ಬೆಂಗಳೂರು: ಬೇಸಿಗೆ ಆರಂಭಕ್ಕೂ ಮುನ್ನವೇ ಸೂರ್ಯನ ಕೋಪ ನೆತ್ತಿಗೆ ಏರಿ ಜನರನ್ನ ಸುಡ್ತಾ ಇತ್ತು. ಸತತ ಮುರೂ ತಿಂಗಳ ಕಾಲ ಜನ ಸೂರ್ಯನಿಗೆ ತೆಗಳಿದ್ದೇ ತೆಗಳಿದ್ದು. ಕಳೆದ ನಾಲ್ಕೈದು ದಿನಗಳಿಂದ ಮೇಘರಾಜನ ಎಂಟ್ರಿಯಿಂದ ಸಿಟಿ ಮಂದಿ ಕೂಲ್ ಆಗಿದ್ರೆ, ಇತ್ತ ಮಳೆಗೆ ಹಲವು ಸಂಕಷ್ಟ ಕೂಡ ಎದುರಾಗಿದೆ. ಒಂದ್ಕಡೆ ಬಿಸಿಲಿನಿಂದ ಬೆಂದೋಗಿದ್ದ ಜನ ಕೂಲ್ ಆಗಿದ್ರೆ.. ಇನ್ನೊಂದ ಕಡೆ ಮಳೆಯ ಎಫೆಕ್ಟ್ ಗೆ ಸಿಟಿ ರಸ್ತೆಗಳು, ಅಂಡರ್ ಪಾಸ್ ಹೊಂಡದಂತಾಗಿದ್ವು. ಭಾರೀ ಮಳೆಯಿಂದಾಗಿ ಪಾಟರಿ ಟೌನ್ ರಸ್ತೆ ಕುಸಿತಗೊಂಡಿತ್ತು. ಮರದ ಜೊತೆಗೆ ವಿದ್ಯುತ್ ಕಂಬ ಬಿದ್ದು, ಜಸ್ಟ್ ಸೆಕೆಂಡನಲ್ಲಿ ಆಟೋ ಚಾಲಕ ಬಚಾವ್ ಆಗಿದ್ದಾನೆ.
ಹೌದು.. ಬಿಸಿಲ ಝಳದಿಂದ ಕಂಗೆಟ್ಟಿದ್ದ ರಾಜ್ಯಕ್ಕೆ ಭಾರಿ ಮಳೆಯಾಗಿದ್ದು, ನಿನ್ನೆ ಸುರಿದ ಮಳೆ ಗಾಳಿಗೆ ತಿಮ್ಮಯ್ಯ ರಸ್ತೆಯಲ್ಲಿ ಮರವೊಂದು ಆಟೋರಿಕ್ಷಾ ಮೇಲೆ ಬಿದ್ದಿದೆ. ಜಲಾವೃತದಿಂದಾಗಿ ಜಯಮಹಲ್ ರಸ್ತೆ, ಹೆಬ್ಬಾಳ ವೃತ್ತ, ಕಾಮಾಕ್ಷಿ ಪಾಳ್ಯ, ಆರ್ಆರ್ ನಗರ, ನಾಯಂಡಹಳ್ಳಿಯಲ್ಲಿ ಅಧಿಕ ಮಳೆಯಾಗಿದ್ದು, ವಾಹನ ಸವಾರರು ಹರಸಾಹಸ ಪಡುವಂತಾಯ್ತು. ಇನ್ನ ಪಾಟರಿ ಟೌನ್ ಮೆಟ್ರೊ ನಿಲ್ದಾಣ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಬೋರ್ ಬ್ಯಾಂಕ್ ರಸ್ತೆಯಲ್ಲಿ ನಿನ್ನೆ ಸಂಜೆ ಸುರಿದ ಭಾರಿ ಮಳೆಗೆ ೧೨ ಅಡಿ ರಸ್ತೆ ಕುಸಿದಿತ್ತು.
Pomegranate Juice: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ಜ್ಯೂಸ್ ಕುಡಿದರೆ ಈ ರೋಗಗಳು ಓಡಿ ಹೋಗುತ್ತೆ!
ಅದೃಷ್ಟವಶಾತ್ ಯಾವುದೇ ದುರಂತ ಸಂಭವಿಸಿಲ್ಲ. ರಸ್ತೆಯ ಒಂದು ಭಾಗವನ್ನು ಮುಚ್ಚಲಾಗಿದ್ದು, ಕೆಲ ಹೊತ್ತು ಜನರು ಆತಂಕಕ್ಕೆ ಈಡಾಗಿದ್ರು. ಸದ್ಯ ಟ್ಯಾನರಿ ರಸ್ತೆ ಮತ್ತು ಮಿಲ್ಲರ್ಸ್ ರಸ್ತೆಯನ್ನು ಸಂಪರ್ಕಿಸುವ ಬೋರ್ ಬ್ಯಾಂಕ್ ರಸ್ತೆಯ ಒಂದು ಭಾಗದಲ್ಲಿ ಪೊಲೀಸರು ಸಂಚಾರವನ್ನು ಹತ್ತಿರದ ಸಣ್ಣ ಲೇನ್ಗಳ ಮೂಲಕ ಬದಲಾಯಿಸಲಾಗಿದೆ ಅಂತೆ.
ಇನ್ನು ಗಾಳಿ ಮಳೆಗೆ 150ಕ್ಕೂ ಹೆಚ್ಚು ಮರ ಹಾಗೂ ಮರದ ಕೊಂಬೆಗಳು ಧರೆಗೆ ಉರುಳಿದ್ದು, ಕಾರು, ಆಟೋ, ಬೈಕ್ ಜಖಂಗೊಂಡಿವೆ. ಸಂಜೆ 5 ಗಂಟೆಗೆ ಆರಂಭಗೊಂಡ ಗುಡುಗು, ಮಿಂಚು, ಗಾಳಿ ಸಹಿತ ಅರ್ಧ ಗಂಟೆ ಮಳೆ ಸುರಿಯಿತು. ಗಾಳಿ ಮಳೆಗೆ ಆರ್ಆರ್ ನಗರ ವ್ಯಾಪ್ತಿಯಲ್ಲಿ 70, ಪೂರ್ವ ವಲಯದಲ್ಲಿ 24, ಪಶ್ಚಿಮ ವಲಯದಲ್ಲಿ 30 ಮರ ಮತ್ತು ಮರದ ಕೊಂಬೆ ಬಿದ್ದಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. ಸದ್ಯ ರಣ ಬಿಸಿಲು, ಬಿಸಿ ಗಾಳಿಯಿಂದ ತತ್ತರಿಸಿದ ಬೆಂಗಳೂರಿಗರಿಗೆ ಮಳೆ ತುಸು ತಂಪೆರೆದಿದೆ. ಸೆಕೆಯಿಂದ ಜನರು ಬೇಸತ್ತು ಹೋಗಿದ್ದಕ್ಕೆ ಇದೀಗ ಮಳೆ ರಿಲೀಫ್ ನೀಡಿದೆ. ಆದ್ರೆ ಆಗುತ್ತಿರುವ ಅವಾಂತರಕ್ಕೆ ಬಿಬಿಎಂಪಿ ಕೊಂಚ ಗಮನಹರಿಸಿ ಕ್ರಮ ಕೈಗೊಳ್ಳಬೇಕಿದೆ.