ನಟಿ ಹರ್ಷಿಕಾ ಪೂಣಚ್ಚ ದಂಪತಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೇಳಿಕೆ ದಾಖಲಿಸಲು ಮತ್ತೆ ಪುಲಿಕೇಶಿ ನಗರ ಪೊಲೀಸ್ ಠಾಣೆಗೆ ನಟಿ ಹಾಜರಾದ್ದರು.
Breaking News: ಕೊಡಿಗೇಹಳ್ಳಿ ಒಂಟಿ ಮಹಿಳೆ ಕೊಲೆ ಕೇಸ್… ಆರೋಪಿ ಅರೆಸ್ಟ್!
ಹೇಳಿಕೆ ದಾಖಲಿಸಿದ ಬಳಿಕ ಹರ್ಷಿಕಾ ಹಾಗೂ ಭುವನ್ ಹೇಳಿಕೆ ನೀಡಿದ್ದು, ನಮ್ಮ ಮೇಲೆ ಹಲ್ಲೆಗೆ ಯತ್ನಿಸಿ ಗಲಾಟೆ ಮಾಡಿದ ಮೂವರನ್ನು ಗುರ್ತಿಸಿದ್ದೀವಿ. ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿಗಳನ್ನು ಪರಿಶೀಲನೆ ಮಾಡಿ ಕೆಲ ವ್ಯಕ್ತಿಗಳನ್ನು ತೋರಿಸಿದ್ದಾರೆ. ಅವರಲ್ಲಿ ಪ್ರಮುಖವಾಗಿ ನಮ್ಮ ಮೇಲೆ ಗಲಾಟೆ ಮಾಡಿದ ಮೂವರ ಮುಖವನ್ನು ಪತ್ತೆ ಮಾಡಿದ್ದೀವಿ. ಘಟನೆ ಬಗ್ಗೆ ಪೊಲೀಸರು , ನಮ್ ಬಳಿ ಹೇಳಿಕೆ ಪಡೆದಿದ್ದಾರೆ. ಪೊಲೀಸರ ತನಿಖೆ ಬಗ್ಗೆ ಖುಷಿ ಇದೆ, ಇಷ್ಟು ವೇಗವಾಗಿ ತನಿಖೆ ಮಾಡ್ತಾರೆ ಅನ್ಕೊಂಡಿರಲಿಲ್ಲ. ನಮಗೆ ಆದ ರೀತಿ ಬೇರೆ ಯಾರಿಗೂ ಆಗಬಾರದು ಅನ್ನೋ ಉದ್ದೇಶಕ್ಕೆ ದೂರು ಕೊಟ್ಟಿದ್ದೀವಿ. ಪೊಲೀಸರು ಆದಷ್ಟು ಬೇಗ ಆರೋಪಿ ಗಳನ್ನು ಬಂಧನ ಮಾಡುವ ಭರವಸೆ ನೀಡಿದ್ದಾರೆ. ನಾವು ಕೂಡ ತನಿಖೆಗೆ ಎಲ್ಲಾ ರೀತಿಯ ಸಹಾಯ ಮಾಡ್ತೀವಿ ಎಂದು ಹೇಳಿದ್ದಾರೆ.