ಬೆಂಗಳೂರು;- ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೆಳಕಿಗೆ ಬಂದಿದ್ದ ಚಿಲುಮೆ ಸಂಸ್ಥೆ ಪ್ರಕರಣ ಸಂಬಂದ ಮತದಾರರ ಖಾಸಗಿ ಮಾಹಿತಿ ಸಂಗ್ರಹಕ್ಕೆ ಅವಕಾಶ ಮಾಡಿಕೊಡಲಾಗಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿರುದ್ಧ ತನಿಖೆ ಮಾಡಿ ವರದಿ ನೀಡಲು ರಾಜ್ಯದ ಮುಖ್ಯಕಾರ್ಯದರ್ಶಿಗಳಿಗೆ ರಾಜ್ಯ ಸರ್ಕಾರ ಸೂಚಿಸಿದೆ. ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಯೂ ಆಗಿದ್ದರು. ತುಷಾರ್ ಗಿರಿನಾಥ್ ಅವರು ಚಿಲುಮೆ ಸಂಸ್ಥೆಗೆ ಮತಪಟ್ಟಿ ಪರಿಷ್ಕರಣೆಗೆ ಅವಕಾಶ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜುಲೈ 3ರಂದು ಪತ್ರ ಬರೆದು ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಪತ್ರದಲ್ಲಿ ಮತದಾರರ ಖಾಸಗಿ ವಿಷಯ ಸಂಗ್ರಹಿಸಲು ಚಿಲುಮೆ ಸಂಸ್ಥೆಗೆ ಅವಕಾಶ ನೀಡಿ ಕರ್ತವ್ಯಲೋಪ ಎಸಗಿರುವ ಆರೋಪದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿರುದ್ಧ ಹಾಗೂ ಚಿಲುಮೆ ಸಂಸ್ಥೆಯ ಲೋಪದ ಬಗ್ಗೆ ಪೂರ್ಣ ಪ್ರಮಾಣದ ತನಿಖೆ…
Author: Author AIN
ಬೆಂಗಳೂರು;- ನಟ ನಾಗಭೂಷಣ್ ಕಾರಿಗೆ ಮಹಿಳೆ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಲ್ಲಿ ಅಪಘಾತದ ಅಸಲಿಯತ್ತು ಬಯಲಾಗಿದೆ. ನಟ ನಾಗಭೂಷಣ್ ಅವರು ಹೊಸದಾಗಿ ಕಾರು ಖರೀದಿಸಿದ್ದರು. ಕಾರು ಓಡಿಸುತ್ತಿದ್ದಾಗ ನಾಗಭೂಷಣ್ ನಿಯಂತ್ರಣ ಕಾರು ಸಿಕ್ಕಿರಲಿಲ್ಲ. 70 ರಿಂದ 80 ಕಿಮೀ ವೇಗದಲ್ಲಿದ್ದ ಕಾರು, ರಸ್ತೆಯಲ್ಲಿ ಹಂಪ್ಸ್ ಇದ್ರೂ ಕಾರು ಸ್ಲೋ ಆಗಿರಲಿಲ್ಲ. ಕಂಟ್ರೋಲ್ ಸಿಗದೆ ಪುಟ್ ಪಾತ್ ಗೆ ನುಗ್ಗಿದೆ. ಇದೇ ವೇಳೆ ವಾಕ್ ಮಾಡುತ್ತಿದ್ದ ಕೃಷ್ಣ,ಪ್ರೇಮಾ ದಂಪತಿಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಪ್ರೇಮಾ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೃಷ್ಣನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಅಪಘಾತವೆಸಗಿ ನಾಗಭೂಷಣ್ ತಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸರ ಮುಂದೆ ದಂಪತಿ ಫುಟ್ ಪಾತ್ ಬಿಟ್ಟು ರಸ್ತೆಗೆ ಬಂದಿದ್ದಕ್ಕೆ ಅಪಘಾತವಾಗಿದೆ ಎಂದು ನಾಗಭೂಷಣ್ ಹೇಳಿದ್ದ. ಪೊಲೀಸರ ತನಿಖೆಯಲ್ಲಿ ದಂಪತಿ ರಸ್ತೆಗೆ ಬಂದಿರಲಿಲ್ಲ ಎಂಬುದು ಪತ್ತೆಯಾಗಿದೆ. ನಾಗಭೂಷಣ್ ಕಾರು ಫುಟ್ ಪಾತ್ ಗೆ ನುಗ್ಗಿ ಅಪಘಾತವಾಗಿರುವುದು ಬೆಳಕಿಗೆ ಬಂದಿದೆ. ಸದ್ಯ…
ಬೆಂಗಳೂರು;- ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚು ಜನರು ಮೆಟ್ರೋ ಸೇವೆಯನ್ನು ಅವಲಂಬಿಸಿದ್ದಾರೆ. ಆದರೆ ಇತ್ತೀಚೆಗೆ ಬೆಂಗಳೂರು ಮೆಟ್ರೋ ಸಂಚಾರ ಎಷ್ಟು ಸೇಫ್..? ಎನ್ನುವ ಪ್ರಶ್ನೆ ಮೂಡಿದೆ. ದಿನೇ ದಿನೇ ನಮ್ಮ ಮೆಟ್ರೋದಲ್ಲಿನ ಅವಘಡ ಆತಂಕ ತಂದ್ಡೊಡ್ತಿದೆ. ಬೆಂಗಳೂರು ಮೆಟ್ರೋದಲ್ಲಿ ಮೇಲಿಂದ ಮೇಲೆ ಅವಾಂತರಗಳು ಸೃಷ್ಟಿ ಆಗಿದ್ದು, ಹೀಗಾಗಿ ಮೆಟ್ರೋ ಹತ್ತೋಕೆ ಪ್ರಯಾಣಿಕರು ದಿಗಿಲು ಪಡುತ್ತಿದ್ದಾರೆ. ನಿನ್ನೆ ಹಳಿ ತಪ್ಪಿದ ರೀ ರೈಲು ಮತ್ತಷ್ಟು ಆತಂಕ ಹೆಚ್ಚಿದೆ. ಇಂದು ಬೆಳಗ್ಗೆಯಿಂದ ಆತಂಕದಲ್ಲೇ ಮೆಟ್ರೋ ಪ್ರಯಾಣಿಕರು ಹತ್ತುತ್ತಿದ್ದಾರೆ. ಹಸಿರು ಮಾರ್ಗದ ಪ್ರಯಾಣಿಕರಲ್ಲಿ ಹೆಚ್ಚಿನ ಆತಂಕ ಇದ್ದು, ಏನಾಗುತ್ತೋ ಏನೋ ಅನ್ನೋ ಆತಂಕದದಲ್ಲಿ ಪ್ರಯಾಣಿಕರು ಓಡಾಡ್ತಿದ್ದಾರೆ. ನಿನ್ನೆ ಮೆಟ್ರೋದಲ್ಲಿ ನಡೆದ ಘಟನೆಯಿಂದ ಪ್ರಯಾಣಿಕರಿಗೆ ಟೆನ್ಷನ್ ಆಗಿದ್ದು, ಮೆಟ್ರೋದಲ್ಲಿ ಟ್ರ್ಯಾಕ್ ಮೈಂಟೈನ್ಸ್ ಸಮರ್ಪಕವಾಗಿ ಮಾಡ್ತಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ. ಕೋಲ್ಕತ್ತಾ, ಹಾಗೂ ದೆಹಲಿ ಮೆಟ್ರೋದಲ್ಲಿ ಕೋಚ್ಗಳು ಹಳಿತಪ್ಪಿದ ಉದಾಹರಣೆಗಳಿವೆ ಆದ್ರೆ ನಿನ್ನೆ ಬೆಂಗಳೂರು ಮೆಟ್ರೋದಲ್ಲಿ ರೀ ರೈಲು ಹಳಿ ತಪ್ಪಿ ಪ್ರಾಬ್ಲಂ ಆಗಿದೆ, ಹಳಿ ನಿರ್ವಹಣೆ ನಿರ್ಲಕ್ಷ್ಯ…
