ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪೊಲೀಸ್ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾತನಾಡಿ ಇತ್ತೀಚಿನ ದಿನಮಾನಗಳಲ್ಲಿ ಕಳ್ಳರು ಮನೆಯ ಕಿಟಕಿಗಳನ್ನ ಮುರಿದು ಒಳಗಡೆ ಹೋಗಿ ಕಳ್ಳತನ ಮಾಡಿದ್ದ ಪ್ರಕರಣಗಳು ಬೆಳಕಿಗೆ ಬಂದಿದೆ. ಆ ದೃಷ್ಟಿಯಿಂದ ಮನೆ ಮಾಲೀಕರು ತಮ್ಮ ಕಿಟಕಿ ಭಾಗಗಳನ್ನು ಭದ್ರವಾಗಿ ಹಾಕಿಕೊಳ್ಳಿ ಮತ್ತು ಕಳ್ಳರಿಂದ ಎಚ್ಚರಿಕೆ ವಹಿಸಿ.
ಒಂದು ವೇಳೆ ನಿಮ್ಮ ಊರಲ್ಲಿ ಮತ್ತು ಓಣಿಯ ಅಕ್ಕ ಪಕ್ಕದಲ್ಲಿ ಸಂಶಯ ಆಸ್ಪದಕ ವ್ಯಕ್ತಿಗಳು ಕಂಡುಬಂದಲ್ಲಿ ಹತ್ತಿರ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿ ಮತ್ತು ಪೊಲೀಸರೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಜಮಖಂಡಿ ಡಿ ವೈ ಎಸ್ ಪಿ ಶಾಂತಕುಮಾರ್ ಹೇಳಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