ಬೆಂಗಳೂರು: ಉದ್ಯೋಗದಲ್ಲಿ ಕನ್ನಡಿಗರಿಗೆ ಕನ್ನಡಿಗರಿಂದಲೇ ಆಗುತ್ತಿರುವಷ್ಟು ಅನ್ಯಾಯ ಬೇರೆಯವರಿಂದಲ್ಲಎಂದು ಹೇಳಿರುವ ಹೈಕೋರ್ಟ್, ಎಲ್ಲಾ ಹುದ್ದೆಗಳಲ್ಲೂ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು ಎಂದು ಮೌಖಿಕವಾಗಿ ಆದೇಶ ನೀಡಿದೆ. ಕೆಐಎಡಿಬಿ ಭೂಮಿ ಹಂಚಿಕೆ ರದ್ದು ಪ್ರಶ್ನಿಸಿ ಐಡಿಬಿಐ ಬ್ಯಾಂಕ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾ. ಕೃಷ್ಣ ದೀಕ್ಷಿತ್ ಅವರಿದ್ದ ವಿಭಾಗೀಯಪೀಠ ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗ ನೀಡುವುದಾಗಿ ಪ್ರಮಾಣಪತ್ರ ಸಲ್ಲಿಸುವಂತೆ ಬ್ಯಾಂಕ್ಗೆ ಸೂಚನೆ ನೀಡಿದೆ.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಬಳಿಕ ನ್ಯಾಯಾಲಯ, ” ಕನ್ನಡಿಗರ ಭೂಮಿ, ನೀರು ಪಡೆದು ಉದ್ಯೋಗ ನೀಡದಿದ್ದರೆ ಹೇಗೆ? ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಕನ್ನಡಿಗರ ಆತ್ಮಸಾಕ್ಷಿಗೆ ಚುಚ್ಚಿದಂತಾಗಲಿದೆಯಲ್ಲವೇ? ಪ್ಯೂನ್, ಸ್ವೀಪರ್ ಮತ್ತಿತರ ಕೆಳ ದರ್ಜೆಯ ಹುದ್ದೆಗಳಿಗೆ ಮಾತ್ರ ಕನ್ನಡಿಗರನ್ನು ನೇಮಿಸುತ್ತೀರಾ? ಸಿ, ಡಿ ದರ್ಜೆಯ ಹುದ್ದೆಗೆ ಮಾತ್ರ ಕನ್ನಡಿಗರನ್ನು ನೇಮಿಸಿದರೆ ಸಾಲದು. ಎಲ್ಲಾಹುದ್ದೆಗಳಿಗೂ ನೇಮಕಾತಿ ಮಾಡಿಕೊಳ್ಳಬೇಕು,” ಎಂದು ತರಾಟೆಗೆ ತೆಗೆದುಕೊಂಡಿತು.
Post Office Jobs: ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ.! 10th ಪಾಸಾಗಿದ್ರೆ ಸಾಕು – ಇಂದೇ ಅರ್ಜಿ ಸಲ್ಲಿಸಿ
ಎಲ್ಲ ಹುದ್ದೆಗಳಲ್ಲೂಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು. ಉದ್ಯೋಗದಲ್ಲಿಕನ್ನಡಿಗರಿಗೆ ಕನ್ನಡಿಗರಿಂದಲೇ ಆಗಿರುವಷ್ಟು ಅನ್ಯಾಯ ಬೇರೆಯವರಿಂದಾಗಿಲ್ಲಎಂದ ನ್ಯಾಯಪೀಠ, ಸಾಹಿತಿ ಗಳಗನಾಥರ ವಾಕ್ಯ ಉಲ್ಲೇಖಿಸಿತು. ಜತೆಗೆ ಬ್ರಿಟಿಷ್ ಆಡಳಿತದಲ್ಲಿ ಬಂಗಾಳದ ಗವರ್ನರ್ ಜನರಲ್ ಆಗಿದ್ದ ರಾಬರ್ಟ್ ಕ್ಲೈವ್ ಸ್ಥಳೀಯರನ್ನು ಗ್ರೂಪ್ ‘ಸಿ‘ ಹುದ್ದೆಗೆ ನೇಮಿಸಿದ್ದನು.
ಈಗ ಬ್ಯಾಂಕ್ ಏಕೆ ಎಲ್ಲಾಹುದ್ದೆಗಳಲ್ಲೂಸ್ಥಳೀಯರಿಗೆ ಅವಕಾಶ ನೀಡಲು ಸಾಧ್ಯವಿಲ್ಲಎಂದು ಕೇಳಿತು. ನೀವೂ(ಬ್ಯಾಂಕ್) ಹೀಗೆ ವರ್ತಿಸಬಾರದು. ಮೊದಲು ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗ ನೀಡುವುದಾಗಿ ಪ್ರಮಾಣಪತ್ರ ಸಲ್ಲಿಸಬೇಕೆಂದು ಸೂಚನೆ ನೀಡಿದ ವಿಭಾಗೀಯಪೀಠ ಕೆಐಎಡಿಬಿ ಜಮೀನು ಹಂಚಿಕೆ ಸಂಬಂಧ ಯಥಾಸ್ಥಿತಿ ಪಾಲಿಸಲು ಆದೇಶ ನೀಡಿತು.