ಬೆಂಗಳೂರು: ಲೋಕ ಸಮರಕ್ಕೆ ಇನ್ನೇನು ಎರಡೇ ದಿನ ಬಾಕಿ. ಹೀಗಿರುವಾಗ ಮತದಾನ ಅರಿವು ಮೂಡಿಸಲು ಭಾರಿ ಕಸರತ್ತು ಮಾಡಲಾಗ್ತಾ ಇದೆ. ಒಂದ್ಕಡೆ ಜಾಥಾ ಕಾಲ್ನಡಿಗೆ ಮಾಡ್ತಾ ಇದ್ರೆ, ಇತ್ತ ಹೋಟೆಲ್ ಮಾಲೀಕರಿಂದ ಮತದಾರರಿಗಾಗಿ ಆಫರ್ ಮೇಲೆ ಆಫರ್ ಬಿಡ್ತಾ ಅವರೇನೆಸ್ಸ್ ಮೂಡಿಸೊಕೆ ಸಜ್ಜಾಗಿದ್ದಾರೆ.. ಎಸ್.. ಲೋಕಸಭಾ ಚುನಾವಣೆಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ.
ಈ ಚುನಾವಣೆಯ ಮತದಾನ ಜನರ ಜವಾಬ್ದಾರಿಯಾಗಿದೆ. ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಮತದಾನವೆ ಪ್ರಜಾಪ್ರಭುತ್ವ ಧ್ವನಿ. ಆದ್ರೆ ಕೆಲವರು ಮತದಾನದ ಬಗ್ಗೆ ನಿರ್ಲಕ್ಷ್ಯ ಮಾಡ್ತಾರೆ. ರಜೆ ಸಿಗುತ್ತೆ ಅನ್ನೋ ಕಾರಣಕ್ಕೆ ಮತದಾನದಂದು ಟ್ರಿಪ್ ಗೆ ಹೊರಡ್ತಾರೆ. ಹೀಗಾಗಿ ಮತದಾನ ಬಗ್ಗೆ ಜಾಗೃತಿ ಮೂಡಿಸೋಕೆ ಹೋಟೆಲ್ ಮಾಲೀಕರು ಸಜ್ಜಾಗಿದ್ದಾರೆ. ಹೌದು.. ಮತದಾನ ಒಂದು ಜವಾಬ್ದಾರಿಯುತ ಹೊಣೆಗಾರಿಕೆ.
ಮತಗಟ್ಟೆಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುತ್ತಿದ್ದೀರಾ!?.. ಹಾಗಿದ್ರೆ ಈ ಸುದ್ದಿ ಓದಿ!
ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆ ಆಗಲೆಂದು ಹಲವು ವಿಧಾನದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಯ ಮತದಾನ ಇದ್ದು, ಅದರ ಜೊತೆಗೆ ವಿಕೆಂಡ್ ಹಿನ್ನೆಲೆ ಸಾಲು ಸಾಲು ರಜೆಗಳು ಸಿಗುವ ಕಾರಣ ಟ್ರಿಪ್ಗೆ ಹೋಗುವ ಪ್ಲಾನ್ ರೂಪಿಸುತ್ತಾರೆ. ಆದರೆ ಇದನ್ನು ತಡೆಯುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೀಗ ಹೋಟೆಲ್ ಮಾಲೀಕರು ಓಟ್ ಮಾಡಿ ಉಚಿತ ಊಟ ಸೇವೆ ನೀಡಲು ನಿಸರ್ಗ ಹೊಟೆಲ್ ಮಾಲೀಕರು ಮುಂದಾಗಿದ್ದಾರೆ.
ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಹೋಟೆಲ್ ಮತದಾರರಿಗೆ ಬಿಗ್ ಆಫರ್ ನೀಡಲಾಗಿದೆ. ನಿಸರ್ಗ ಹೊಟೆಲ್ ಅಲ್ಲದೆ ರಾಜ್ಯದ ಇತರೆ ಹೊಟೆಲ್ ಗಳಿಗೂ ಅವಕಾಶ ನೀಡಲಾಗಿದೆ. ಬಹುತೇಕ ಹೋಟೆಲ್ ಗಳಲ್ಲಿ 10% ಆಫರ್ ಕೂಡ ಇದೆಯಂತೆ. ಓಟ್ ಮಾಡಿ ಇದು ನಿಮ್ಮ ಕರ್ತವ್ಯ ಎನ್ನುತ್ತಿರುವ ಹೋಟೆಲ್ ಮಾಲೀಕರು ಪೋಸ್ಟರ್ ಮೂಲಕ ಅರಿವು ಮೂಡಿಸ್ತಿದ್ದಾರೆ. ಒಟ್ಟಿನಲ್ಲಿ ಮತದಾನ ಅನ್ನೋದು ಪ್ರತಿಯೊಬ್ಬ ಪ್ರಜೆಯ ಹಕ್ಕು. ಹೀಗಾಗಿ ಮತದಾನದ ಕುರಿತು ವಿಭಿನ್ನವಾಗಿ ಅರಿವು ಮೂಡಿಸುತ್ತಿರುವ ಹೋಟೆಲ್ ಮಾಲೀಕರ ಕಾರ್ಯಕ್ಕೆ ಶ್ಲಾಘನೀಯ.