ಸ್ಕೋಡಾ ಆಟೊ ಇಂಡಿಯಾ ಭಾರತದ ಅತ್ಯಂತ ಸುರಕ್ಷಿತ ಕಾರುಗಳ ಉತ್ಪಾದಕ ಎಂಬ ತನ್ನ ಪರಂಪರೆಯನ್ನು ಮುಂದುವರಿಸಿದೆ ಮತ್ತು ವಯಸ್ಕರು ಹಾಗೂ ಮಕ್ಕಳಿಗೆ 5-ಸ್ಟಾರ್ ಮಾನದಂಡದ ಕಾರುಗಳನ್ನು ತರುತ್ತಿದ್ದು ಅದರ ಉತ್ಪನ್ನದ ಕ್ರಮಗಳು 2023ರಲ್ಲಿಯೂ ಮುಂದುವರಿಯುತ್ತವೆ. ಈ ಬಾರಿ ಹಬ್ಬದ ಋತುವಿನಲ್ಲಿ ವಿಸ್ತರಿಸಿದ ಪೋರ್ಟ್ ಫೋಲಿಯೊ ಮಾದರಿಯಲ್ಲಿ ಆಕರ್ಷಕ ಹಬ್ಬದ ಅವಧಿಯ ಬೆಲೆಯನ್ನು ಹೊಂದಿದ್ದು ಕಾರುಗಳಲ್ಲಿ ಅಸಂಖ್ಯ ಹೊಸ ವಿಶೇಷತೆಗಳು ಮತ್ತು ಹೊಚ್ಚಹೊಸ ಸ್ಲೇವಿಯಾ ಮ್ಯಾಟ್ಟೆ ಎಡಿಷನ್ ಹೊಂದಿದೆ. ಈ ಕುರಿತು ಬುಧವಾರ ಮಾಹಿತಿ ನೀಡಿದ್ದು, ಈ ಉನ್ನತೀಕರಿಸಿದ ಪೋರ್ಟ್ ಫೋಲಿಯೊ ಕುರಿತು ಸ್ಕೋಡಾ ಆಟೊ ಇಂಡಿಯಾದ ಬ್ರಾಂಡ್ ಡೈರೆಕ್ಟರ್ ಪೆಟ್ರ್ ಸೊಲ್ಕ್, “ನಮ್ಮ ಪ್ರಾಡಕ್ಟ್ ಅಫೆನ್ಸಿವ್ ಹೆಚ್ಚು ಗ್ರಾಹಕರನ್ನು ಸ್ಕೋಡಾ ಕುಟುಂಬಕ್ಕೆ ಸ್ವಾಗತಿಸುವ ಗುರಿ ಹೊಂದಿದೆ ಮತ್ತು ದೇಶದ ಹಬ್ಬದ ಸ್ಫೂರ್ತಿಗೆ ಹೊಂದಿಕೊಂಡಿದೆ. ಇದು ನಮ್ಮ ಗ್ರಾಹಕರಿಗೆ ಸದಾ ಅತ್ಯಂತ ಸುರಕ್ಷಿತ ಕೌಟುಂಬಿಕ ಕಾರುಗಳು ಮತ್ತು ಉನ್ನತ ಮಟ್ಟದ ಗ್ರಾಹಕ ಸಂತೃಪ್ತಿಯನ್ನು ನಮ್ಮ ಉತ್ಪನ್ನಗಳು ಮತ್ತು ಸೇವೆಗಳಿಂದ ಒದಗಿಸುವುದು ನಮ್ಮ ಪ್ರಯತ್ನವಾಗಿದೆ.…
ಮಂಡ್ಯ;- ಕಾವೇರಿ ಕೊಳ್ಳದ ರೈತರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಅಲ್ಪ ಮಳೆ ಹಿನ್ನಲೆ, ಕೆ.ಆರ್. ಎಸ್ ಡ್ಯಾಂನ ಒಳ ಹರಿವು ಪ್ರಮಾಣ ಏರಿಕೆ ಆಗಿದೆ. ಇಂದು ಡ್ಯಾಂಗೆ 9052 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಡ್ಯಾಂನಿಂದ 1482 ಕ್ಯೂಸೆಕ್ ಹೊರಹರಿವು ಹೆಚ್ಚಾಗಿದೆ. ನಿನ್ನೆ 99.54 ಅಡಿ ಇದ್ದ ನೀರಿನ ಮಟ್ಟ ಇಂದು 100.36 ಅಡಿಗೆ ನೀರಿನ ಮಟ್ಟ ಏರಿಕೆ ಆಗಿದೆ. 49.542 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 23.095 ಟಿಎಂಸಿ ನೀರು ಸಂಗ್ರಹವಾಗಿದ್ದು, ಅತ್ತ ತಮಿಳುನಾಡಿಗೆ ನೀರು ಬಿಡುಗಡೆ ಮುಂದುವರಿದಿದೆ. ಕೆ.