ಬೆಳಗಾವಿ: ಬೆಳಗಾವಿ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಕುರಿತು ಸಭೆ ನಡೆಸಲು ಬಂದಿದ್ದೇನೆ ಎಂದು ಬೆಳಗಾವಿಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಅನೀರಿಕ್ಷಿತವಾಗಿ ತಾಲೂಕಾ ಕಚೇರಿಗೆ ಸರ್ಪ್ರೈಸ್ ವಿಸಿಟ್ ಮಾಡಿದೆ. ಸಾರ್ವಜನಿಕರ ಕುಂದು ಕೊರತೆಗಳು ಹಾಗೂ ಕಂದಾಯ ಇಲಾಖೆಯಲ್ಲಿ ಆಗುತ್ತಿರುವ ಕೆಲಸಗಳ ಮಾಹಿತಿ ಪಡೆದೆ. ಎರಡು ಗಂಟೆ ಕಾಲ ತಹಶಿಲ್ದಾರರ ಕಚೇರಿ,ಸಬ್ ರಿಜಿಸ್ಟರ್ ಕಚೇರಿಗೆ ಸರ್ಪ್ರೈಸ್ ವಿಸಿಟ್ ಇಟಗೊಂಡಿದ್ದೆ,
ಬೆಳಗಾವಿಯಲ್ಲಿ ನಾನು ಎರಡನೇ ಸಭೆ ಮಾಡುತ್ತಿದ್ದೇನೆ. ಜುಲೈ ನಂತರ ಕಂದಾಯ ಇಲಾಖೆ ಎರಡನೇ ಪರಿಶೀಲನೆ ಸಭೆ ನಡಿತಾ ಇದೆ ಎಂದರು. ಇನ್ನೂ ಮುಖ್ಯವಾಗಿ ಕದಾಯ ಇಲಾಖೆಯಲ್ಲಿ ಜನಗಳದ್ದು ಸಾಕಷ್ಟು ಸಮಸ್ಯೆಗಳ ಇಟ್ಟುಕೊಂಡು ಬರುತ್ತಾರೆ. ಡಿಸಿ,ಎಸಿ,ತಹಶಿಲ್ದಾರ ಹತ್ತರ ಕಂದಾಯ ಇಲಾಖೆಯಲ್ಲಿ ವ್ಯಾಜ್ಯ ಪ್ರಕರಣಗಳು ಇರುತ್ತವೆ.
ಜನರು ಕಂದಾಯ ಇಲಾಖೆಯಲ್ಲಿ ಜನರು ತಮ್ಮ ಸಮಯವನ್ನ ವ್ಯರ್ಥ ಮಾಡಬಾರದು ಎನ್ನುವ ಉದ್ದೇಶಿದಿಂದ ಈ ರೀತಿ ಮಾಡುತ್ತಿದ್ದೇವೆ. ಈ ಉದ್ದೇಶಕ್ಕಾಗಿ ಸರ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಡುತ್ತಿದ್ದೇವೆ. 350 ಸರಕಾರಿ ಸರ್ವೆ ಹುದ್ದೆಗಳನ್ನ ನೇಮಕ ಮಾಡಲು ಮುಖ್ಯಮಂತ್ರಿ ಅನುಮತಿ ನೀಡಿದ್ದಾರೆ. ಸರ್ವೆ ಮಾಡಲು ಹೊಸ ತಂತ್ರಜ್ಞಾನದ ಉಪಕರಣಗಳನ್ನ ಕೂಡಲು ಸೂಚನೆ ನೀಡಿದ್ದೇನೆ. ಹೆಚ್ಚಿನ ಸರ್ವೆ ಕೆಲಸಗಳನ್ನ ಮಾಡಲು ಈ ಒಂದು ತಂತ್ರಜ್ಞಾನದಿಂದ ಆಗುತ್ತೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.