ಹ್ಯಾಟ್ರಿಕ್ ಸೋಲಿನ ಬಳಿಕ ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದು ಬೀಗಿದೆ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಅತ್ತ ಸೋಲಿನೊಂದಿಗೆ ಸ್ಯಾಮ್ ಕರನ್ ಪಡೆಯ ಪ್ಲೇ ಆಫ್ ಆಸೆ ಕಡಿಮೆಯಾಗಿದೆ.
ಹಲಸಿನ ಹಣ್ಣು ಕೈಗೆ ಅಂಟಿಕೊಳ್ಳದಂತೆ ಬಿಡಿಸುವುದು ಹೇಗೆ!?.. ಇಲ್ಲಿದೆ ಕೆಲವು ಟಿಪ್ಸ್…
ಪಂಜಾಬ್ ಕಿಂಗ್ಸ್ ವಿರುದ್ಧ ಸತತ ಸೋಲು ಅನುಭವಿಸುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕೊನೆಗೂ ಗೆಲುವಿನ ರುಚಿ ಕಂಡಿದೆ. ಪಂಜಾಬ್ ವಿರುದ್ಧ ಆಡಿದ್ದ ಕೊನೆಯ ಎಲ್ಲಾ ಐದು ಪಂದ್ಯಗಳಲ್ಲಿಯೂ ಮುಗ್ಗರಿಸಿದ್ದ ಸಿಎಸ್ಕೆ, ಇದೀಗ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ 28 ರನ್ಗಳಿಂದ ಗೆದ್ದಿದೆ. ಇದರೊಂದಿಗೆ ಐಪಿಎಲ್ 2024ರ ಆವೃತ್ತಿಯಲ್ಲಿ ಪ್ಲೇ ಆಫ್ ಆಸೆಯನ್ನು ಇನ್ನೂ ಜೀವಂತವಾಗಿ ಇರಿಸಿಕೊಂಡಿದೆ. ಅತ್ತ ಸತತ ಕೊನೆಯ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್ ಹಂತಕ್ಕೇರುವ ಕನಸು ಹೊತ್ತಿದ್ದ ಸ್ಯಾಮ್ ಕರನ್ ಪಡೆ, ಸಿಎಸ್ಕೆ ವಿರುದ್ಧ ಸೋಲಿನೊಂದಿಗೆ ಮತ್ತೆ ಹಿನ್ನಡೆ ಅನುಭವಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟ್ ಬೀಸಿದ ರುತುರಾಜ್ ಗಾಯಕ್ವಾಡ್ ಬಳಗವು, 9 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್, ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಅಂತಿಮವಾಗಿ 9 ವಿಕೆಟ್ ಕಳೆದುಕೊಂಡು 139 ರನ್ ಗಳಿಸಲಷ್ಟೇ ಶಕ್ತವಾಯ್ತು.
ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈಗೆ ಉತ್ತಮ ಆರಂಭ ಸಿಗಲಲ್ಲ. ಅಜಿಂಕ್ಯ ರಹಾನೆ 9 ರನ್ ಗಳಿಸಿ ಔಟಾದರು. ಈ ವೇಳೆ ಒಂದಾದ ನಾಯಕ ಋತುರಾಜ್ ಹಾಗೂ ಡೇರಿಲ್ ಮಿಚೆಲ್ ಅರ್ಧಶತಕದ ಜೊತೆಯಾಟವಾಡಿದರು. 21 ಎಸೆತಗಳಲ್ಲಿ 32 ರನ್ ಗಳಿಸಿ ಗಾಯಕ್ವಾಡ್ ಔಟಾದರೆ, ಅವರ ಬೆನ್ನಲ್ಲೇ ಶಿವಂ ದುಬೆ ಗೋಲ್ಡನ್ ಡಕ್ ಆದರು. ಆ ಮೂಲಕ ಸತತ ಎರಡು ಪಂದ್ಯಗಳಲ್ಲಿ ಮೊದಲ ಎಸೆತದಲ್ಲೇ ಔಟಾದರು. ಮಿಚೆಲ್ ಆಟ 30 ರನ್ಗೆ ಅಂತ್ಯವಾದರೆ, ಮೊಯೀನ್ ಅಲಿ 17 ರನ್ ಗಳಿಸಿದರು.
ಸ್ಯಾಂಟ್ನರ್ 11 ರನ್ ಗಳಿಸಿದರೆ, ಶಾರ್ದುಲ್ ಠಾಕೂರ್ 17 ರನ್ ಗಳಿಸಿ ನಿರ್ಗಮಿಸಿದರು. ಅವರ ಬೆನ್ನಲ್ಲೇ ಎಂಎಸ್ ಧೋನಿ ಕೂಡಾ ಗೋಲ್ಡನ್ ಡಕ್ ಆದರು. ಅಂತಿಮವಾಗಿ ತಂಡವು 167 ರನ್ ಗಳಿಸಲಷ್ಟೇ ಸಾಧ್ಯವಾಯ್ತು.