ಹಾವೇರಿ: ಹಾವೇರಿ ನನಗೆ 30 ವರ್ಷದಿಂದ ಚಿರಪರಿಚಿತ. ಕಾಗಿನೆಲೆಯ ಮಹಾಸಂಸ್ಥಾನದ ಕೆಲಸ ಮಾಡಿದ್ದೇನೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪರ್ಧೆ ಮಾಡಿದ್ದು ಸಂತೋಷ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದರು. ನಗರದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕುರುಬರಿಗೆ ಟಿಕೆಟ್ ಕೊಟ್ಟಿಲ್ಲ, ವೋಟ್ ಯಾಕೆ ಕೇಳುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ನಲ್ಲಿ ಕುರುಬರಿಗೆ 2 ಟಿಕೆಟ್ ಕೊಟ್ಟಿದ್ದಾರೆ ನಿಜ, ಬಿಜೆಪಿಯಲ್ಲಿ ಒಂದೂ ಟಿಕೆಟ್ ಕೊಟ್ಟಿಲ್ಲ ಅನ್ನೋದು ನಿಜ. ಬಿಜೆಪಿಯವರು ವೋಟ್ ಯಾಕೆ ಕೇಳಬಾರದು. ಹಾಗಾದರೆ ಎಲ್ಲಾ ಜಾತಿಯವರಿಗೂ ಎಲ್ಲಾ ಪಕ್ಷಗಳು ಟಿಕೆಟ್ ನೀಡಿವಿಯೇ, ಕಾಂಗ್ರೆಸ್’ನವರು ರಾಜ್ಯದಲ್ಲಿರುವ ಎಲ್ಲಾ ವರ್ಗದವರಿಗೂ ಟಿಕೆಟ್ ಕೊಟ್ಟಿದ್ದಾರಾ?. ಹಾಗದರೆ ನೀವು ಬೇರೆ ಜಾತಿಯವರ ಮತ ಕೇಳಬೇಡಿ ಎಂದು ಹೆಚ್ ವಿಶ್ವನಾಥ್ ತಿರುಗೇಟು ನೀಡಿದರು.
ಬಿಸಿಲ ಉರಿಗೆ ಬೆಂದ ಜನರು.! ಬಿಸಿಲ ಬೇಗೆಯಿಂದ ಪಾರಾಗಲು ಹೀಗೆ ಮಾಡಿ ಸಾಕು..
ಹಾವೇರಿ ನನಗೆ 30 ವರ್ಷದಿಂದ ಚಿರಪರಿಚಿತ. ಕಾಗಿನೆಲೆಯ ಮಹಾಸಂಸ್ಥಾನದ ಕೆಲಸ ಮಾಡಿದ್ದೇನೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪರ್ಧೆ ಮಾಡಿದ್ದು ಸಂತೋಷ. ಬಹಳಷ್ಟು ಜನರು ಮುಖ್ಯಮಂತ್ರಿಗಳು ಲೋಕಸಭಾ ಚುನಾವಣೆಯಲ್ಲಿ ಹಿಂದೆ ಸ್ವರ್ಧೆ ಮಾಡಿದ್ದರು. ಕೇಂದ್ರ ಮಂತ್ರಿಗಳೂ ಆಗಿದ್ದರು. ಕರ್ನಾಟಕದ ಪರ ಬೊಮ್ಮಾಯಿ ಧ್ವನಿ ಲೋಕಸಭೆಯಲ್ಲಿ ಪ್ರತಿಧ್ವನಿಸಲಿ ಎಂದು ಹೇಳಿದರು.