ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಅವರನ್ನು ಮೊದಲ ಬಾರಿ ಭೇಟಿಯಾದಾಗ ಬಲಿಷ್ಠ ಗೂಳಿಯನ್ನು ಕಂಡ ಅನುಭವವಾಯಿತು ಎಂದು ಟೀಮ್ ಇಂಡಿಯಾ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ. 1983ರಲ್ಲಿ ಭಾರತಕ್ಕೆ ಮೊದಲ ಬಾರಿ ವಿಶ್ವಕಪ್ ಗೆದ್ದುಕೊಟ್ಟ ಟೀಮ್ ಇಂಡಿಯಾದ ಸದಸ್ಯರಾದ ಮಾಜಿ ಆಲ್ರೌಂಡರ್ ರವಿ ಶಾಸ್ತ್ರಿ, ಟೀಮ್ ಇಂಡಿಯಾದಲ್ಲಿನ ತಮ್ಮ ಕೋಚಿಂಗ್ ದಿನಗಳ ನೆನಪಿನಾಳವನ್ನು ಕೆದಕಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ನೂತನ ಸೂಪರ್ ಸ್ಟಾರ್ ಬ್ಯಾಟರ್ ಆಗಿ ಹೊರಹೊಮ್ಮಿರುವ ರಿಂಕು ಸಿಂಗ್ ಅವರನ್ನು ಕೆಕೆಆರ್ ತಂಡ 2018ರಲ್ಲೇ ತನ್ನ ತೆಕ್ಕೆಗೆ ತೆದುಕೊಂಡಿತ್ತು. ಆದರೆ, ರಿಂಕು ಸಿಂಗ್ಗೆ ಆಡುವ ಅವಕಾಶಗಳು ಸಿಕ್ಕಿರಲಿಲ್ಲ. ಐಪಿಎಲ್ 2022 ಟೂರ್ನಿಯಲ್ಲಿ ಚೊಚ್ಚಲ ಐಪಿಎಲ್ ಫಿಫ್ಟಿ ಬಾರಿಸುವ ಮೂಲಕ ಗಮನ ಸೆಳೆದಿದ್ದ ಎಡಗೈ ಬ್ಯಾಟರ್, ಬಳಿಕ 2023ರ ಆವೃತ್ತಿಯಲ್ಲಿ ಸತತ 5 ಸಿಕ್ಸರ್ ಸಿಡಿಸಿ ಕೆಕೆಆರ್ಗೆ ಜಯ ತಂದುಕೊಡುವ ಮೂಲಕ ಟಿ20 ಕ್ರಿಕೆಟ್ನ ನೂತನ ಫಿನಿಷರ್ ಆಗಿ ಹೊರಹೊಮ್ಮಿದರು. ಇದರ ಬೆನ್ನಲ್ಲೇ ಭಾರತದ ಟಿ20 ತಂಡಕ್ಕೂ ಪದಾರ್ಪಣೆ ಮಾಡಿದರು.
Post Office Jobs: ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ.! 10th ಪಾಸಾಗಿದ್ರೆ ಸಾಕು – ಇಂದೇ ಅರ್ಜಿ ಸಲ್ಲಿಸಿ
“ರಿಂಕು ಸಿಂಗ್ ಅವರನ್ನು ಭೇಟಿಯಾಗಿದ್ದೇನೆ. ನಾನು ಮೊದಲ ಬಾರಿ ಆತನನ್ನು ಭೇಟಿಯಾದಾಗ ನಾನು ಕಾಮೆಂಟರಿ ಮಾಡುತ್ತಿದ್ದೆ. ಮೊದಲ ಬಾರಿ ಆತನನ್ನು ಭೇಟಿಯಾದಾಗ ಗೂಳಿಯಂತಹ ಬಲಿಷ್ಠ ಆಟಗಾರ ಎಂದನ್ನಿಸಿತ್ತು. ಯಾವುದೇ ದುರಹಂಕಾರ ಇಲ್ಲ, ತಾಳ್ಮೆಯಿಂದ ಆಡುವ ಆಟಗಾರ, ಏಕಾಗ್ರತೆ ಆತನಲ್ಲಿ ತುಂಬಿದೆ. ಒತ್ತಡದ ಸಮಯದಲ್ಲೂ ದಿಟ್ಟ ಆಟವಾಡುವ ಪ್ರಬುದ್ಧತೆ ಆತನಲ್ಲಿದೆ.
ಆತನ ಆಲೋಚನೆಗಳಲ್ಲಿ ಸ್ಪಷ್ಟತೆ ಇದೆ. ಹೀಗಾಗಿ ಇಂದು ಹಲವಾರು ಯುವ ಆಟಗಾರರು ರಿಂಕು ಸಿಂಗ್ ಅವರನ್ನು ತಮ್ಮ ಸ್ಪೂರ್ತಿಯನ್ನಾಗಿ ಸ್ವೀಕರಿಸಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತುರುವವರಿಗೂ, ಈತನಿಂದ ಸಾಧ್ಯ ಎಂದಾದರೆ ನಮ್ಮಿಂದಲೂ ಸಾಧ್ಯ ಎಂಬ ಆತ್ಮವಿಶ್ವಾಸ ಮೂಡುವಂತೆ ಮಾಡಿದ್ದಾರೆ,” ಎಂದು ಕೆಕೆಆರ್ನ ಸ್ಟಾರ್ ಆಟಗಾರನ ಬಗ್ಗೆ ರವಿ ಶಾಸ್ತ್ರಿ ಗುಣಗಾನ ಮಾಡಿದ್ದಾರೆ.