Author: AIN Author

ಕುದಿಯಲು ಇರಿಸಿದಾಗ ಮೊಟ್ಟೆಗಳು ಒಡೆಯುತ್ತವೆ ಅಥವಾ ಬಿರುಕು ಬಿಡುತ್ತವೆ. ಇದು ಅನೇಕ ಜನರು ದೂರು. ಇದರಿಂದ ಮೊಟ್ಟೆಯ ಆಕಾರ ಕೆಡುವುದಲ್ಲದೆ, ರುಚಿಯೂ ಹಾಳಾಗುತ್ತದೆ. ಹಾಗಾಗಿ ಮೊಟ್ಟೆಗಳನ್ನು ಬೇಯಿಸಲು ಸರಿಯಾದ ಮಾರ್ಗವಾಗಿದೆ, ಅದರಿಂದ ಸಿಪ್ಪೆಗಳು ಸುಲಭವಾಗಿ ಹೊರಬರುತ್ತವೆ https://ainlivenews.com/tomorrows-fight-against-gujarat-this-is-what-rcbs-playing-11-will-look-like/ ನೀವು ಸಹ ಈ ಸಮಸ್ಯೆಯನ್ನು ಎದುರಿಸಿದರೆ, ಮೊಟ್ಟೆಗಳು ಏಕೆ ಒಡೆಯುತ್ತವೆ ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಬೇಕು. ವಾಸ್ತವವಾಗಿ, ಮೊಟ್ಟೆಗಳು ಬಿಸಿನೀರಿನ ಶಾಖದಿಂದಾಗಿ ಕುದಿಯುತ್ತವೆ. ನಿರಂತರವಾಗಿ ಪರಸ್ಪರ ಒಡೆಯಲು ಪ್ರಾರಂಭವಾಗುತ್ತೆ. ಇದರಿಂದ ಮೊಟ್ಟೆಯ ಮೇಲಿನ ಮೇಲ್ಮೈ ಒಡೆಯುತ್ತದೆ. ಹೀಗಿರುವಾಗ ಬೇಯಿಸಲು ಹೋದರೆ ಖಂಡಿತ ಮೊಟ್ಟೆಗಳು ಜಿಗಿಯುತ್ತವೆ, ಇದರಿಂದ ಡಿಕ್ಕಿ ಹೊಡೆಯುತ್ತವೆ ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕುದಿಸುವಾಗ ಮೊಟ್ಟೆಗಳು ಒಡೆಯದಂತೆ ಮತ್ತು ಅವುಗಳ ರುಚಿ ಚೆನ್ನಾಗಿ ಉಳಿಯಲು ಅನೇಕ ಜನರು ಏನು ಮಾಡುತ್ತಾರೆ, ಇದಕ್ಕೆ ಉತ್ತರ ತುಂಬಾ ಸರಳವಾಗಿದೆ. ಮೊಟ್ಟೆಗಳನ್ನು ಕುದಿಸಲು ಮೊದಲು ನೀರನ್ನು ಬಿಸಿ ಮಾಡಬೇಡಿ. ಮೊದಲನೆಯದಾಗಿ, ಮೊಟ್ಟೆಗಳನ್ನು ನಿಧಾನವಾಗಿ ಪಾತ್ರೆಯಲ್ಲಿ ಇರಿಸಿ. ಇದರ ನಂತರವೇ ಪಾತ್ರೆಗೆ ನೀರು ಸೇರಿಸಿ.…

