ಹುಬ್ಬಳ್ಳಿ: ಈ ಚುನಾವಣೆ ಸತ್ಯ ಮತ್ತು ಸುಳ್ಳಿನ ನಡುವಿನ ಹೋರಾಟದ ಚುನಾವಣೆ. ದ್ವೇಷ ಮತ್ತು ಪ್ರೀತಿ ನಡುವಿನ ಚುನಾವಣೆ ನಡೆಯುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ಈ ಚುನಾವಣೆ ಸತ್ಯ ಮತ್ತು ಸುಳ್ಳಿನ ನಡುವಿನ ಹೋರಾಟದ ಚುನಾವಣೆ.
ದ್ವೇಷ ಮತ್ತು ಪ್ರೀತಿ ನಡುವಿನ ಚುನಾವಣೆ ನಡೆಯುತ್ತಿದೆ. ದೇಶಕ್ಕೆ ಏನು ಕೊಟ್ಟಿದ್ದೇನೆ ಎಂಬುದರ ಬಗ್ಗೆ ಈ ಚುನಾವಣೆಯಲ್ಲಿ ಚರ್ಚೆ ಆಗಲಿಲ್ಲ. ದೇಶವನ್ನು ವಿಭಜಿಸುವ ಬಗ್ಗೆ ಕ್ಯಾಂಪೇನ್ ಮಾಡಿದ್ರು. ಬಿಜೆಪಿ ಯಾವತ್ತೂ ಮೀಸಲಾತಿ ಪರ ಇಲ್ಲ ಎಂದು ವಾಗ್ದಾಳಿ ನಡೆಸಿದರು. ”ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಂವಿಧಾನ ಮತ್ತು ಮೀಸಲಾತಿ ವಿರುದ್ಧ ಮಾತನಾಡಿದ್ದಾರೆ. ಮೀಸಲಾತಿ ಮೇಲೆ ಅವರಿಗೆ ನಂಬಿಕೆ ಇಲ್ಲ. ಅನಿವಾರ್ಯವಾಗಿ ನಮಗೆ ತೊಂದರೆ ಆಗುತ್ತೆ ಅಂತ ಸುಮ್ಮನೆ ಇದ್ದಾರೆ.
APL Card: ಸಿಹಿ ಸುದ್ದಿ: ಜೂನ್ʼನಿಂದ APL ಪಡಿತರ ಚೀಟಿ ವಿತರಣೆ..! ಹೊಸ ಕಾರ್ಡ್ʼಗಳಿಗೆ ಅರ್ಜಿ ಆಹ್ವಾನ
ನಿಜವಾಗಿಯೂ ಸಂವಿಧಾನ ಧರ್ಮ ಗ್ರಂಥ ಅವರಿಗೆ ತಿಳಿದಿದ್ದರೆ, ಇವತ್ತು ಜಾಹೀರಾತು ನೀಡುವ ಅವಶ್ಯಕತೆ ಇರಲಿಲ್ಲ. ಬಿಜೆಪಿಯವರ ಪರಿಕಲ್ಪನೆಯೇ ಬೇರೆ ಇದೆ. ಆರ್ಎಸ್ಎಸ್ ಕಚೇರಿಯ ಮೇಲೆ ಬಾವುಟವನ್ನು ಹಾರಿಸದಂತವರು ಬಿಜೆಪಿಯವರು. ಅವರು ಮಾಡೋದು ಒಂದು ಹೇಳುವುದು ಇನ್ನೊಂದು. ನೇಹಾ ಹಿರೇಮಠ ಬಗ್ಗೆ ಮಾತನಾಡಿದವರು ಮಹಿಳಾ ಕುಸ್ತಿಪಟುಗಳು ಹೋರಾಟ ಮಾಡುವಾಗ ಏನು ಮಾಡ್ತಾ ಇದ್ದೀರಿ” ಎಂದು ಪ್ರಶ್ನಿಸಿದರು.