ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ ಆವರಣದಲ್ಲಿ ನಡೆದಿರುವ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿಯವರು ಭಾಗಿಯಾಗಿದ್ದಾರೆ. ಪ್ರಧಾನಿ ಮೋದಿಯವರಿಗೆ ಕಾಳು ಮೆಣಸು ಏಲಕ್ಕಿ ಹಾರ ಹಾಕಿ, ಬೇಡರ ವೇಷದ ಪೇಟ ತೊಡಿಸಿ, ಮಾರಿಕಾಂಬಾ ಪ್ರತಿಮೆ ನೀಡಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ,ಪ್ರಧಾನಿ ನರೇಂದ್ರ ಮೋದಿಯವರು ಕನ್ನಡದಲ್ಲಿ ಮಾತು ಆರಂಭಿಸಿದರು. ಮೊದಲಿಗೆ ಶಿರಸಿ ಮಾರಿಕಾಂಬಾ, ಹುಬ್ಬಳ್ಳಿ ಸಿದ್ಧಾರೂಢ ಸ್ವಾಮೀಜಿಗೆ ವಂದಿಸಿದರು.
Small Saving: ಈ ಯೋಜನೆಯಲ್ಲಿ 417ರೂ. ಹೂಡಿಕೆ ಮಾಡಿದ್ರೆ ಮಿಲೇನಿಯರ್ ಆಗಬಹುದು..! ಹೇಗೆ ಗೊತ್ತಾ..?
ನಾನು ಗುಜುರಾತ ಮುಖ್ಯಮಂತ್ರಿಯಾಗಿದ್ದಾಗ, ನಾನು ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದೆ. ಆವಾಗಿನಿಂದ ಈವರಗೆ ನಾನು ಏನು ಬೇಡಿದ್ದೇನೆ ಅದನ್ನು ನೀವು ಸಾಕಷ್ಟು ಪ್ರಮಾಣದಲ್ಲಿ ನೀಡಿದ್ದೀರಿ. ಇಂತಹ ಬಿರು ಬಿಸಿಲಿನಲ್ಲಿ ನಿಂತು, ಕೂತು ಭಾಷಣ ಕೇಳುತ್ತಿದ್ದೀರಿ. ಇದಕ್ಕೆ ಪಕ್ಷದ ಪರವಾಗಿ ಕ್ಷಮೆ ಕೇಳುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.