ಶಿರಸಿ: ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನೇಹಾ ಕೋಲೆಯಾಯ್ತು. ಇದರಿಂದ ದೇಶದ ಜನರು ಚಿಂತಾಕ್ರಾಂತರಾಗಿದ್ದಾರೆ. ಇದಕ್ಕೆ ಕಾರಣ ಕಾಂಗ್ರೆಸ್ ಸರ್ಕಾರ. ಕಾಲೇಜು ಆವರಣದಲ್ಲಿ ಹಾಡುಹಗಲೇ ಕೊಲೆ ನಡೆಯುವುದ ಅಂದರೆ ಏನರ್ಥ. ಅವರಿಗೆ ಗೊತ್ತು ಕಾಂಗ್ರೆಸ್ ಪಕ್ಷ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು.
Small Saving: ಈ ಯೋಜನೆಯಲ್ಲಿ 417ರೂ. ಹೂಡಿಕೆ ಮಾಡಿದ್ರೆ ಮಿಲೇನಿಯರ್ ಆಗಬಹುದು..! ಹೇಗೆ ಗೊತ್ತಾ..?
2014ರ ಮೊದಲು ನೀವು ಪ್ರತಿದಿನ ದೇಶದಲ್ಲಿ ಬಾಂಬ್ ಸ್ಫೋಟದ ಸುದ್ದಿ ಕೇಳುತಿದ್ರಿ. ಆದರೆ 2014ರ ನಂತರ ಬಾಂಬ್ ಸ್ಫೋಟದ ಸುದ್ದಿ ಕೇಳಿದ್ದೀರಾ? ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಹೈಟೆಕ್ ಸಿಟಿಯಾದ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟವಾಯಿತು. ಇದನ್ನು ಸಿಲೆಂಡರ್ ಸ್ಫೋಟವೆಂದು ಕಾಂಗ್ರೆಸ್ ಹೇಳಿತು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.