ಬೆಂಗಳೂರು: ದಕ್ಷಿಣ ಭಾರತೀಯರನ್ನು ಆಫ್ರಿಕಾ ಜನರಿಗೆ ಹೋಲಿಕೆ ಮಾಡಿದ ಕಾಂಗ್ರೆಸ್ ಸಾಗರೋತ್ತರ ಘಟಕದ ಅಧ್ಯಕ್ಷರಾಗಿದ್ದ ಸ್ಯಾಮ್ ಪಿತ್ರೋಡ 420 ಆಗಿದ್ದಾರೆ. ಅವರು ದೇಶ ವಿಭಜನೆಯ ಮುನ್ನಲೆ ಗಾಯಕರಾಗಿದ್ದಾರೆ. ಆದರೆ ಅವರದ್ದೇ ರೀತಿಯಲ್ಲಿ ದೇಶ ವಿಭಜನೆಯ ಹೇಳಿಕೆ ಕೊಟ್ಟಿದ್ದ ಸಂಸದ ಡಿಕೆ ಸುರೇಶ್ ಹಿನ್ನಲೆ ಗಾಯಕ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರು ಯಾವಾಗ ಆಫ್ರಿಕಾಗೆ ಹೋಗುತ್ತಿರಾ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸ್ಯಾಮ್ ಪಿತ್ರೋಡ ಹೇಳಿಕೆ ದೇಶವನ್ನು ಛಿದ್ರ ಮಾಡುವ ಹೇಳಿಕೆಯಾಗಿದೆ. ಡಿಕೆಶಿ ಹಿನ್ನಲೆ ಗಾಯಕ. ಅವರು ಭಾರತವನ್ನು ಛಿದ್ರ ಮಾಡಬೇಕು ಎಂದಿದ್ದರು. ಕಾಂಗ್ರೆಸ್ ಇದೀಗ ಬಣ್ಣದ ಭಾಗ್ಯವನ್ನು ಕೊಡುತ್ತಿದೆ. ಬಣ್ನದ ಗ್ಯಾರಂಟಿಗಳನ್ನು ಕೊಡುತ್ತಿದೆ. ಬಣ್ಣದ ಜನಾಂಗೀಯ ಗಲಭೆಯನ್ನು ಸಾವಿರಾರು ಜನರು ಪ್ರಾಣ ತೆತ್ತಿದ್ದಾರೆ. ನೆಲ್ಸನ್ ಮಂಡೇಲಾ, ಮಹಾತ್ಮಾ ಗಾಂಧಿಯ ಹೋರಾಟ ಇದಕ್ಕೆ ಅಂತ್ಯ ಹಾಡಿತ್ತು ಎಂದರು.
![Demo](https://ainlivenews.com/wp-content/uploads/2023/12/spoorthi-1.jpg)
Pomegranate Juice: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ಜ್ಯೂಸ್ ಕುಡಿದರೆ ಈ ರೋಗಗಳು ಓಡಿ ಹೋಗುತ್ತೆ!
ಸ್ಯಾಮ್ ಪಿತ್ರೋಡ 420. ರಾಜೀನಾಮೆ ಕೊಟ್ಟರೆ ಈ ವಿವಾದ ಬಗೆಹರಿಸಲು ಸಾಧ್ಯವಿಲ್ಲ. ನಾನು ಭಾರತೀಯನೆ ಅಲ್ಲ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ. ನಮಗೆ 5000 ವರ್ಷದ ಇತಿಹಾಸ ಇದೆ. ಹಾಗಿದ್ದರೂ ನಮ್ಮನ್ನು ಆಫ್ರಿಕಾದ ಜನರಿಗೆ ಹೋಲಿಕೆ ಮಾಡಿದ್ದಾರೆ. ಸೋನಿಯಾ ಗಾಂಧಿ ಇಟಲಿಯಿಂದ ಬಂದಿದ್ದರೂ ಅವರನ್ನು ಭಾರತೀಯರು ಎಂದು ಒಪ್ಪಿಕೊಳ್ಳಿ ಎಂದು ಕಾಂಗ್ರೆಸ್ನವರು ಒತ್ತಾಯ ಮಾಡ್ತಾರೆ.
ಹಾಗಾದರೆ ಸೋನಿಯಾ ಯಾರು ಎಂದು ಪಿತ್ರೋಡ ಹೇಳಬೇಕು. ಸೋನಿಯಾ ಬಣ್ಣ ಯಾವುದು? ಅವರು ಭಾರತೀಯರಾ? ರಾಹುಲ್, ಪ್ರಿಯಾಂಕಾ ಯಾರು? ಸಿದ್ದರಾಮಯ್ಯ ಮಾತು ಮಾತಿಗೆ ಐದು ಗ್ಯಾರಂಟಿ ಅನ್ನುತ್ತಾರೆ. ಆದರೆ ಇದೀಗ ಬಣ್ಣವು ಕಾಂಗ್ರೆಸ್ ಒಂದು ಗ್ಯಾರಂಟಿಯಾಗಿದೆ. ಇನ್ನು ಮುಂದೆ ಕಾಂಗ್ರೆಸ್ ಬಣ್ಣದ ಗ್ಯಾರಂಟಿಯನ್ನು ನೀಡಬೇಕಿದೆ ಎಂದರು.
![](https://ainlivenews.com/wp-content/uploads/2024/01/Ad-Banner-copy-scaled.jpg)