ರಾಯಚೂರು: ಪ್ರಜ್ವಲ್ ದೇಶ ಬಿಟ್ಟು ಹೋಗಲು ಕೇಂದ್ರದ ಸಪೋರ್ಟ್ ಇದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಆರೋಪಿಸಿದ್ದಾರೆ. ಈ ಕುರಿತು ರಾಯಚೂರಿನಲ್ಲಿ ಮಾತನಾಡಿದ ಅವರು, ಪ್ರಜ್ವಲ್ ವಿಚಾರದಲ್ಲಿ ಬಿಜೆಪಿ (BJP) ಡಬಲ್ ಸ್ಟ್ಯಾಂಡ್ ತೆಗೆದುಕೊಂಡಿದೆ. ಬಿಜೆಪಿ ಸತ್ತ ಹೆಣದ ಮೇಲೆ ರಾಜಕೀಯ ಮಾಡೋದನ್ನ ನೋಡಿದ್ದೇವೆ.
APL Card: ಸಿಹಿ ಸುದ್ದಿ: ಜೂನ್ʼನಿಂದ APL ಪಡಿತರ ಚೀಟಿ ವಿತರಣೆ..! ಹೊಸ ಕಾರ್ಡ್ʼಗಳಿಗೆ ಅರ್ಜಿ ಆಹ್ವಾನ
ದೇವರಾಜೇಗೌಡ 6 ತಿಂಗಳ ಮುಂಚೆಯೇ ಪತ್ರ ಬರೆದಿದ್ದರು. ಆದರೆ ಮೋದಿ, ವಿಜಯೇಂದ್ರ, ಅಮಿತ್ ಶಾ ಇವರೆಲ್ಲರೂ ಸೇರಿ ಟಿಕೆಟ್ ನೀಡಿದರು. ಕರ್ನಾಟಕದ ಮಾನ-ಮರ್ಯಾದೆ ರಸ್ತೆ ರಸ್ತೆಗಳಲ್ಲಿ ಪೆನ್ಡ್ರೈವ್ ಮೂಲಕ ಹರಾಜಾಗುತ್ತಿದೆ. ಇದು ಒಂದಲ್ಲ ಎರಡಲ್ಲ ಮಾಸ್ ರೇಪಿಸ್ಟ್ ಪ್ರಕರಣ ಎಂದು ಕಿಡಿಕಾರಿದರು.