ಧಾರವಾಡ:- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧದ ದಿಂಗಾಲೇಶ್ವರ ಶ್ರೀ ಹೇಳಿಕೆ ವೈಯಕ್ತಿಕ, ತಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಮುರುಘಾಮಠ ಶ್ರೀ ಹೇಳಿದ್ದಾರೆ.
ಕಿವಿ ಹಣ್ಣನ್ನು ಯಾವಾಗ ತಿನ್ನಬೇಕು!?, ಯಾವ ಸಮಯದಲ್ಲಿ ತಿಂದ್ರೆ ಒಳ್ಳೆಯದು ಗೊತ್ತಾ!?
ಈ ಸಂಬಂಧ ಮಾತನಾಡಿದ ಅವರು,ಪ್ರಲ್ಹಾದ್ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿ ಹೇಳಿಕೆಗೂ, ಧಾರವಾಡ ಮುರುಘಾಮಠಕ್ಕೂ ಸಂಬಂಧವಿಲ್ಲ. ನಮ್ಮ ಮಠ ಎಂದಿಗೂ ರಾಜಕೀಯ ವಿಚಾರದಲ್ಲಿ ಭಾಗವಹಿಸುವುದಿಲ್ಲ. ಸದ್ಯ ಎದ್ದಿರುವ ವಿವಾದಕ್ಕೂ, ತಮಗೂ ಸಂಬಂಧವಿಲ್ಲವೆಂದು ಹೇಳಿದ್ದಾರೆ.
ನಿನ್ನೆ ದಿಂಗಾಲೇಶ್ವರ ಸ್ವಾಮೀಜಿ ಪ್ರಲ್ಹಾದ್ ಜೋಶಿ ವಿರುದ್ಧ ಹೇಳಿಕೆ ನೀಡುವಾಗ ಮಲ್ಲಿಕಾರ್ಜುನ ಸ್ವಾಮೀಜಿ ಜೊತೆಗಿದ್ದರು. ಇದೀಗ ಅವರೊಂದಿಗಿದ್ದ ಸ್ವಾಮೀಜಿಗಳು ಉಲ್ಟಾ ಹೊಡೆದಿದ್ದಾರೆ. ಆ ಮೂಲಕ ದಿಂಗಾಲೇಶ್ವರ ಪರವಿದ್ದ ಸ್ವಾಮೀಜಿಗಳಲ್ಲಿಯೇ ಬಿರುಕು ಉಂಟಾಯ್ತಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.