ಕೋಲಿ ಸಮಾಜವನ್ನ ST ಗೆ ಸೇರಿಸಬೇಕು ಅಂತ ಒತ್ತಾಯಿಸಿ ಮೇ 4 ರಂದು ಬೃಹತ್ ಕೋಲಿ ಸಮಾವೇಶ ಮಾಡ್ತೇವೆ ಅಂತ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರು ಹೇಳಿದ್ದಾರೆ..ಕಲಬುರಗಿಯಲ್ಲಿಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಜೊತೆ ಸೇರಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಮಕನೂರ್,
ಸಿಎಂ ಸಿದ್ರಾಮಯ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ..ಈ ಸಮಾವೇಶದ ಮೂಲಕ ದೊಡ್ಡ ಸಂದೇಶ ರವಾನಿಸಲಾಗುವುದು ಅಂದ್ರು..ವಿಶೇಷವಾಗಿ ಈ ಬಾರಿ ಕಾಂಗ್ರೆಸ್ ಗೆ ಬೆಂಬಲಿಸುವ ಮೂಲಕ ಸಿಎಂ ಹಾಗು ಮಲ್ಲಿಕಾರ್ಜುನ ಖರ್ಗೆಯವರಿಗೆ ಮನವಿ ಸಲ್ಲಿಸ್ತೇವೆ ಅಂತ ಹೇಳಿದ್ರು..