ಯಾದಗಿರಿ:- ಕುಡಿಯುವ ನೀರಿಗಾಗಿ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಜರುಗಿದೆ.
ನೀರಿನ ವಿಚಾರವಾಗಿ ಅಜ್ಜಿ ಜೊತೆ ಆರೋಪಿತರು ಜಗಳ ತೆಗೆದಿದ್ದಾರೆ. ಅಜ್ಜಿ ಜೊತೆ ಜಗಳ ಮಾಡಿದಕ್ಕೆ ಮೊಮ್ಮಗ ಮದ್ಯ ಪ್ರವೇಶ ಮಾಡಿ ನೀವು ಯಾಕೆ ಜಗಳ ಮಾಡಿದ್ದಿರಿ ಎಂದು ಪ್ರಶ್ನೆ ಮಾಡಿದ್ದಾನೆ.
ಪಶ್ನೆ ಮಾಡಿದಕ್ಕೆ ಸಂಬಂಧಿಕರಿಂದಲೇ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಹಣಮಂತ ಹಾಗೂ ಹಣಮವ್ವ ಸೇರಿ ಚಾಕು ಇರಿದು ಕೊಲೆ ಮಾಡಲಾಗಿದೆ.
ನಂದಕುಮಾರ ಕಟ್ಟಿಮನಿ ( 21)ಕೊಲೆಯಾದ ಯುವಕ ಎನ್ನಲಾಗಿದೆ. ಕೊಲೆಯಾದ ನಂದಕುಮಾರ ತಮ್ಮ ಅಜ್ಜಿ ಜೊತೆ ಜಗಳ ಮಾಡಿದಕ್ಕೆ ಆರೋಪಿತರಿಗೆ ಪ್ರಶ್ನೆ ಮಾಡಿದ್ದ. ಈ ವೇಳೆ ನಂದಕುಮಾರ ತಾಯಿಗು ಹಲ್ಲೆ ನಡೆಸಲಾಗಿದೆ.
ಹುಣಸಗಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.