ರಾಮನಗರ:- ನಾನು ಸಿಎಂ ಆಗ್ತೇನೆ, ಅದ್ಕೆ ಯಾವುದೇ ಮೋಸ ಆಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹರ್ಷಿಕಾ ಪೂಣಚ್ಚ ದಂಪತಿ ಮೇಲೆ ಹಲ್ಲೆ ಕೇಸ್… ಮತ್ತೆ ಠಾಣೆಗೆ ಹಾಜರಾದ ನಟಿ..!
ಈ ಸಂಬಂಧ ಮಾತನಾಡಿದ ಅವರು,ಯಾವುದೋ ಊರಿನವನಿಗೆ ವೋಟ್ ಹಾಕಬೇಡಿ. ಜೆಡಿಎಸ್, ಬಿಜೆಪಿ ಕಾರ್ಯಕರ್ತರೆಲ್ಲರೂ ಡಿ.ಕೆ. ಸುರೇಶ್ಗೆ ವೋಟ್ ಹಾಕಿ. ನೀವೆಲ್ಲರೂ ನನ್ನ ಮೇಲೆ ನಂಬಿಕೆ ಇಟ್ಟು ಸಿಎಂ ಆಗ್ತಾನೆ ಅಂತ ವೋಟ್ ಹಾಕಿದ್ರಿ. ಅದಕ್ಕೆ ಮೋಸ ಆಗೊಲ್ಲ, ನಾನು ನಿಮ್ಮ ಋಣ ತೀರಿಸ್ತೇನೆ ಅಂತ ಡಿಕೆಶಿ ಹೇಳಿದ್ರು.
ನಾನು ಬದುಕಿದ್ರೂ ಇಲ್ಲೆ, ಸತ್ರು ಇಲ್ಲೇ ಅಂತ ಡಿಕೆ ಶಿವಕುಮಾರ್ ಹೇಳಿದ್ರು. ನನ್ನ ಹೆಣ ಕೂಡ ದೊಡ್ಡಾಲಹಳ್ಳಿಗೆ ಹೋಗುತ್ತೆ. ನಾನು ಈ ಜಿಲ್ಲೆಯನ್ನು ಬಿಟ್ಟು ಎಲ್ಲೂ ಹೋಗೊಲ್ಲ ಅಂತ ಡಿಕೆಶಿ ಭಾವನಾತ್ಮಕವಾಗಿ ಮಾತನಾಡಿದ್ರು. ಯಾವುದೋ ಊರೋನಿಗೆ ವೋಟ್ ಹಾಕಬೇಡಿ. ಜೆಡಿಎಸ್, ಬಿಜೆಪಿ ಕಾರ್ಯಕರ್ತರೆಲ್ಲರೂ ಡಿಕೆ ಸುರೇಶ್ಗೆ ವೋಟ್ ಹಾಕಿ. ನೀವೆಲ್ಲರೂ ನನ್ನ ಮೇಲೆ ನಂಬಿಕೆ ಇಟ್ಟು ಸಿಎಂ ಆಗ್ತಾನೆ ಅಂತಾ ವೋಟ್ ಹಾಕಿದ್ರಿ. ಅದಕ್ಕೆ ಮೋಸ ಆಗೊಲ್ಲ, ನಾನು ನಿಮ್ಮ ಋಣ ತೀರಿಸ್ತೇನೆ ಅಂತ ಡಿಕೆಶಿ ಹೇಳಿದ್ರು. ಈ ಮೂಲಕ ಸಿಎಂ ಆಗಬೇಕು ಎನ್ನುವ ತಮ್ಮ ಕನಸನ್ನು ಪರೋಕ್ಷವಾಗಿ ತೆರೆದಿಟ್ಟರು.
ಕುಮಾರಸ್ವಾಮಿ ನಿಮ್ಮನ್ನ ಎರಡು ಬಾರಿ ಸಿಎಂ ಮಾಡಿದ್ರು. ನಿನ್ನ ಮನೆ ಬಾಗಿಲು ಕಾದಿದ್ದೇನೆ. ಆದರೆ ನನ್ನ ಬೆನ್ನಿಗೆ ಚೂರಿ ಹಾಕಿದ್ದೀನಿ ಅಂತೀರ. ನಾನು ಏನಾದ್ರೂ ನಿಮಗೆ ಮೋಸ ಮಾಡಿದ್ದೀನಾ? ನಿಮ್ಮ ಪತ್ನಿ ಅನಿತಾ ಗೆಲ್ಲಬೇಕು ಅಂತ ಎಷ್ಟು ಕಷ್ಟ ಪಟ್ಟಿದ್ದೀನಿ ಅಂತ ಗೊತ್ತಿಲ್ವಾ? ದೇವರು ನಿನ್ನನ್ನ ಕ್ಷಮಿಸ್ತಾನಾ ಕುಮಾರಣ್ಣ ಅಂತ ಎಚ್ಡಿಕೆ ವಿರುದ್ಧ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ರು.