Read More

RCB ತಂಡ ಭಾನುವಾರ ಗುಜರಾತ್ ಟೈಟಾನ್ಸ್​ ವಿರುದ್ಧ ಕಣಕ್ಕಿಳಿಯಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಆರ್​ಸಿಬಿ ತನ್ನ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿಲ್ಲ https://ainlivenews.com/sardar-congress-party-of-mugs-suresh-kumar-satire/ ಏಕೆಂದರೆ ಕಳೆದ ಪಂದ್ಯದಲ್ಲಿ ಆರ್​ಸಿಬಿ ತಂಡವು ಎಸ್​ಆರ್​ಹೆಚ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಹೀಗಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೂ ಅದೇ ಪ್ಲೇಯಿಂಗ್ ಇಲೆವೆನ್ ಅನ್ನು ಕಣಕ್ಕಿಳಿಸಲಿದೆ ಎಂದೇ ಹೇಳಬಹುದು. ಅದರಂತೆ ಗುಜರಾತ್ ಟೈಟಾನ್ಸ್​​​ ವಿರುದ್ಧದ ಪಂದ್ಯಕ್ಕೆ ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ… ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ವಿಲ್ ಜಾಕ್ಸ್, ರಜತ್ ಪಾಟಿದಾರ್, ಕ್ಯಾಮರೋನ್ ಗ್ರೀನ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೋಮ್ರರ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಲಾಕಿ ಫರ್ಗುಸನ್, ಯಶ್ ದಯಾಳ್, ಸ್ವಪ್ನಿಲ್ ಸಿಂಗ್,

Read More

ಬಳ್ಳಾರಿ:- ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ. https://ainlivenews.com/tribute-to-the-dead-citizens-the-poster-that-touched-the-heat-for-those-who-did-not-vote/ ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷ ತಮ್ಮ ಚಿಹ್ನೆ ಬದಲು ಮಾಡಿದ್ದಾರೆಯೇ? ಹಸ್ತದ ಬದಲು ಚೊಂಬು ಸಿಂಬಲ್ ಮಾಡಿಕೊಂಡಿದ್ದಾರೆ. ರಾಹುಲ್ ಭಾಷಣದಲ್ಲಿ ಹಸ್ತದ ಚಿಹ್ನೆ ಬದಲು ಚೊಂಬು ತೋರಿಸುತ್ತಿರುವ ಹಿನ್ನೆಲೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆಯೇ ಎಂದರು. ರಾಹುಲ್ ಹೋದಲ್ಲಿ ಬಂದಲ್ಲಿ ಚೊಂಬು ಹಿಡಿದುಕೊಂಡಿದ್ದಾರೆ. ರಾಜ್ಯದಲ್ಲಿ ಚೊಂಬುಗಳ ಗುತ್ತಿಗೆ ಪಡೆದಿರುವ ಮತ್ತು ಇದೀಗ ಜನರಿಗೆ ಚೆಂಬು ನೀಡುವ ಪಕ್ಷವೆಂದರೆ ಅದು ಕಾಂಗ್ರೆಸ್. ಅಭಿವೃದ್ಧಿ ಕಾರ್ಯಕ್ಕೆ ಹಣ ನೀಡದೆ ರಾಜ್ಯದ ಜನರಿಗೆ ಚೊಂಬು ನೀಡಿದ್ದಾರೆ. ಹತ್ತು ತಿಂಗಳಿಂದ ಒಬ್ಬರಿಗೆ ನಿರುದ್ಯೋಗಿ ಭತ್ಯೆ ನೀಡಿಲ್ಲ. ಯುವಕರಿಗೆ ಕಾಂಗ್ರೆಸ್ ಚೊಂಬು‌ ನೀಡಿದೆ. ರೈತರಿಗೆ ನೀಡುವ ಹಣ ಕೂಡ ಸಂಪೂರ್ಣ ನಿಲ್ಲಿಸಿ ರೈತರಿಗೆ ಚೊಂಬು ನೀಡಿದೆ. ಮಹಿಳೆಯರಿಗೆ ಉಚಿತ ಬಸ್ ಎಂದು‌ ಕೆಂಪು ಬಸ್ ಸೀಮಿತ ಮಾಡಿದ್ರು ಬಸ್ ಕಡಿಮೆ ಮಾಡಿದ್ರು, ಸಾರಿಗೆ ದರ ಹೆಚ್ಚು ಮಾಡಿ ಚೊಂಬು ನೀಡಿದರು. ಕರೆಂಟ್…

