕನ್ನಡಿಗ, ಆಮೇಲೆ ಮುಸಲ್ಮಾನ ಎಂದು ತಿಳಿಸಿದರು. ರಾಯಚೂರಿನಲ್ಲಿ ರವ ಭೋಸರಾಜ ಅವರಿಗೆ ರವಿಸಾಬ್ ಜೈ ಎಂದರೆ ಪಾಕಿಸ್ತಾನ ಜೈ ಎಂದು ಆರೋಪಿಸುತ್ತಾರೆ. ವಿಧಾನಸೌಧದಲ್ಲಿ ಕೂಗಿದವವರಿಗೆ ಜೈಲಿಗೆ ಕಳಿಸಿದ್ದೇವೆ.
APL Card: ಸಿಹಿ ಸುದ್ದಿ: ಜೂನ್ʼನಿಂದ APL ಪಡಿತರ ಚೀಟಿ ವಿತರಣೆ..! ಹೊಸ ಕಾರ್ಡ್ʼಗಳಿಗೆ ಅರ್ಜಿ ಆಹ್ವಾನ
ನ್ಯಾಯಾಧೀಶರು ಶಿಕ್ಷೆ ಕೊಡಬೇಕು. ನಾವು ಕೊಡಿಸಲು ಆಗುವುದಿಲ್ಲ ಎಂದು ತಿಳಿಸಿದರು. “ಪಾಕ್ ಪರ ಘೋಷಣೆ ಕೂಗಿ ನಮ್ಮ ಮೇಲೆ ಆರೋಪ ಹೊರಿಸುವ ಘಟನೆಗಳು ನಡೆದಿವೆ. ರಾಯಚೂರಿನಲ್ಲಿ ನಡೆದ ಘಟನೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಇಂತಹ ಘೋಷಣೆ ಕೂಗುವ ದೇಶದ್ರೋಹಿಗಳ ವಿಚಾರಣೆ ನಡೆಸುವ ಬದಲು ಸ್ಥಳದಲ್ಲಿ ಗುಂಡಿಕ್ಕಿ ಕೊಲ್ಲುವ ವ್ಯವಸ್ಥೆ ಜಾರಿಯಾಗಬೇಕು. ಹೀಗಾದರೆ ಘಟನೆಗಳಿಗೆ ಕಡಿವಾಣ ಹೇರಲು ಸಾಧ್ಯವಿದೆ. ಮುಸ್ಲಿಮರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ದೇಶಕ್ಕೆ ಸ್ವಾತಂತ್ರ್ಯ ಒದಗಿಸಿದ್ದಾರೆ. ನಾವು ದೇಶದ್ರೋಹಿಗಳಲ್ಲ” ಎಂದು ಹೇಳಿದರು.