ಆರ್.ಎಸ್ ಜೊತೆ ಕಬಿನಿ ಡ್ಯಾಂನಿಂದಲೂ ನೀರು ಬಿಡುಗಡೆ ಆಗಿದ್ದು, ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಹರಿಯುತ್ತಿದೆ. ಕೆ.ಆರ್.ಎಸ್ ಡ್ಯಾಂ ನ ನೀರಿನ ಮಟ್ಟ; ಗರಿಷ್ಠ ಮಟ್ಟ- 124.80 ಅಡಿ ಇಂದಿನ ಮಟ್ಟ- 100.36 ಅಡಿ ಗರಿಷ್ಠ ಸಾಮರ್ಥ್ಯ- 49.452 ಟಿಎಂಸಿ ಇಂದಿನ ಸಾಮರ್ಥ್ಯ- 23.095 ಟಿಎಂಸಿ ಒಳಹರಿವು- 9052 ಕ್ಯೂಸೆಕ್ ಹೊರಹರಿವು- 1482…
ಯಾದಗಿರಿ: ಶಾಮನೂರು ಶಿವಶಂಕರಪ್ಪ ಲಿಂಗಾಯತ ಸಿಎಂ ಹೇಳಿಕೆ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಯಾವ ಡಿಕೆಶಿಗೂ, ಶಾಮನೂರುಗೂ ಅಂಜಬ್ಯಾಡ್ರಿ. ಲಿಂಗಾಯತ, ಕುರುಬ ಇದು ಅಲ್ವೇ ಅಲ್ಲ. ಇದು ಮೂರ್ಖತನದ ಹೇಳಿಕೆ. ಜಾತಿ ಜನಾಂಗದ ಮೇಲೆ ಯಾರೂ ಮುಖ್ಯಮಂತ್ರಿ ಆಗಲ್ಲ. ಯಾರು ಸಮರ್ಥ ಆಡಳಿತ ಕೊಡ್ತಾರೋ ಅವರು ಸಿಎಂ ಆಗ್ಬೇಕು. ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಇಳಿಸಲು ಕುತಂತ್ರ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಆಡಳಿತ ಮಾಡಲು ಕಾಂಗ್ರೆಸ್ ನವರು ಬಿಡುತ್ತಿಲ್ಲ. ಒಬ್ಬೊಬ್ಬ ಶಾಸಕರು ತಮ್ಮ ಅಸಮಾಧಾನವನ್ನು ಸ್ಪೋಟ ಮಾಡ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಆಡಳಿತ ಮಾಡಲಿಕ್ಕೆ ಆಗುತ್ತಿಲ್ಲ. ಇದರಿಂದ ತಮ್ಮದೆ ಹಾದಿಯಲ್ಲಿ ಸಿದ್ದರಾಮಯ್ಯ ಹೊಗ್ತಿದ್ದಾರೆ. ಅದಕ್ಕೆ ಒಳ್ಳೆಯ ಆಡಳಿತ ಕೊಟ್ಟು ಧೈರ್ಯವಾಗಿ ನಿರ್ಣಯ ತೆಗೆದುಕೊಳ್ಳಿ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಪರ ಯತ್ನಾಳ್ ಬ್ಯಾಟ್ ಬೀಸಿದ್ದಾರೆ ಇನ್ನೂ ಡಿಸೆಂಬರ್ ನಂತರ ಸರ್ಕಾರ ಇರೋದಿಲ್ಲ. ಲೋಕಸಭಾ ಚುನಾವಣೆ ಬಳಿಕ ಹೊಸ ಸರ್ಕಾರ…
