ಇನ್ನು ಒಂದು ವರ್ಷದೊಳಗೆ ಇಡೀ ಏಷ್ಯಾದಾದ್ಯಂತ ಕಾಲ್ ಸೆಂಟರ್ ಗಳು ಬಂದ್ ಆಗಲು ಕೃತಕ ಬುದ್ಧಿಮತ್ತೆ ಕಾರಣವಾಗುತ್ತದೆ ಎಂದು ಟಿಸಿಎಸ್ ಸಿಇಒ ಕೆ ಕೃತಿವಾಸನ್ ತಿಳಿಸಿದ್ದಾರೆ.
ಫೈನಾನ್ಷಿಯಲ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸುಧಾರಿತ ಕೃತಕ ಬುದ್ಧಿಮತ್ತೆಯು ಉದ್ಯೋಗ ಕಡಿತದ ಮೇಲೆ ಪ್ರಭಾವ ಬೀರಲಿದೆ. ಇಂದು ಎಲ್ಲ ದೇಶಗಳು ಕೃತಕ ಬುದ್ಧಿಮತ್ತೆಯನ್ನು ಹೆಚ್ಚೆಚ್ಚು ಬಳಸಿಕೊಳ್ಳುತ್ತಿವೆ. ಇದು ಉದ್ಯೋಗ ಕಡಿತವಾಗಲು ಕಾರಣವಾಗುತ್ತಿವೆ. ಕಾಲ್ ಸೆಂಟರ್ಗಳ ಮೇಲೆ ಎಐ ದುಷ್ಪರಿಣಾಮ ಬೀರಲಿವೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಕಾಲ್ ಸೆಂಟರ್ಗಳು ಬಾಗಿಲು ಮುಚ್ಚಲಿವೆ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನು ಇತ್ತೀಚಿಗೆ ಮಾಧ್ಯಮಗಳಿಗೆ ಮಾತನಾಡಿದ್ದ ಲಿಂಕ್ಡ್ ಇನ್ನ ಮುಖ್ಯ ಉತ್ಪನ್ನ ಅಧಿಕಾರಿ ಟೊಮರ್ ಕೋಹೆನ್ ಅವರು ಭಾರತದಲ್ಲಿನ ಅರ್ಧಕ್ಕಿಂತ ಹೆಚ್ಚು ಉದ್ಯೋಗಗಳ ಮೇಲೆ ಕೃತಕ ಬುದ್ಧಿಮತ್ತೆ (ಎಐ) ಪ್ರಭಾವ ಬೀರಲಿದೆ ಎಂದು ಹೇಳಿದ್ದರು. ಭಾರತೀಯ ವೃತ್ತಿಪರರು ಜಾಗತಿಕವಾಗಿ ಎಲ್ಲರಿಗಿಂತಲೂ ಹೆಚ್ಚಾಗಿ ಕೃತಕ ಬುದ್ಧಿಮತ್ತೆ ಕೌಶಲ್ಯಗಳನ್ನು ಬಳಸುತ್ತಾರೆ. ಲಿಂಕ್ಡ್ಇನ್ನಲ್ಲಿ ಕೃತಕ ಬುದ್ಧಿಮತ್ತೆ ಸಂಬಂಧಿತ ಉದ್ಯೋಗದ ಉಲ್ಲೇಖಗಳು 21 ಪಟ್ಟು ಹೆಚ್ಚಾಗಿವೆ. ಹೆಚ್ಚು ಕೃತಕ ಬುದ್ಧಿಮತ್ತೆ ಪ್ರತಿಭೆಯನ್ನು ಹೊಂದಿರುವ ಅಗ್ರ ಐದು ದೇಶಗಳಲ್ಲಿ ಭಾರತವು ಸೇರಿದೆ,” ಎಂದು ಎಕನಾಮಿಕ್ ಟೈಮ್ಸ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಟೊಮರ್ ಕೋಹೆನ್ ಹೇಳಿದ್ದರು.