ಹೊಸಕೋಟೆ:- ಇತಿಹಾಸ ಶ್ರೀ ಗಂಗಮ್ಮ ದೇವಿಯ ಮುಖ್ಯದ್ವಾರ ಉದ್ಘಾಟನೆ ಮಾಡಿ ಜನರಿಗೆ ಅನುಕೂಲ ಕಲ್ಪಿಸಿದ ಆಲಪ್ಪನಹಳ್ಳಿ ಗ್ರಾಮಸ್ಥರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಆಲಪ್ಪನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆಯಾದ ಶ್ರೀ ಗಂಗಮ್ಮ ದೇವಿಯು ನೆಲೆಸಿದ್ದು ಗ್ರಾಮದ ಪ್ರವೇಶದಲ್ಲಿ ಒಂದು ಮುಖ್ಯ ದ್ವಾರ ಇಲ್ಲದ ಕಾರಣ ಇದನ್ನು ಮನಗಂಡು ಗ್ರಾಮದ ಪ್ರವೇಶದಲ್ಲಿ ಶ್ರೀ ಗಂಗಮ್ಮ ದೇವಿಯ ಮುಖ್ಯ ದ್ವಾರವನ್ನು ನಿರ್ಮಾಣ ಮಾಡಿ ಇಂದು ಲೋಕಾರ್ಪಣೆ ಮಾಡಿದ್ದಾರೆ.
ದರ್ಶನ್ ಗೆ ಡೈಮಂಡ್ ವಾಚ್ ಗಿಫ್ಟ್ ನೀಡಿದ ಸಮಲತಾ: ಬೆಲೆ ಎಷ್ಟು ಗೊತ್ತಾ?
ಮುಖ್ಯದ್ವಾರವನ್ನು ಉದ್ಘಾಟನೆ ಮಾಡಿ ನಂತರ ಮಾತನಾಡಿದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೋಭಾ ಜಯರಾಮ್ ಅವರು, ಗ್ರಾಮಕ್ಕೆ ಯಾರಾದರೂ ಪ್ರವೇಶ ಮಾಡುವಾಗ ದೇವಿಯ ಮುಖ್ಯದ್ವಾರದ ಮುಕಾಂತರ ಬಂದರೆ ಅವರಿಗೆ ಒಳಿತಾಗುತ್ತದೆ ಗ್ರಾಮ ದೇವತೆಯ ಆಶೀರ್ವಾದ ದೊರೆತು ಗ್ರಾಮಕ್ಕೆ ಬಂದಂತಾಗುತ್ತದೆ.
ಗ್ರಾಮದಲ್ಲಿ ಸುಭಿಕ್ಷೆ ನೆಲಸಿ ಗ್ರಾಮ ಶಾಂತಿಯುತವಾಗಿರತ್ತದೆ ಎಂಬ ನಂಬಿಕೆ. ಶಾಸಕ ಶರತ್ ಬಚ್ಚೇಗೌಡರ ಮಾರ್ಗದರ್ಶನದಲ್ಲಿ ಇಂದು ಮುಖ್ಯದ್ವಾರ ಲೋಕಾರ್ಪಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಇದೇ ಸಂದರ್ಭದಲ್ಲಿ
ಕೆಂಪಣ್ಣನವರ ರಾಮೂರ್ತಿ ಮುನಿರಾಜು ಮಂಜುನಾಥ್ ಬೈರೇಗೌಡ ನಾಗರಾಜ್, ಶಶಿಕುಮಾರ್,ಮಾಜಿ ಗ್ರಾ ಪಂ ಅಧ್ಯಕ್ಷ ಶೋಭ ಜಯರಾಮ್
ಗ್ರಾ ಪಂ ಸದಸ್ಯ ಸೊಣ್ಣೇಗೌಡ ಮಂಜುಳ, ಮಾಜಿ ಗ್ರಾ ಪಂ ಸದಸ್ಯೆ ನಾಗವೇಣಿ ಅನಿಲ್ ಕುಮಾರ್,
ಪ್ರಸಾದ್ ಜಿಲ್ಲಾ ಪಂಚಾಯತ್ , ಮಂಜುನಾಥ್ ತಾಲ್ಲೂಕು ಪಂಚಾಯತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.