ಗದಗ;- ಉದ್ಯಮಿಗೆ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿ ಅಭಿನವ ಹಾಲಶ್ರೀ ಮುಂಡರಗಿಯನ್ನು 2 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅಭಿನವ ಹಾಲಶ್ರೀ ಅವರನ್ನು ಜಿಲ್ಲೆಯ ಮುಂಡರಗಿ ಪೊಲೀಸರು ಪಟ್ಟಣದಲ್ಲಿ ಮಂಗಳವಾರ ವಿಚಾರಣೆ ನಡೆಸಿದರು. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಅಭಿನವ ಹಾಲಶ್ರೀ ಅವರನ್ನು ಮುಂಡರಗಿ ಪಟ್ಟಣಕ್ಕೆ ಕರೆತಂದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಲಯದಿಂದ ಅನುಮತಿ ಪಡೆದು ಎರಡು ದಿನಗಳ ಪೊಲೀಸ್ ಕಸ್ಟಡಿ ತೆಗೆದುಕೊಂಡರು. ಕೋರ್ಟ್ ನಿಂದ ಹಾಲಶ್ರೀ ಅವರನ್ನು ತಾಲೂಕಾ ಸರಕಾರಿ ಆಸ್ಪತ್ರೆಗೆ ಆರೋಗ್ಯ ತಪಾಸಣೆಗಾಗಿ ಕರೆದುಕೊಂಡು ಹೋಗಿ ತಪಾಸಣೆ ನಡೆಸಲಾಯಿತು. ಹಾಲಶ್ರೀ ಅವರ ಆರೋಗ್ಯವು ಸ್ಥೀರವಾಗಿದೆ ಎಂದು ವೈದ್ಯರು ತಿಳಿಸಿದ್ದು, ಪೊಲೀಸರು ಎರಡು ದಿನಗಳ ಕಾಲ ವಿಚಾರಣೆ ನಡೆಸಲಿದ್ದಾರೆ. ಅಭಿನವ ಹಾಲಶ್ರೀಗಳು ಶಿರಹಟ್ಟಿ ಮೀಸಲು ಮತಕ್ಷೇತ್ರದ ಬಿಜೆಪಿಯ ಟಿಕೆಟ್ ಕೊಡಿಸುವುದಾಗಿ ಒಂದು ಕೋಟಿ ರೂ. ಹಣ ಪಡೆದು ವಂಚಿಸಿದ್ದಾರೆ. ಶ್ರೀಗಳಿಗೆ 10 ಲಕ್ಷ ರೂ., 40 ಲಕ್ಷ ರೂ. ಹಾಗೂ 50 ಲಕ್ಷ ರೂ.ನಂತೆ ಒಟ್ಟು 1 ಕೋಟಿ…
ತುಮಕೂರು;- ಜಿಲ್ಲೆಯಲ್ಲಿ ಮಳೆಗಾಗಿ ಬಜಗೂರು ಗ್ರಾಮಸ್ಥರು ವಿಶಿಷ್ಟ ಆಚರಣೆ ಮಾಡಿದ್ದಾರೆ. ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಬಜಗೂರು ಗ್ರಾಮದಲ್ಲಿ ಮಳೆಗಾಗಿ ಚಿಕ್ಕ ಮಕ್ಕಳಿಗೆ ಮದುವೆ ಮಾಡಿಸಿದ್ದಾರೆ. ನೂರಾರು ವರ್ಷಗಳಿಂದ ಇಲ್ಲಿನ ಜನ ಇದೇ ಪದ್ದತಿ ಆಚರಿಸಿಕೊಂಡು ಬರುತ್ತಿದ್ದಾರೆ. 8 ದಿನಗಳ ಕಾಲ ಕಳಸ ಪೂಜೆ, 9ನೇ ದಿನ ಚಂದಮಾಮನ ಪೂಜೆ ಮಾಡಿ ಈ ಆಚರಣೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಚಿಕ್ಕ ಮಕ್ಕಳಿಗೆ ಮದುವೆ ಮಾಡಿಸಿ ವಿಶಿಷ್ಟ ಆಚರಣೆ ಮಾಡಲಾಗಿದೆ. ಇಬ್ಬರು ಬಾಲಕಿಯರಿಗೆ ಗಂಡು, ಹೆಣ್ಣಿನ ವೇಷ ಧರಿಸಿ ಆಚರಣೆ ಮಾಡಲಾಗುತ್ತದೆ. ಅದರಂತೆ ಮದುಮಗನಾಗಿ ಸಿಂಧು, ಮದುಮಗಳಾದ ಕೃತಿಕ ಮದುವೆ ಆಗಿದ್ದಾರೆ.
