ಬೆಂಗಳೂರು:- ಮಹಿಳೆ ಅಪಹರಣದ ಪ್ರಕರಣವೊಂದರಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ನನ್ನು ಅರೆಸ್ಟ್ ಮಾಡಲಾಗಿದೆ.
Breaking News: ಸಿದ್ದರಾಮಯ್ಯ ಮಾತಾಡುವಾಗ ಪ್ರಿಯಾಂಕ ಎಂಟ್ರಿ.. ಭಾಷಣ ನಿಲ್ಲಿಸಿದ ಸಿಎಂ..!
ಬೆಳಗ್ಗೆ ಹೊಳೆನರಸೀಪುರದ ತಮ್ಮ ಮನೆಯಲ್ಲಿದ್ದ ರೇವಣ್ಣ ಸಾಯಂಕಾಲದ ಹೊತ್ತಿದೆ ನಗರದ ಪದ್ಮನಾಭನಗರದಲ್ಲಿರುವ ತಮ್ಮ ತಂದೆ ಹೆಚ್ ಡಿ ದೇವೇಗೌಡರ ಮನೆಗೆ ಬಂದಿದ್ದರು. ಮಹಿಳೆ ಅಪಹರಣ ಪ್ರಕರಣದಲ್ಲಿ ರೇವಣ್ಣರ ನಿರೀಕ್ಷಣಾ ಜಾಮೀನು ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದ ಕೂಡಲೇ ಎಸ್ಐಟಿ ಅಧಿಕಾರಿಗಳು, ರೇವಣ್ಣ ಮಾಜಿ ಪ್ರಧಾನಿಯವರ ಮನೆಯಲ್ಲಿರುವ ಮಾಹಿತಿ ಪಡೆದು ಅವರನ್ನು ತಮ್ಮ ವಶಕ್ಕೆ ಪಡೆದರು.
ಅಧಿಕಾರಿಗಳು ರೇವಣ್ಣರನ್ನು ಬೆಂಗಳೂರು ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿ ಕಾರ್ಲಟನ್ ಭವನಕ್ಕೆ ಕರೆದೊಯ್ದರು. ಇಲ್ಲಿರುವ ಸಿಐಡಿ ಕಚೇರಿಯಲ್ಲೇ ಎಸ್ಐಟಿ ಕಚೇರಿ ಇದೆ. ಭವನದ ಸುತ್ತ ಬ್ಯಾರಿಕೇಡ್ ಗಳನ್ನು ಹಾಕಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.