ಬೀದರ್ : ಬೀದರ್ ಲೋಕಸಭಾ ಕ್ಷೇತ್ರದ, ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಎನ್ಡಿಎ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಭಗವಂತ ಖೂಬಾರವರು ಗೆಲ್ಲುವುದು ಅಗತ್ಯವಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.ಬೀದರ್ ನಗರದ ಪತ್ರಿಕಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಜೆಪಿ, ಜೆಡಿಎಸ್ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಗವಂತ ಖೂಬಾರವರು ಈಗಾಗಲೇ ಎರಡು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಕ್ಷೇತ್ರದ ಇನ್ನಷ್ಟು ಅಭಿವೃದ್ಧಿಗೆ ಖೂಬಾರವರನ್ನು ಗೆಲ್ಲಿಸಿಕೊಂಡು ಬರಬೇಕಾಗಿದೆ ಎಂದರು.
APL Card: ಸಿಹಿ ಸುದ್ದಿ: ಜೂನ್ʼನಿಂದ APL ಪಡಿತರ ಚೀಟಿ ವಿತರಣೆ..! ಹೊಸ ಕಾರ್ಡ್ʼಗಳಿಗೆ ಅರ್ಜಿ ಆಹ್ವಾನ
ದೇವೇಗೌಡರು ಮೋದಿಯವರ ಕೈಯಲ್ಲಿ ದೇಶ ಇರಬೇಕು ಎಂದು ಕರೆ ಕೊಟ್ಟಿದ್ದಾರೆ. ದೇವೇಗೌಡರ ನಿರ್ಧಾರದಿಂದ ಕರ್ನಾಟಕದಲ್ಲಿ ಒಂದು ರೀತಿಯ ಸಂಚಲನ ಸೃಷ್ಟಿಯಾಗಿದೆ. ನಾನು ಬಿಜೆಪಿ ಮತ್ತು ಕಾಂಗ್ರೆಸ್ ಜೊತೆಗಿನ ಮೈತ್ರಿಯ ಸಂದರ್ಭದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಬಿಜೆಪಿ ಜೊತೆಗೆ ಸರ್ಕಾರ ಮಾಡಿದಾಗ ಇದ್ದಷ್ಟು ಉತ್ತಮ ವಾತಾವರಣ ಕಾಂಗ್ರೆಸ್ ಜೊತೆಗಿನ ಮೈತ್ರಿಯಲ್ಲಿ ಇರಲಿಲ್ಲ. ಈಗಿನ ಮೈತ್ರಿಯಲ್ಲಿ ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಎಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದೇವೆ.
ಕಾಂಗ್ರೆಸಿನ ಗ್ಯಾರಂಟಿಗಳು ವಿಫಲವಾಗಿವೆ:
ಕಾಂಗ್ರೆಸ್ ಸರ್ಕಾರದ ಮೊದಲ ಗ್ಯಾರಂಟಿ ಅನ್ನ ಭಾಗ್ಯದ ಮೂಲಕ ಹಸಿವು ನೀಗಿಸುವ ನಿಟ್ಟಿನಲ್ಲಿ ಹತ್ತು ಕೆಜಿ ಅಕ್ಕಿ ಬಡವರಿಗೆ ಕೊಡುತ್ತೇವೆ ಎಂದಿದ್ದರು. ಆದರೇ ಮೋದಿಯವರು ಕೊಡುತ್ತಿರುವ ಐದು ಕೆಜಿ ಅಕ್ಕಿಯೇ ನಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ.ದಾಸ್ತಾನಿನ ಬಗ್ಗೆ ಪರಿಕಲ್ಪನೆ ಇಲ್ಲದೇ ಘೋಷಣೆ ಮಾಡಿದ್ದರು. ಈಗ 170/- ರೂ. ಕೊಡುತ್ತಿದ್ದಾರೆ. ಒಂದು ಕೆಜಿ ಅಕ್ಕಿಗೆ ಮಾರುಕಟ್ಟೆಯಲ್ಲಿ 60 ರೂ. ಬೆಲೆ ಇದೆ. ಅವರು ಕೊಡುವ ಹಣದಲ್ಲಿ 3 ಕೆ.ಜಿ ಅಕ್ಕಿ ಮಾತ್ರ ಖರೀದಿ ಮಾಡಬಹುದು. ಇನ್ನೂ 7
ಕೆಜಿ ಅಕ್ಕಿ ಎಲ್ಲಿದೆ.?