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿ ಅತೀ ಕಡಿಮೆ ವೋಟಿಂಗ್ ದಾಖಲಾಗಿದ್ದು, ಬೆಂಗಳೂರಿಗರ ಬೇಜವಾಬ್ದಾರಿಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದೀಗ ಬೆಂಗಳೂರಿನಲ್ಲಿ ವೋಟ್ ಮಾಡದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಬ್ಯಾನರ್‌ಗಳು ರಾರಾಜಿಸುತ್ತಿವೆ. https://ainlivenews.com/sitting-mp-pc-gaddigowda-has-zero-achievements/ ನಿನ್ನೆ ಮೊದಲ ಹಂತದ ಚುನಾವಣೆಯಲ್ಲಿ ಬೆಂಗಳೂರಿನಲ್ಲೇ ಅತೀ ಕಡಿಮೆ ಮತದಾನ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಶೇಕಡಾ 67.28 ವೋಟಿಂಗ್ ದಾಖಲಾಗಿದ್ದರೆ, ಬೆಂಗಳೂರು ಕೇಂದ್ರದಲ್ಲಿ 52.81ರಷ್ಟು ವೋಟಿಂಗ್, ಬೆಂಗಳೂರು ಉತ್ತರದಲ್ಲಿ 54.42ರಷ್ಟು ಮತದಾನ ದಾಖಲಾಗಿದೆ. ಇದು 14 ಕ್ಷೇತ್ರಗಳ ಪೈಕಿ ಅತ್ಯಂತ ಕಡಿಮೆ ಮತದಾನವಾಗಿದೆ ರಾಜಧಾನಿ ಬೆಂಗಳೂರು ವಲಸೆ ನಿವಾಸಿಗಳ ವಿರುದ್ಧ ಇಲ್ಲಿನ ನಾಗರಿಕರು ಕಿಡಿಕಾರಿದ್ದಾರೆ. ಪ್ರತೀ ಸಲದ ಚುನಾವಣೆಯಂತೆ ಈ ಬಾರಿ ಚುನಾವಣೆಗೂ ಬೆಂಗಳೂರಿನ ವಲಸಿಗರು ಕೈಕೊಟ್ಟಿದ್ದಾರೆ. ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ಹೆಸರಿದ್ದೂ, ಇಲ್ಲಿ ಮತದಾನ ಮಾಡುವ ಹಕ್ಕಿದ್ರೂ ವೋಟ್ ಮಾಡದಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿದ್ದೂ, ಬೆಂಗಳೂರಿನಲ್ಲಿ ಮತದಾನದ ಹಕ್ಕಿದ್ದರೂ ವೋಟ್ ಮಾಡದವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕಲಾಗಿದೆ. ಬದುಕಿದ್ದು ಸತ್ತಂತೆ ವರ್ತಿಸಿ ಮತದಾನ ಮಾಡದಿರೋದಕ್ಕೆ ಬೇಸರ…

Read More

ಬಾಗಲಕೋಟೆ:-ಹಾಲಿ ಸಂಸದ ಪಿ ಸಿ ಗದ್ದಿಗೌಡರ ಸಾಧನೆ ಝೀರೋ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಎಸ್ ಆರ್ ಎ ಕಾಲೇಜ್ ಕ್ರೀಡಾಂಗಣ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದರು. ಸುಳ್ಳಿನ ರಾಜಕಾರಣ ಮಾಡುತ್ತಿರುವುದು ಬಿಜೆಪಿ. 5 ಗ್ಯಾರಂಟಿಗಳನ್ನು ಘೋಷಣೆ ಮಾಡಿ ನುಡಿದಂತೆ ನಡೆದಿರುವುದು ಯಾವುದಾದರೂ ಪಕ್ಷ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ನರೇಂದ್ರ ಮೋದಿಯವರು ಸುಳ್ಳಿನ ರಾಜಕಾರಣ ಮಾಡ್ತಾ ಇದ್ದಾರೆ. ನಮ್ಮ ರಾಜ್ಯಕ್ಕೆ ಬರಬೇಕಾಗಿರುವ ತೆರಿಗೆಯನ್ನು ಕೊಟ್ಟಿಲ್ಲ. ನಮ್ಮ ರೈತರಿಗೆ ಸಿಗಬೇಕಾದಂತ ಸೌಲಭ್ಯಗಳನ್ನು ಕೇಂದ್ರದಿಂದ ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷದಿಂದ ಸಂಯುಕ್ತ ಪಾಟೀಲ್ ಅವರನ್ನು ಗೆಲ್ಲಿಸಿ ಬಾಗಲಕೋಟೆ ಜಿಲ್ಲೆ ಸಾಕಷ್ಟು ಅಭಿವೃದ್ಧಿಗಳನ್ನು ಮಾಡ್ತೀವಿ ಎಂದರು. ಸುಳ್ಳಿಗೆ ಬೆಲೆ ಕೊಡದೆ ಕಾಂಗ್ರೆಸ್ ಪಕ್ಷ ಕೆಲಸ ಮಾಡಿದೆ ಆದ್ದರಿಂದ ನಮಗೆ ಆಶೀರ್ವಾದ ಮಾಡಿ ನಿಮ್ಮ ಮಾತಿಗೆ ತಪ್ಪದೆ ಕಾಂಗ್ರೆಸ್ ಪಕ್ಷ ಕೆಲಸ ಮಾಡುತ್ತದೆ ಇದು ಕಾಂಗ್ರೆಸ್ ಬರವಸೆ. ಸಂಸತ್ತಿನಲ್ಲಿ ಪಿ ಸಿ ಗದ್ದಿಗೌಡರ ಕರ್ನಾಟಕಕ್ಕೆ ಬರಬೇಕಾದಂತ ತೆರಿಗೆ ಬಗ್ಗೆ…

