ಬಾಗಲಕೋಟೆ:-ಹಾಲಿ ಸಂಸದ ಪಿ ಸಿ ಗದ್ದಿಗೌಡರ ಸಾಧನೆ ಝೀರೋ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಎಸ್ ಆರ್ ಎ ಕಾಲೇಜ್ ಕ್ರೀಡಾಂಗಣ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದರು.
ಸುಳ್ಳಿನ ರಾಜಕಾರಣ ಮಾಡುತ್ತಿರುವುದು ಬಿಜೆಪಿ. 5 ಗ್ಯಾರಂಟಿಗಳನ್ನು ಘೋಷಣೆ ಮಾಡಿ ನುಡಿದಂತೆ ನಡೆದಿರುವುದು ಯಾವುದಾದರೂ ಪಕ್ಷ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ನರೇಂದ್ರ ಮೋದಿಯವರು ಸುಳ್ಳಿನ ರಾಜಕಾರಣ ಮಾಡ್ತಾ ಇದ್ದಾರೆ. ನಮ್ಮ ರಾಜ್ಯಕ್ಕೆ ಬರಬೇಕಾಗಿರುವ ತೆರಿಗೆಯನ್ನು ಕೊಟ್ಟಿಲ್ಲ. ನಮ್ಮ ರೈತರಿಗೆ ಸಿಗಬೇಕಾದಂತ ಸೌಲಭ್ಯಗಳನ್ನು ಕೇಂದ್ರದಿಂದ ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷದಿಂದ ಸಂಯುಕ್ತ ಪಾಟೀಲ್ ಅವರನ್ನು ಗೆಲ್ಲಿಸಿ ಬಾಗಲಕೋಟೆ ಜಿಲ್ಲೆ ಸಾಕಷ್ಟು ಅಭಿವೃದ್ಧಿಗಳನ್ನು ಮಾಡ್ತೀವಿ ಎಂದರು.
ಸುಳ್ಳಿಗೆ ಬೆಲೆ ಕೊಡದೆ ಕಾಂಗ್ರೆಸ್ ಪಕ್ಷ ಕೆಲಸ ಮಾಡಿದೆ ಆದ್ದರಿಂದ ನಮಗೆ ಆಶೀರ್ವಾದ ಮಾಡಿ ನಿಮ್ಮ ಮಾತಿಗೆ ತಪ್ಪದೆ ಕಾಂಗ್ರೆಸ್ ಪಕ್ಷ ಕೆಲಸ ಮಾಡುತ್ತದೆ ಇದು ಕಾಂಗ್ರೆಸ್ ಬರವಸೆ. ಸಂಸತ್ತಿನಲ್ಲಿ ಪಿ ಸಿ ಗದ್ದಿಗೌಡರ ಕರ್ನಾಟಕಕ್ಕೆ ಬರಬೇಕಾದಂತ ತೆರಿಗೆ ಬಗ್ಗೆ ಯಾವತ್ತಾದರೂ ಮಾತನಾಡಿದ್ದಾರಾ ಹೇಳಿ, ಸುಳ್ಳಿನ ಕಂತಿಯಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಅದಕ್ಕೆ ಕಿವಿ ಕೊಡದೆ ಬಾಗಲಕೋಟೆ ಲೋಕಸಭಾ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಅವರನ್ನು ಗೆಲ್ಲಿಸಿ ನಿಮ್ಮ ಜಿಲ್ಲೆ ಅಭಿವೃದ್ದಿಯಾಗುತ್ತದೆ. ಕರ್ನಾಟಕದ ಪ್ರತಿನಿಧಿ ಕರ್ನಾಟಕಕ್ಕೆ ಅನ್ಯಾಯ ಆಗಿರೋದನ್ನ ಕೇಳಬೇಕು ಕೇಳಬಾರದು ಹೌದೋ ಅಲ್ಲೋ ಹೇಳಿ. ಕರ್ನಾಟಕದ ಲೋಕಸಭಾ ಪ್ರತಿನಿಧಿಯಾಗಿ ನೀವು ರಾಜ್ಯಕ್ಕೆ ಅನ್ಯಾಯ ಆಗಿರೋದು ಬಗ್ಗೆ ಕೇಳಬೇಕು ಕೇಳಬಾರದು ಮತ್ಯಾಕೆ ಕೇಳಲಿಲ್ಲ. ನೀವು ಸಂಸದರಾಗಿ ಉಪಯೋಗ ಏನು ನನ್ನ ಪ್ರಶ್ನೆ ಎಂದರು.
ಜಿಲ್ಲೆಯ ಅಭಿವೃದ್ಧಿಯನ್ನು ಮಾಡದೆ ಇರುವುದರಿಂದ ನಿದ್ದೆಗೆ ಜಾರಿದರೆ ಹೊರತು ಜಿಲ್ಲೆಯ ಸಮಗ್ರ ಜನತೆಗಾಗಿ ಅಭಿವೃದ್ಧಿ ಯಾವುದೇ ಮಾಡಿಲ್ಲ. ಮತ್ತೆ ನಿಮ್ಮನ್ಯಾಕೆ ಜನ ಗೆಲ್ಲಿಸಬೇಕು ಹೇಳಿ. ಬಾಗಲಕೋಟೆ ಲೋಕಸಭಾ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಅವರಿಗೆ ಆಶೀರ್ವಾದ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇದೇ ಸಂದರ್ಭದಲ್ಲಿ
ಸಚಿವ ಶಿವಾನಂದ ಪಾಟೀಲ. ವಿಧಾನಪರಿಷತ್ ಸದಸ್ಯ ಶ್ರೀಮತಿ ಉಮಾಶ್ರೀ. ಶಾಸಕ ಲಕ್ಷ್ಮಣ ಸವದಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು
ಪ್ರಕಾಶ ಕುಂಬಾರ
ಬಾಗಲಕೋಟೆ