ಗದಗ:- ಗ್ಯಾರಂಟಿಗಳಿಂದ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಮಾಜಿ ಸಚಿವ ಸಿ ಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಮತ್ತೊಮ್ಮೆ ಮೋದಿ ಪ್ರಧಾನಿ ಆಗಲು ಗದ್ದಿಗೌಡರಿಗೆ ಮತ ಹಾಕಿ – ಸಿಟಿ ರವಿ..!
ಈ ಸಂಬಂಧ ಮಾತನಾಡಿದ ಅವರು, ಶಾಸಕರ ಸಂಬಳ ಎರಡು, ಮೂರು ತಿಂಗಳಿಗೊಮ್ಮೆ ಆಗ್ತಾ ಇದೆ, ನಾವೂ ಸಂತ್ರಸ್ಥರೇ ಈ ಸರ್ಕಾರದಲ್ಲಿ. ಮೊದಲಿನಿಂದ ನಾವು ಹೇಳುತ್ತಾ ಬಂದಿದ್ದೇವೆ ಬಡವರಿಗೆ ಭಾಗ್ಯಗಳನ್ನು ಕೊಡೋದಕ್ಕೆ ನಮ್ಮ ವಿರೋಧ ಇಲ್ಲ. ದಕ್ಷ ಹಣಕಾಸು ಸಚಿವರಾಗಿ ಸಿಧ್ಧರಾಮಯ್ಯನವರು ಕೆಲಸ ಮಾಡಿದವರು. ಭಾಗ್ಯಗಳನ್ನು ಕೊಡೋವಾಗ ಅದಕ್ಕೆ ತಗಲುವ ವೆಚ್ಚ ಎಷ್ಟು?
ಈ ಬಾರಿ ಅಧಿಕಾರಕ್ಕಾಗಿ ಅವರು ಯಾಕೆ ಕಾಂಪ್ರಮೈಸ್ ಆದ್ರು ಅರ್ಥ ಆಗ್ತಿಲ್ಲ. ಸಿಧ್ಧರಾಮಯ್ಯ ಅವರನ್ನು ನಾನು ಬಹಳ ಹತ್ತಿರದಿಂದ ಬಲ್ಲೆ ಅವರಿಗೆ ನನ್ನ ಬಗ್ಗೆ ಅಪಾರ ಗೌರವ ಇದೆ, ಅವರಿಗೂ ನನ್ನ ಬಗ್ಗೆ ಅಪಾರ ಗೌರವ ಇದೆ. ಭಾಗ್ಯಗಳಿಗೆ ತಗುಲೋ ವೆಚ್ಚ ಮತ್ತು ರಾಜ್ಯದ ಬೊಕ್ಕಸಕ್ಕೆ ಎಷ್ಟು ಹಣ ಬಂದು ಬೀಳತ್ತೆ ಅನ್ನೋದನ್ನ ನೋಡಬೇಕಿತ್ತು. ಬೊಮ್ಮಾಯಿಯವರು ಅಧಿಕಾರದಿಂದ ಕೆಳಗೆ ಇಳಿಯಬೇಕಾದ್ರೆ 25 ಸಾವಿರ ಕೋಟಿ ಅನುದಾನ ನಮ್ಮ ಖಜಾನೆಯಲ್ಲಿ ಇತ್ತು. ಅದು ಖಾಲಿಯಾಗಿ 1 ಲಕ್ಷ 85 ಸಾವಿರ ಕೋಟಿಯಷ್ಟು ಸಾಲ ಮಾಡಿದ್ದಾರೆ. ಬಸ್ ಫ್ರೀ ಅಂದ್ರು, 10 ಬಸ್ ಓಡಾಡೋ ಜಾಗದಲ್ಲಿ ನಾಲ್ಕೇ ಬಸ್ ಓಡಾಡ್ತವೆ. ಕೆಟ್ಟ ಬಸ್ ಗಳನ್ನು ರಿಪೇರಿ ಮಾಡಲು ದುಡ್ಡಿಲ್ಲ. ಕಂಡಕ್ಟರ್ ಮತ್ತು ಡ್ರೈವರ್ ಗಳ ಸಂಬಳ ಇಲ್ಲ. ಶಾಸಕರ ಸಂಬಳ ಕೂಡಾ ಪ್ರತಿ ತಿಂಗಳು ಆಗ್ತಿಲ್ಲ. ಎರಡು, ಮೂರು ತಿಂಗಳಿಗೊಮ್ಮೆ ಆಗ್ತಾ ಇದೆ. ನಾವೂ ಸಂತ್ರಸ್ಥರೇ ಈ ಸರ್ಕಾರದಲ್ಲಿ ಸಂತ್ರಸ್ಥರೇ.. ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದರು.