Read More

ಚಾಮರಾಜನಗರ:- ಮತಗಟ್ಟೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರದ ಒಂದು ಮತಗಟ್ಟೆಗೆ ಎ.29ರಂದು ಮರುಮತದಾನ ನಡೆಯಲಿದೆ. https://ainlivenews.com/eat-only-one-clove-of-garlic-every-night-see-the-miracle-in-the-body/#google_vignette ಜಿಲ್ಲೆಯ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಮತಗಟ್ಟೆಯಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ ನೀಡಿದೆ. ಚುನಾವಣೆ ಬಹಿಷ್ಕರಿಸಿ ಗ್ರಾಮಸ್ಥರು ಮತಗಟ್ಟೆಯ ಮೇಲೆ ದಾಳಿ ಮಾಡಿ ಮತಗಟ್ಟೆಯನ್ನು ಪುಡಿಗುಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮತದಾನ ಸ್ಥಗಿತಗೊಂಡಿತ್ತು. ಈ ಮತಗಟ್ಟೆಗೆ ಎ.29 ರಂದು ಬೆಳಗ್ಗೆ 7.00 ರಿಂದ ಸಂಜೆ 6.00 ರವರೆಗೆ ಮರುಮತದಾನ ನಡೆಯಲಿದೆ. ಹನೂರಿನ ಮತಗಟ್ಟೆ ಸಂಖ್ಯೆ 146 ರಲ್ಲಿ ಈ ಘಟನೆ ಸಂಭವಿಸಿತ್ತು. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕೊರತೆ ಹಿನ್ನಲೆಯಲ್ಲಿ ಮತ ಬಹಿಷ್ಕಾರಕ್ಕೆ ಮುಂದಾಗಿದ್ದರು. ಇದನ್ನು ಅರಿತ ತಹಸೀಲ್ದಾರ್ ಗುರುಪ್ರಸಾದ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ರವರು ಮತದಾರರನ್ನು ಮನವೊಲಿಸಲು ಮುಂದಾದರು. ಮತ ಚಲಾವಣೆಗೆ ಬಂದ ಮತದಾರರನ್ನು ಕಂಡು ಕೆರಳಿದ ಮತ್ತೊಂದು ಗುಂಪಿನವರು…

Read More

ಬೆಳ್ಳುಳ್ಳಿಯ ರಂಜಕ, ಸತು, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ. ಹಾಗಾಗಿ ಬೆಳ್ಳುಳ್ಳಿ ಅನೇಕ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ಅಂತ ಹೇಳಬಹುದು. ಅದರಲ್ಲೂ ಈ ಬೆಳ್ಳುಳ್ಳಿಯನ್ನು ರಾತ್ರಿ ಹೊತ್ತು ತಿಂದರೆ ಇನ್ನೂ ಒಳ್ಳೆಯದಂತೆ ಅಂತ ಹೇಳಲಾಗುತ್ತಿದೆ. https://ainlivenews.com/again-a-huge-upset-for-hardik-pade-mumbai-against-delhi-exciting-win/ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ: ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಸಂಯುಕ್ತವಿರುವುದರಿಂದ ಆಂಟಿಮೈಕ್ರೋಬಿಯಲ್ ಗುಣವನ್ನು ಹೊಂದಿರುತ್ತದೆಯಂತೆ. ಇದು ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆಯಂತೆ. ಈ ಅಂಶ ದೇಹದಲ್ಲಿ ಆಗುವಂತಹ ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುವುದರೊಂದಿಗೆ ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಇದು ಬಲಪಡಿಸುತ್ತದೆ ಅಂತೆ. ಬೆಳ್ಳುಳ್ಳಿ ಉತ್ಕರ್ಷಣ ನಿರೋಧಕವಾಗಿದೆ: ಬೆಳ್ಳುಳ್ಳಿಯು ಉತ್ಕರ್ಷಣ ನಿರೋಧಕವಾಗಿರುವುದರಿಂದ ದೇಹಕ್ಕೆ ತಗಲುವ ಕಾಯಿಲೆಗಳ ವಿರುದ್ಧ ಇದು ಸಮರ್ಥವಾಗಿ ಹೋರಾಡುತ್ತದೆ. ಇದು ಫ್ರೀರಾಡಿಕಲ್‌ಗಳಿಂದ ಉಂಟಾಗಬಹುದಾದ ಅನೇಕ ರೋಗಗಳನ್ನು ತಡೆಗಟ್ಟುತ್ತದೆ. ಆದ್ದರಿಂದ ಬೆಳ್ಳುಳ್ಳಿಯ ಎಸಳನ್ನು ಪ್ರತಿದಿನ ರಾತ್ರಿ ತಿನ್ನುವುದು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ. ಬೆಳ್ಳುಳ್ಳಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಹಸಿ ಬೆಳ್ಳುಳ್ಳಿಯನ್ನು ಆಹಾರದಲ್ಲಿ ಸೇರಿಸುವುದರಿಂದ ಜೀರ್ಣಕಾರಿ ಸಂಬಂಧಿತ ಸಮಸ್ಯೆಗಳು ಸುಧಾರಿಸುತ್ತವೆ. ಇದು ಕರುಳಿಗೆ ಪ್ರಯೋಜನವನ್ನು…

Read More

ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಇಂದು IPL ಪಂದ್ಯ ನಡೆದಿದ್ದು, ಮುಂಬೈ ವಿರುದ್ಧ ಡಿಸಿ ಜಯ ಸಾಧಿಸಿದೆ. ಈ ಮೂಲಕ ಮತ್ತೆ ಹಾರ್ದಿಕ್ ಪಡೆ ಮುಖಭಂಗ ಅನುಭವಿಸಿದ್ದಾರೆ. https://ainlivenews.com/fight-between-two-families-sinners-who-killed-3-year-old-kandamma/ ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್​ ಪಾಂಡ್ಯ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡರು. ಆದರೆ ಡೆಲ್ಲಿ ತಂಡ ಭರ್ಜರಿ ಬ್ಯಾಟಿಂಗ್​ ಮಾಡುವ ಮೂಲಕ ನಿಗದಿತ 20 ಓವರ್​ಗೆ 4 ವಿಕೆಟ್ ನಷ್ಟಕ್ಕೆ 257 ರನ್​ ಗಳಿಸುವ ಮೂಲಕ ಅಬ್ಬರಿಸಿದರು. ಈ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್​ ತಂಡವು ನಿಗದಿತ 20 ಓವರ್​ಗೆ 9 ವಿಕೆಟ್ ನಷ್ಟಕ್ಕೆ 247 ರನ್​ ಗಳಿಸುವ ಮೂಲಕ 10 ರನ್​ ಗಳಿಂದ ಸೋಲನ್ನಪ್ಪಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಡೆಲ್ಲಿ ತಂಡವು ಮುಂಬೈಗೆ 258 ರನ್​ ಗಳ ಬೃಹತ್​ ಟಾರ್ಗೆಟ್ ನೀಡಿತು. ಈ ದೊಡ್ಡ ಮೊತ್ತದ ರನ್​ ಚೇಸ್​​ ಆರಂಭಿಸಿದ ಮುಂಬೈಗೆ ಆಘಾತ ಎದುರಾಯಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​ ಶರ್ಮಾ 8…

