ಶಿವಮೊಗ್ಗ: ದುರುದ್ದೇಶದಿಂದ ಜನರ ಭಾವನೆಗಳನ್ನು ಕೆರಳಿಸುವಂತಹ ಜಾಹೀರಾತುಗಳನ್ನು ಕಾಂಗ್ರೆಸ್ ಪ್ರಕಟಿಸುತ್ತಿದೆ. ದೇಶದಲ್ಲಿ ಇರುವ ಎಲ್ಲ ಮುಸ್ಲಿಮರೂ ಕೆಟ್ಟವರಲ್ಲ. ಕೆಲ ಮುಸ್ಲಿಮರು ಕೆಟ್ಟವರಿದ್ದಾರೆ. ಅಂತಹವರ ವಿರುದ್ಧ ಕ್ರಮ ಅನಿವಾರ್ಯ ಎಂದು ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಹೇಳಿದರು. ಪ್ರಚಾರ ಬಹಿರಂಗ ಸಭೆ ಉದ್ದೇಶಿಸಿ ರಾಘವೇಂದ್ರ ಅವರು ಮಾತನಾಡಿದರು.
ಚುನಾವಣೆ ಉದ್ದೇಶಕ್ಕೆ ನಾನು ಬಾಡಿಗೆ ಮನೆ ಮಾಡಿ ಶಿವಮೊಗ್ಗದಲ್ಲಿ ವಾಸ ಇಲ್ಲ. ನಿಮ್ಮಗಳ ಜತೆ ಇದ್ದು 15 ವರ್ಷದಿಂದ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಜನರಿಗಾಗಿ ಇನ್ನಷ್ಟು ಕೆಲಸ ಮಾಡಬೇಕು ಎಂಬ ಹಂಬಲ ಇದೆ ಎಂದು ಬಿ. ವೈ. ರಾಘವೇಂದ್ರ ಹೇಳಿದರು.
Car airbags: ನಿಮ್ಮ ಕಾರಿನಲ್ಲಿರುವ ಏರ್ʼಬ್ಯಾಗ್ ಅಸಲಿಯೋ, ನಕಲಿಯೋ ತಿಳಿಯುವುದೇಗೆ ಗೊತ್ತಾ..? ಈ ಸ್ಟೋರಿ ನೋಡಿ
ಪ್ರಧಾನಿ ನರೇಂದ್ರ ಮೋದಿ ಭಾರತ ನಿರ್ಮಾಣದ ಕನಸನ್ನು ವಿಸ್ತಾರವಾಗಿ ಹೊಂದಿದ್ದು, 10 ವರ್ಷದ ಅವಧಿಯಲ್ಲಿ ಸಾಕಷ್ಟು ಪ್ರಗತಿ ಮಾಡಿದ್ದಾರೆ. ಚುನಾವಣೆ ಉದ್ದೇಶದಿಂದ ಕಾಂಗ್ರೆಸ್ ಜನ ವಿರೋಧಿಯಾಗಿ ವರ್ತಿಸುತ್ತಿದೆ. ಸುಳ್ಳು ಟೀಕೆಗಳ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.