ಇನ್ನೂ ಭಾಗ್ಯಗಳ ಬಗ್ಗೆ ಅಭಿಮಾನದಿಂದ ಹೇಳ್ತಾರೆ. ಸಿಧ್ಧರಾಮಯ್ಯನವರು ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತ ಪತ್ರ ಹೊರಡಿಸಲಿ. ಹಣಕಾಸು ಸ್ಥಿತಿ ಸುಭದ್ರ ಅಂತಾರೆ ರೈತರ ಹಾಲಿನ ಸಬ್ಸಿಡಿ ಪೆಂಡಿಂಗ್ ಇಟ್ಟಿದ್ದಾರೆ. ಸರ್ಕಾರದ ಖಜಾನೆ ಖಾಲಿಯಾಗಿದೆ. ಅಕ್ಷರಶಃ ಪಾಕಿಸ್ಥಾನದಕ್ಕಿಂತ ಕಡೆ ಆಗಿದ್ದಾವೆ ಕರ್ನಾಟಕ ರಾಜ್ಯದ್ದು. ಈಗ ಮತ್ತೆ ಗೆದ್ದು ಬರೋದಿಲ್ಲ ಅಂದ ಮೇಲೆ ಮತ್ತೆ ಏನಾದ್ರೂ ಘೋಷಣೆ ಕೂಗೋದು. ಹಿಂದೆ ನಮ್ಮ ಕಡೆ ಗರ್ದಿ ಗಮ್ಮತ್ತು ಅಂತಾ ಆಡಿಸೋರು ಬರ್ತಿದ್ರು. ಬಿಜಾಪುರ ನೋಡ್ರಿ, ಗೋಳಗುಮ್ಮಟ ನೋಡ್ರಿ, ಆಗ್ರಾದ ತಾಜಮಹಲ್ ನೋಡಿ ಅಂತಾ ಅದು ಮೂರೇ ನಿಮಿಷದ್ದು. ಮತ್ತೆ ಅವ ಡಬ್ಬಿ ತಗೊಂಡು ಹೋದ ಮೇಲೆ ನಾವು ನೀವು ಅಷ್ಟೇ.. ಹಾಗೆನೇ ಕಾಂಗ್ರೆಸ್ ನವರು,,ಒಂದು ಲಕ್ಷ ಕೊಡ್ತೀನಿ ಅಂತಾರೆ. 272 ಜನರನ್ನ ಚುನಾವಣೆಗೇನೇ ನಿಲ್ಲಿಸಿಲ್ಲ. ಜನರ ತಾಯಂದಿರ ದಾರಿ ತಪ್ಪಿಸೋದು. ಇಂತಹ ವಂಚನೆ ಮಾಡೋ ಪಕ್ಷದ ಕಡೆ ಅಧಿಕಾರ ಹೋದ್ರೆ ದೇಶ ಏನಾಗತ್ತೆ. ರಾಹುಲ್ ಗಾಂಧಿ ದೇಶದ ಹೊರಗೆ ಭಾರತದ ಬಗ್ಗೆ ಒಂದಾದ್ರೂ ಹೆಮ್ಮೆಯ ಮಾತಾಡಿದ್ದಾರಾ ಜೀವನದಲ್ಲಿ? 23 ರಿಂದ 24 ಸ್ಥಾನ ನಾವು ಮುಟ್ಟುತ್ತೇವೆ ಎಂದರು.