ಶಿರಸಿ: ಈ ಬಾರಿಯ ಲೋಕಸಭೆ ಚುನಾವಣೆ ದೇಶದ ಭವಿಷ್ಯ ಬರೆಯಲಿದೆ. ಇದು ಪಂಚಾಯತ್ ಚುನಾವಣೆ ಅಲ್ಲ. ಕಾಂಗ್ರೆಸ್ ಲೋಕಸಭಾ ಚುನಾವಣೆಯನ್ನ ಅತ್ಯಂತ ಕೆಳ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ. ಶೌಚಾಲಯ ನಾವು ಕಟ್ಟಿಸಿದರು ಕಾಂಗ್ರೆಸ್ ಇನ್ನೂ ಚಂಬು ತಗೊಂಡು ಹೋಗೋದು ಬಿಡಲಿಲ್ಲ.
ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವೂ ಆಗಲ್ಲ. ಘಟಬಂಧನ ದಿನಕೊಂದು ತಿರುವು ಪಡೆದುಕೊಳ್ಳುತ್ತಿದೆ. 2040ರಲ್ಲಿ ಅಭಿವೃದ್ಧಿ ಹೊಂದಿದ ಭಾರತ ಕನಸು ಇಟ್ಟುಕೊಂಡಿರುವ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕಿದೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
Small Saving: ಈ ಯೋಜನೆಯಲ್ಲಿ 417ರೂ. ಹೂಡಿಕೆ ಮಾಡಿದ್ರೆ ಮಿಲೇನಿಯರ್ ಆಗಬಹುದು..! ಹೇಗೆ ಗೊತ್ತಾ..?
ಇನ್ನೂ ಕಾಂಗ್ರೆಸ್ ಸರ್ಕಾರದಲ್ಲಿ ಜೀವಕ್ಕೂ ಗ್ಯಾರಂಟಿ ಇಲ್ಲ. ಜೀವ ಕಾಪಾಡುವ ಗ್ಯಾರಂಟಿ ಅಂದರೆ ಅದು ಮೋದಿ ಗ್ಯಾರಂಟಿ. ಜೆಡಿಎಸ್ ಮೈತ್ರಿಯಿಂದ ನಮ್ಮ ಶಕ್ತಿ ಹೆಚ್ಚಾಗಿದೆ. ನಾವು ಗೆಲ್ಲಬೇಕಾಗಿರುವುದು 400 ಕ್ಷೇತ್ರ. ನಾವು ಬೂತ್ನಲ್ಲಿ ಗೆಲ್ಲಬೇಕು. ನಾಳೆಯಿಂದ ನಿಮ್ಮ ನಿಮ್ಮ ಶಕ್ತಿ ಕೇಂದ್ರದಲ್ಲಿ ಛಲದಿಂದ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದರು.