ಹುಬ್ಬಳ್ಳಿ: ನಗರದ ನವನಗರದ ಮೈತ್ರೇಯಿ ಕಲ್ಚರಲ್ ಆಂಡ್ ಸೋಷಿಯಲ್ ಉಮೆನ್ಸ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಹುಬ್ಬಳ್ಳಿ ನವನಗರದಲ್ಲಿರುವ ಕಿಡ್ಸ್ ಪ್ಯಾರಡ್ಯೆಸ್ ಶಾಲೆಯಲ್ಲಿ ಮಹಿಳಾ ದಿನಾಚರಣೆಯ ಆಚರಿಸಲಾಯಿತು. ಅತಿಥಿಯಾಗಿ ಆಗಮಿಸಿದ ಸ್ತ್ರೀ ರೋಗ ತಜ್ಞೆ ಡಾ. ಗೀತಾ ಕಡಮನಹಳ್ಳಿ ಮಾತನಾಡಿ,ಮಹಿಳೆಯರ ಅರೋಗ್ಯಡಾ ಕುರಿತು ಸಲಹೆ ನೀಡಿದರು, ವಕೀಲರದ ಪಾರ್ವತಿ ಹುಬ್ಬಳ್ಳಿ ಇವರ ಮಹಿಳೆಯರಿಗೆ ಕಾನೂನು ಮಾಹಿತಿ ನೀಡಿದರು, ನವನಗರ ಪೊಲೀಸ್ ಪೇದೇ ಅನ್ನಪೂರ್ಣ ಡೊಳ್ಳಿನ್ ಮಾತನಾಡಿ,
ನಾಗರಿಕರ ಜಾಗರುಕತೆ ಹಾಗೂ ಪೊಲೀಸ್ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು, ಕ್ರೀಶಾಂತ್ ಅರ್ಗಾನಿಕ್ ಸ್ಪೈಸಿಸ್ ಆಂಡ್ ಫುಡ್ ಪ್ರಾಡಕ್ಟ್ ಸಂಸ್ಥಾಪಕರಾದ ಶೃತಿ ರೆಡ್ಡಿ ಇವರು ತಮ್ಮ ಉತ್ಪಾದನೆ ಹಾಗೂ ಮಹಿಳೆಯರು ಯಾವರೀತಿ ಉದ್ಯೋಗವನ್ನು ಮಾಡಿ ಸ್ವಾವಲಂಭಿಯಾಗಿ ಬದುಕಬೇಕು ಎಂದು ಹೇಳಿದರೂ,
ಅಲ್ಲದೆ ಸ್ಪರ್ಧೆಯಲ್ಲಿ ವಿಜೇತರದ ಮಹಿಳೆಯರಿಗೆ ತಮ್ಮ ಉತ್ಪನ್ನ ಗಳ್ಳನ್ನು ಬಹುಮಾನವಾಗಿ ವಿತರಿಸಿದರು.ಅಲ್ಲದೆ ಅಸೋಸಿಯೇಷನ ಪದಾಧಿಕಾರಿಗಳಾದ ಆಶಾ ಕುಲಕರ್ಣಿ, ಮಧು ತೋಡುರ್ಕರ್, ಅಶ್ವಿನಿ ಗುಮಾಸ್ತೇ, ಮೇಘನಾ ಠಕ್ಕಳಕಿ, ಹೇಮಾ ಕಿರೆಸೂರ್ ಹಾಗೂ ವೈಷ್ಣವಿ ಮಹಿಳಾ ಮಂಡಳದ ಅಧ್ಯಕ್ಷರಾದ ಭಾರತಿ ಡೊಳ್ಳಿನ್ ಉಪಸ್ಥಿತರಿದ್ದರು.