ವಿರಾಟ್ ಕೊಹ್ಲಿಯನ್ನು ಮತ್ತೆ ನಾಯಕನನ್ನಾಗಿ ನೇಮಕ ಮಾಡಲು RCB ಮ್ಯಾನೇಜ್ಮೆಂಟ್ ಚಿಂತನೆ ನಡೆಯುತ್ತಿದೆ.
ಕಳೆದ ದಿನ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ ಒಂದು ರನ್ ಅಂತರದಿಂದ ಸೋಲು ಕಂಡಿದೆ. ಈ ಮೂಲಕ ಬಹುತೇಕ ಪ್ಲೇ ಆಫ್ ಕನಸು ಭಗ್ನಗೊಂಡಿದೆ. ಗೆಲುವಿನ ಸನಿಹಕ್ಕೆ ಬಂದರೂ ಗೆಲ್ಲಲು ಸಾಧ್ಯವಾಗಲಿಲ್ಲ.
IPL 2024: ಟಾಸ್ ಗೆದ್ದ ಮುಂಬೈ ಮೊದಲು ಬ್ಯಾಟಿಂಗ್, ರಾಜಸ್ಥಾನ್ ಬೌಲಿಂಗ್!
ಇನ್ನೂ ಆರು ಪಂದ್ಯಗಳು ಬಾಕಿಯಿದ್ದು, ಆರ್ ಸಿ ಬಿ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಆದರೂ ಪ್ಲೇಆಫ್ ಕನಸು ನನಸಾಗುವುದು ಬಹಳ ಕಷ್ಟ. ಇನ್ನು ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯನ್ನು ಮತ್ತೆ ನಾಯಕನನ್ನಾಗಿ ನೇಮಕ ಮಾಡಲು ಚಿಂತನೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಆರ್ ಸಿ ಬಿ ಹೊಸ ಅಧ್ಯಾಯ ಎಂದು ಸೀಸನ್ ಶುರು ಮಾಡಿತ್ತು. ಆದರೆ ಕೊಂಚವೂ ಏರುಗತಿ ಕಾಣದೆ ಇದೀಗ ಪ್ಲೇ ಆಫ್ ಬಾಗಿಲು ಮುಚ್ಚುವವರೆಗೆ ಕಳಪೆ ಪ್ರದರ್ಶನ ತೋರಿದೆ. ಹೀಗಿರುವಾಗ ಮುಂದಿನ ಪಂದ್ಯ ಅಂದರೆ ಏಪ್ರಿಲ್ 25 ರಂದು SRH ವಿರುದ್ಧದ ನಡೆಯಲಿರುವ ಪಂದ್ಯಕ್ಕೆ ಕೊಹ್ಲಿ ನಾಯಕತ್ವ ವಹಿಸಿಕೊಳ್ಳುತ್ತಾರಾ ಎಂಬ ಅನುಮಾನ ಮೂಡಿದೆ.
ಕೊಹ್ಲಿ ಪ್ರಸ್ತುತ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಈ ಹಿಂದೆ ತಂಡವನ್ನು ಅಚ್ಚುಕಟ್ಟಾಗಿ ಮುನ್ನಡೆಸಿದ್ದ ಕೊಹ್ಲಿ ಆ ಬಳಿಕ ನಾಯಕತ್ವದಿಂದ ಕೆಳಗಿಳಿದರು, ಆದರೆ RCBಗೆ ಅದುವೇ ಅಪಶಕುನವಾಯಿತೇನೋ…! ಪ್ಲೇ ಆಫ್, ಫೈನಲ್ ಪ್ರವೇಶಿಸಿ ಎಡವುತ್ತಿದ್ದ ತಂಡ ಇದೀಗ ಪಾಯಿಂಟ್ ಪಟ್ಟಿಯಲ್ಲಿ ಕೊಂಚ ಮೇಲೇರಲು ಸಹ ಪರದಾಡುತ್ತಿದೆ
ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ಮತ್ತೆ ಹಳೆ ಗಂಡನ ಪಾದವೇ ಗತಿ ಎನ್ನುತ್ತಾ, ಆರ್ ಸಿ ಬಿ ನಾಯಕತ್ವವನ್ನು ವಿರಾಟ್ ಕೊಹ್ಲಿಗೆ ನೀಡಲು ಮಂಡಳಿ ಪ್ಲಾನ್ ಮಾಡುತ್ತಿದೆಯೇ? ಎಂಬ ಶಂಕೆ ವ್ಯಕ್ತವಾಗಿದೆ