Read More

ಅಥಣಿ:- ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ನಡೆದ ಮಾರಾಮಾರಿಯಲ್ಲಿ 3 ವರ್ಷದ ಕಂದಮ್ಮನನ್ನು ಪಾಪಿಗಳು ಕೊಂದ ಘಟನೆ ಜರುಗಿದೆ. https://ainlivenews.com/bjp-leader-for-bommai-anil-menesinakai-vote-hunting/ ಎರಡು ಕುಟುಂಬಗಳ ನಡುವೆ ಜಗಳ ನಡೆಯುತ್ತಿದ್ದ ವೇಳೆ 3 ವರ್ಷದ ಮಗುವಿನ ಎದೆಯ ಮೇಲೆ ಕಾಲಿಟ್ಟಿದ್ದಾರೆ. ಈ ವೇಳೆ ಮಗು ಮೃತಪಟ್ಟಿದೆ ಅಂತ ತಿಳಿದು ಬಂದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿದೆ. ಹಣಕಾಸಿನ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳ ನಡೆದಿದೆ. ಈ ಎರಡು ಕುಟುಂಬಗಳ ನಡುವಿನ ಜಗಳದಲ್ಲಿ 3 ವರ್ಷದ ಮಗುವಿನ ಎದೆ ಮೇಲೆ ಕಾಲಿಟ್ಟು ಕೊಲ್ಲಲಾಗಿದೆ. 3 ವರ್ಷದ ಶ್ರೀನಿಧಿ ಕಾಡಪ್ಪ ಕಾಳಾಪಾಟೀಲ್ ಎಂಬ ಬಾಲಕಿ ಎದೆ ಮೇಲೆ ಪಾಪಿಗಳು ಕಾಲಿಟ್ಟಿದ್ದಾರೆ. ಈ ವೇಳೆ ಬಾಲಕಿ ಮೃತಪಟ್ಟಿದ್ದಾಳೆ. ಜೋತಿಭಾ ತುಕಾರಾಮ ಬಾಬಾಬರ ಎಂಬುವನ ಮೇಲೆ ಬಾಲಕಿ ಕೊಂದ ಆರೋಪ ಕೇಳಿ ಬಂದಿದೆ. ಎರಡು ಕುಟುಂಬಗಳ ನಡುವಿನ ಜಗಳ ತಾರಕಕ್ಕೇರಿ, ಜೋತಿಭಾ…

Read More

ಗದಗ:- ಹಾವೇರಿ-ಗದಗ ಲೋಕಸಭಾ ಬಿಜೆಪಿ ಅಬ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಮತಬೇಟೆ ಮಾಡಿದ್ದಾರೆ. ಗದಗ ನಗರದ ನಾಮಜೊಶಿ ರಸ್ತೆ, ಗ್ರೇನ್ ಮಾರ್ಕೆಟ್ ನಲ್ಲಿ ಮತಯಾಚನೆ ನಡೆಸಿದ್ದಾರೆ. https://ainlivenews.com/dharwad-district-towards-progress-from-decade-joshi/#google_vignette ಪ್ರತಿಯೊಂದು ಅಂಗಡಿ ಮಳಿಗೆಗಳಿಗೆ ತೆರಳಿ ಬೊಮ್ಮಾಯಿಯವರಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಬೀದಿ ಬದಿ ವ್ಯಾಪಾರಸ್ಥರಿಗೆ ಜಿಜೆಪಿ ಗೆಲ್ಲಿಸುವಂತೆ ಮನವಿ ಮಾಡಿದ್ದು, ದೇಶದ ಉಳಿವಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಅನಿಲ್ ಮತಯಾಚನೆ ಮಾಡಿದರು. ಅನಿಲ್ ಗೆ ಮುಖಂಡ ವಸಂತ ಪಡಗದ, ಇರ್ಷಾದ್ ಮಾನ್ವಿ, ಶರಣು ಚಿಂಚಲಿ, ಉಡಚಪ್ಪ ಸೇರಿದಂತೆ ಮುಖಂಡರು ಕಾರ್ಯಕರ್ತರು ಸಾಥ್ ಕೊಟ್ಟಿದ್ದಾರೆ.

Read More