ಹೊಸಕೋಟೆ:- ಆಟವಾಡುತ್ತಿದ್ದ ಮಗುವನ್ನು ಎಳೆದೋಯುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಹೊಸಕೋಟೆ ತಾಲ್ಲೂಕಿನ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ತಾವರೆಕೆರೆ ಗ್ರಾಮದಲ್ಲಿ ನಡೆದಿದೆ.
CM Siddaramaiah: ಬರ ಪರಿಹಾರ: ರಾಜ್ಯದ ಮನವಿಯ ಕಾಲು ಭಾಗವೂ ಇಲ್ಲ: ಸಿಎಂ ಸಿದ್ದರಾಮಯ್ಯ ಅಸಮಾಧಾನ
ಗಜೇಂದ್ರ ಉತ್ತರ ಪ್ರದೇಶ ಮೂಲದ ಕ್ಯಾಂಡಿ ಮಾರುವ ವ್ಯಕ್ತಿ ಬಂಧಿತ ಆರೋಪಿ. ತಾವರೆಕೆರೆಯ ಸರಕಾರಿ ಶಾಲಾ ಆವರಣದಲ್ಲಿ 2 ರಿಂದ 4 ವರ್ಷದ ಮಕ್ಕಳು ಆಟವಾಡುತ್ತಿರುವ ಸಂದರ್ಭದಲ್ಲಿ ಸರಕಾರ ಈಗಾಗಲೇ ನಿಷೇದ ಮಾಡಿರುವ ಕ್ಯಾಂಡಿ ಮಾಡುವ ವ್ಯಕ್ತಿ ಅಲ್ಲಿಗೆ ತೆರಳಿ ತಾವರೆಕೆರೆ ಗ್ರಾಮದ ಮಗುವೊಂದನ್ನು ಎಳೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ ತಕ್ಷಣ ಸಮೀಪಇದ್ದವರು ಮಗು ಕಿರಚಾಡುತ್ತಿರುವುದನ್ನು ಕಂಡು ವ್ಯಕ್ತಿ ಹಿಡಿದು ವಿಚಾರಣೆ ಮಾಡಿದಾಗ ಮಗು ನಡೆದ ಘಟನೆ ಬಗ್ಗೆ ಸ್ಥಳೀಯರಿಗೆ ತಿಳಿಸಿದೆ. ಕೂಡಲೇ ಸ್ಥಳೀಯರು ಹಾಗೂ ಪೋಷಕರು 112ಗೆ ಕರೆ ಮಾಡಿ ನಂದಗುಡಿ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹಾಡಹಗಲೇ ಈ ರೀತಿಯ ಕೃತ್ಯ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ಯಾರೇ ಅಪರಿಚಿತರು ಗ್ರಾಮಗಳಲ್ಲಿ ಬಂದರು ಭಯdದ ವಾತಾವರಣ ಸೃಷ್ಟಿಯಾಗುತ್ತಿದ್ದು. ಮಕ್ಕಳ್ಳನ್ನು ಬೇಸಿಗೆ ಮುಗಿಯುವ ತನಕ ಹೊರಗಡೆ ಬಿಡಲು ಪೋಷಕರು ಭಯ ಪಡುವ ಸ್ಥಿತಿ ಉಂಟಾಗಿದೆ.