ಬೆಂಗಳೂರು:- ಆ ಕುಮಾರಸ್ವಾಮಿ ಹೇಳಿದ್ದನ್ನೆಲ್ಲ ನಂಬಬೇಡಿ ಎಂದು ಚಲುವರಾಯಸ್ವಾಮಿ ಟೀಕೆ ಮಾಡಿದ್ದಾರೆ.
IPL 2024: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ.. RCB ಮೊದಲು ಬ್ಯಾಟಿಂಗ್..!
ಈ ಸಂಬಂಧ ಮಾತನಾಡಿದ ಅವರು,ಸಚಿವ ಹೇಳುವ ಪ್ರಕಾರ ಪೆನ್ ಡ್ರೈವ್ ಗಳು ಸಾರ್ವಜನಿಕಗೊಳ್ಳುವ ಮೊದಲು ವಕೀಲ ದೇವರಾಜೇಗೌಡ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯನ್ನು ಭೇಟಿಯಾಗಿದ್ದರು, ಅದನ್ನು ಕುಮಾರಸ್ವಾಮಿ ಯಾಕೆ ಬಹಿರಂಗಪಡಿಸುತ್ತಿಲ್ಲ ಎಂದು ಕೇಳಿದರು. ದೇವರಾಜೇಗೌಡ ಕುಮಾರಸ್ವಾಮಿಯನ್ನು ಭೇಟಿಯಾಗಿದ್ದು ನಿಮಗೆ ಹೇಗೆ ಗೊತ್ತು ಅಂತ ಕೇಳಿದರೆ, ಎಲೆಕ್ಟ್ರಾನಿಕ್ ಮಾಧ್ಯಮದವರೊಂದಿಗೆ ಮಾತಾಡುತ್ತಿದ್ದ ಚಲುವರಾಯಸ್ವಾಮಿ, ಟಿವಿಯಲ್ಲಿ ಬರುತ್ತಿದೆ ನಿಮಗೆ ಗೊತ್ತಿಲ್ವಾ? ನೀವು ನೋಡಿಲ್ವಾ ಅಂತ ಕೇಳುತ್ತಾರೆ! ಕಾರ್ತೀಕ್ ಹೆಸರಿನ ಡ್ರೈವರ್ ಕೇವಲ ಒಂದು ಫೋಲ್ಡರ್ ಮಾತ್ರ ಕೊಟ್ಟಿದ್ದಾನಂತೆ, ಅವನಲ್ಲಿ ಇನ್ನೂ ಸಾಕಷ್ಟು ವಿಡಿಯೋಗಳಿವೆ ಎಂದು ಹೇಳುವ ಅವರು ಕುಮಾರಸ್ವಾಮಿ ಹೇಳಿದ್ದನ್ನೆಲ್ಲ ನಂಬಬೇಡಿ, ಹೇಳಿದ್ದನ್ನು ಪರಾಮರ್ಶೆ ಮಾಡಿ ನಂತರ ಪ್ರಶ್ನೆಗಳನ್ನು ಕೇಳಿ ಎಂದು ಹೇಳಿಕೆ ನೀಡಿದ್ದಾರೆ.