ಬೆಳಗಾವಿ: ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ. ಸವದತ್ತಿ ಯಲ್ಲಮ್ಮ ದೇವಿ ಸ್ಮರಿಸಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಬೆಳಗಾವಿ ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ನಾನು ರಾಜ್ಯದ ಯಾವುದೇ ಮೂಲೆಗೆ ಹೋದರು, ಪಿರ್ ಏಕ್ ಬಾರ್ ಮೋದಿ ಘೋಷಣೆ ಕೇಳುತ್ತೇನೆ. ನಾವು ಛತ್ರಪತಿ ಶಿವಾಜಿ ಮಹರಾಜ ಮತ್ತು ಜಗಜ್ಯೋತಿ ಬಸವೇಶ್ವರರ ಅನುಯಾಯಿಗಳು ಎಂದರು.
ಇನ್ನೂ ಭಾರತ ಅಭಿವೃದ್ಧಿ ಹೊಂದುತ್ತಿದರೇ, ಪ್ರತಿ ಭಾರತೀಯನು ಸಂತೋಷ ಪಡುತ್ತಾನೆ. ಆದರೆ ಕಾಂಗ್ರೆಸ್ ಎಂದೂ ಸಂತಸ ಪಡುವುದಿಲ್ಲ. ಕಾಂಗ್ರೆಸ್ ಕೊರೊನಾ ವ್ಯಾಕ್ಸಿನ್ ಅನ್ನು ವಿರೋಧ ಮಾಡುತ್ತಿದೆ. ಬಿಜೆಪಿ ವ್ಯಾಕ್ಸಿನ್ ಅಂತ ಹೇಳಿತು. ಭಾರತದ ಸಫಲತೆಯನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಅದಲ್ಲದೆ ಕಾಂಗ್ರೆಸ್ ಸುಳ್ಳು ಹೇಳುತ್ತಾ, ಜನರ ವಿಶ್ವಾಸವನ್ನು ಕಳೆದುಕೊಂಡಿದೆ.
Small Saving: ಈ ಯೋಜನೆಯಲ್ಲಿ 417ರೂ. ಹೂಡಿಕೆ ಮಾಡಿದ್ರೆ ಮಿಲೇನಿಯರ್ ಆಗಬಹುದು..! ಹೇಗೆ ಗೊತ್ತಾ..?
ಕಾಂಗ್ರೆಸ್ ಮಹತ್ವದ ವಿಚಾರಗಳ ಬಗ್ಗೆ ಸುಳ್ಳು ಹೇಳುತ್ತಾ, ದೇಶದ ಲೋಕತಂತ್ರವನ್ನು ಹಾಳು ಮಾಡುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಕಾಂಗ್ರೆಸಿಗರು ಮಾನಸಿಕವಾಗಿ ಆಂಗ್ಲರ ಗುಲಾಮಿತನ ಭಾವದಿಂದ ಜೀವಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ವಾಗ್ದಾಳಿ ಮಾಡಿದರು.