ಬೆಂಗಳೂರು;- ಬ್ರೇಕ್ ಫೇಲ್ಯೂರ್ ಆಗಿ ಡಿವೈಡರ್’ಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿರುವ ಘಟನೆ ಮಾರ್ಕೆಟ್ ಫ್ಲೈ ಓವರ್ ಮೇಲೆ ಬೆಳಗ್ಗೆ 7:10 ರ ಸುಮಾರಿಗೆ ನಡೆದಿದೆ. ಕೆ.ಆರ್.ಮಾರ್ಕೆಟ್ ನಿಂದ ಚಾಮರಾಜಪೇಟೆಗೆ ತೆರಳುತ್ತಿದ್ದ ಬಸ್ ನಲ್ಲಿ ಯಾವೊಬ್ಬ ಪ್ರಯಾಣಿಕರು ಸಹ ಇರಲಿಲ್ಲ. ಬಸ್ ನಲ್ಲಿದ್ದ ಚಾಲಕ ನಿರ್ವಾಹಕ ಅದೃಷ್ಟವಶಾತ್ ಬಚಾವ್ ಆಗಿದ್ದು, ಚಿಕ್ಕಪೇಟೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಸ್ಥಳಕ್ಕೆ ಬಿಎಂಟಿಸಿ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಬಸ್ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬ್ರೇಕ್ ಫೇಲ್ಯೂರ್ ಆಗಿ ಅಪಘಾತ ಸಂಭವಿಸಿರೋದು ಬೆಳಕಿಗೆ ಬಂದಿದೆ.
ಬೆಂಗಳೂರು; ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳ್ಳಂ ಬೆಳಗ್ಗೆಯೇ ಐಟಿ ಅಧಿಕಾರಿಗಳು ದಾಳಿ ನಡೆದಿದ್ದು, ಮುಂಜಾನೆಯೇ ಡಾ.ಸಂಧ್ಯಾ ಪಾಟೀಲ್ ಮನೆ ಮೇಲೆ ಐಟಿ ರೈಡ್ ನಡೆದಿದೆ. ಡೆಂಟಿಸ್ಟ್ ಆಗಿರುವ ಸಂಧ್ಯಾ ಪಾಟೀಲ್ ಅವರ ಪ್ರಶಾಂತ ನಗರದಲ್ಲಿರುವ ಸಂಧ್ಯಾ ಪಾಟೀಲ್ ಮನೆ ಮೇಲೆ ದಾಳಿ ನಡೆದಿದೆ. ವಿಜಯ ನಗರದಲ್ಲಿ ಕ್ಲಿನಿಕ್ ಹೊಂದಿರುವ ಸಂಧ್ಯಾ ಪಾಟೀಲ್, ಪ್ರಶಾಂತ ನಗರದಲ್ಲಿರುವ ಸಂಧ್ಯಾ ಪಾಟೀಲ್ ಮನೆ ಮೇಲೆ ದಾಳಿ ನಡೆದಿದ್ದು ಪರಿಶೀಲನೆ ನಡೆಸಿದ್ದಾರೆ.