200 ಯೂನಿಟ್ ಪ್ರೀ ವಿದ್ಯುತ್: ಕಾಕಾ ಪಾಟೀಲ್ ನಿನಗೂ ಪ್ರೀ, ಮಾದೇವಪ್ಪ ನಿನಗೂ ಪ್ರೀ ಅಂತ ಹೇಳಿದ್ರು. ಇದನ್ನು ನಂಬಿದ ಬಡಜನರು ಟಿವಿ, ಪ್ರೀಜ್, ವಾಟರ್ ಹಿಟರ್ ತಗೊಂಡ್ರು, ಆದ್ರೆ ಸರ್ಕಾರ ರಚಿಸಿದ ಬಳಿಕ ಅವರ ಸರಾಸರಿ ಬಳಕೆಯ ಮೇಲೆ 10% ರಷ್ಟು ಮಾತ್ರ ಪ್ರೀ ವಿದ್ಯುತ್ ನೀಡಿದ್ದಾರೆ. ಇದ್ರಲ್ಲಿ ಕೂಡ ಸುಳ್ಳು ಹೇಳಿದ್ದಾರೆ.
ಯುವನಿಧಿ: ಮಹಾನ್ ಸುಳ್ಳು:
ರಾಜ್ಯದಲ್ಲಿ ಡಿಪ್ಲೊಮಾ, ಡಿಗ್ರಿ ಪದವಿ ಮುಗಿಸಿದವರಿಗೆ 1500 & 3000 ರೂ. ಕೊಡುತ್ತೇವೆ ಎಂದರು. ಆದರೇ ಸರ್ಕಾರ ರಚನೆಯಾಗಿ ಆರು ತಿಂಗಳುಗಳ ನಂತರ ಯೋಜನೆ ಯಾರಿಗೆ ತಂದರು. ಅದರಲ್ಲೂ ಪ್ರಸ್ತುತ ಪಾಸ್ ಆದವರಿಗೆ ಮಾತ್ರ ಎಂಬ ಷರತ್ತು ವಿಧಿಸಿದರು. ಇದು ಕೂಡ ಮಹಾನ್ ಸುಳ್ಳಾಗಿದೆ.
ಪ್ರೀ ಬಸ್:
ಮಹಿಳೆಯರಿಗೆ ಪ್ರೀ ಬಸ್ ಕೊಟ್ಟಿರುವುದು ಸಂತಸ. ಆದರೇ ಇವತ್ತು ಮಕ್ಕಳು ಶಾಲೆಗೆ ಹೋಗಲು ಬಸ್ ಗಳು ಇಲ್ಲ. ಸುಮಾರು 25-30 ರಷ್ಟು ಬಸ್ಸಿನ ಟಿಕೆಟ್ ದರ ಜಾಸ್ತಿ ಮಾಡಿದ್ದಾರೆ. ಹೊಸ ಬಸ್ ಎಲ್ಲಿಯೂ ಕೊಟ್ಟಿಲ್ಲ. ದೊಡ್ಡದೊಡ್ಡ ಬಸ್ ಗಳು ಎಸಿ, ಒಲ್ವಾ ಬಸ್ ಬಂದ್ ಆಗಿವೆ.
ಗೃಹ ಲಕ್ಷ್ಮೀ:
ಗೃಹ ಲಕ್ಷ್ಮೀ ಹೆಸರಲ್ಲಿ ಮಹಿಳೆಯರಿಗೆ 2000 ಕೊಟ್ಟು, ಈ ಕಡೆ ಮದ್ಯದ ದರ ಜಾಸ್ತಿ ಮಾಡಿದ್ದಾರೆ. ಸ್ಟ್ಯಾಂಪ್ ಡ್ಯೂಟಿ ಜಾಸ್ತಿ ಮಾಡಿದ್ದಾರೆ. ವಿದ್ಯುತ್ ದರ ಜಾಸ್ತಿ ಮಾಡಿದ್ದಾರೆ. ಎಲ್ಲಾ ವಿದ್ಯುತ್ ಬಿಲ್ ಗಳು ಡಬಲ್ ಆಗಿವೆ. ವ್ಯಾಪಾರಸ್ಥರು ರಾಜ್ಯದಲ್ಲಿ ಸಂಕಷ್ಟದಲ್ಲಿ ಇದ್ದಾರೆ. ಇಲ್ಲಿ ಕೂಡ ಸುಳ್ಳು ಹೇಳಿದ್ದಾರೆ. ಅಷ್ಟೇ ಅಲ್ಲದೇ ಅವರು ಗ್ಯಾರಂಟಿಗಾಗಿ ಸಾಲ ಮಾಡಿದ್ದಾರೆ.