ಚಾಮರಾಜನಗರ:– ಜಾನಪದ ತವರೂರಿನಲ್ಲಿ ಸಾಂಪ್ರಾದಾಯಿಕ ಮತಗಟ್ಟೆ ಸ್ಥಾಪಿಸಲಾಗಿದ್ದು, ಜಿಲ್ಲೆಯಲ್ಲಿ ಮತದಾರರ ಕಣ್ಮನ ಸೆಳೆದಿದೆ. ಚಾಮರಾಜನಗರ ತಾಲೂಕಿನ ರಾಮಸಮುದ್ರ ಬಡಾವಣೆಯಲ್ಲಿರುವ ಸಾಂಪ್ರದಾಯಿಕ ಮತಗಟ್ಡೆಯಲ್ಲಿ ಗೊರವರ ವಸ್ತ್ರ, , ತಬಲೆ ಹಾರ್ಮೋನಿಯಂ, ಕಂಸಾಳೆ, ತಂಬೂರಿ , ವಾದ್ಯದ ಸಾಮಗ್ರಿಗಳು, ಮಹಿಳೆಯರು ಬಳಸುವ ಸಾಮಗ್ರಿಗಳು ಗಮನ ಸೆಳೆದಿದೆ.
Lokasabha Election: ಮದ್ದೂರಿನ ಮತಗಟ್ಟೆಗೆ ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಭೇಟಿ…ಕದಲೂರು ಉದಯ್ ಸಾಥ್!
ಸಾಂಪ್ರದಾಯಿಕ ಮತಗಟ್ಟೆಯಲ್ಲಿ ಮತದಾರರನ್ನು ಸೆಳೆಯಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಖಡ್ಡಾಯ ಮತದಾನಕ್ಕಾಗಿ ಸಾಂಪ್ರದಾಯಿಕ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಸಾಂಪ್ರದಾಯಿಕ ಮತಗಟ್ಡೆಯಲ್ಲಿ ಕ್ಯೂನಲ್ಲಿ ನಿಂತು ಮಾತದಾರರು ಮತದಾನದಲ್ಲಿ ತೊಡಗಿದ್ದಾರೆ.
ಇನ್ನೂ ನಗರದಲ್ಲಿ ಮುಂಜಾನೆಯಿಂದಲೇ ಬಿರುಸಿನ ಮತದಾನ ನಡೆದಿದ್ದು, ಚಾಮರಾಜನಗರ ತಾಲೂಕಿನ ಕಸಬಾ ಹೋಬಳಿಯಲ್ಲಿ ಬಿರುಸಿನ ಮತದಾನ ನಡೆದಿದೆ. ರಾಮಸಮುದ್ರದ ಮತಗಟ್ಟೆ ಸಂಖ್ಯೆ 77 ಹಾಗೂ 82 ರಲ್ಲಿ ಮತದಾನ ಚುರುಕು ಗೊಂಡಿದೆ. ಬೆಳಿಗ್ಗೆಯಿಂದಲೆ ಸರಥಿ ಸಾಲಿನಲ್ಲಿ ನಿಂತು ಮತದಾನದಲ್ಲಿ ಪುರುಷರು ಹಾಗೂ ಮಹಿಳೆಯರು ತೊಡಗಿದ್ದಾರೆ.
ಮತದಾನಕ್ಕೆ ವೃದ್ದರಲ್ಲಿಯೂ ಉತ್ಸಾಹ ಹೆಚ್ಚಾಗಿದೆ. ಮತದಾನದ ವೇಳೆ ಬಿಗಿಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.