ಚಿತ್ರದುರ್ಗ:- ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ತುಂಬಾ ದಕ್ಷವಾಗಿದೆ ಎಂದು ಸಚಿವ ಡಿ ಸುಧಾಕರ್ ಹೇಳಿದ್ದಾರೆ.
ಮೇ 21ರಿಂದ 26ರ ವರೆಗೆ ಕರಿಯಮ್ಮದೇವಿಯ ಜಾತ್ರಾಮಹೋತ್ಸವ ಕಾರ್ಯಕ್ರಮ….!
ಈ ಸಂಬಂಧ ಮಾತನಾಡಿದ ಅವರು,ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ತುಂಬಾ ದಕ್ಷವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯುತ್ತಿದೆ. ಅಂಜಲಿ ಹತ್ಯೆ ಕೇಸ್ ಗೆ ನಮ್ಮ ನಾಯಕರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. SIT ಸ್ವತಂತ್ರ ತನಿಖಾ ಸಂಸ್ಥೆ ಅದಕ್ಕೆ ಸರ್ಕಾರದಿಂದ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ. ಅವರು ಸಮರ್ಥವಾಗಿ ತನಿಖೆ ಮಾಡ್ತಿದ್ದಾರೆ ಎಂದರು.
ಇನ್ನು ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕೇಂದ್ರ ಸರ್ಕಾರದವರೇ ಸಹಕಾರ ಕೊಡ್ತಿಲ್ಲ. ಅಪರಾಧಿಗೆ ಡಿಪ್ಲಾಮೋಟಿಕ್ ಪಾಸ್ ಪೋರ್ಟ್ ಕೊಟ್ಟಿದೆ ಹೀಗಾಗಿ ಅಪರಾಥಿ ನಾಪತ್ತೆಯಾಗಿ ಇಪ್ಪತ್ತು ದಿನ ಕಳೆದರೂ ಬಂಧಿಸಲು ಆಗುತ್ತಿಲ್ಲ. ಈ ಪ್ರಪಂಚದಲ್ಲಿ ಎಲ್ಲಿ ಇದ್ದಾರೆ ಎಂದು ಕಂಡು ಹಿಡಿದು 10 ನಿಮಿಷದಲ್ಲಿ ಕರ್ಕೊಂಡ್ ಬರಬಹುದು. ಆದರೆ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ. ಎನ್ಡಿಎ ಮೈತ್ರಿ ಮಾಡಿಕೊಂಡು ಅಪರಾಧಿಗೆ ಕೇಂದ್ರ ಸರ್ಕಾರವೇ ಭದ್ರತೆ ಕೊಡ್ತಿದೆ. ಕೇಂದ್ರ ಸರಕಾರ ಮನಸು ಮಾಡಿದ್ರೆ ಒಂದು ನಿಮಿಷದಲ್ಲಿ ಹಿಡಿದು ತರಬಹುದು. ಸಾವಿರಾರು ಹೆಣ್ಣುಮಕ್ಕಳು ದುಃಖತಪ್ತರಾಗಿದ್ದಾರೆ. ಆದರೆ ಕೇಂದ್ರದ ಅಧೀನದಲ್ಲಿ ಬರುವ ತನಿಖಾ ಸಂಸ್ಥೆಗಳಿಂದ ಪಾಸ್ಪೋರ್ಟ್ ಕ್ಯಾನ್ಸಲ್ ಮಾಡಿಸಲಿ. ಈ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿಲ್ಲ ಎಂದು ಹರಿಹಾಯ್ದರು.
![](https://ainlivenews.com/wp-content/uploads/2024/01/Ad-Banner-copy-scaled.jpg)