ಬೆಂಗಳೂರು: ಬಿಜೆಪಿ ಹೈಕಮಾಂಡರ್ ನಾಯಕರು ನಮ್ಮನ್ನು ತುಂಬಾ ಗೌರವಯುತವಾಗಿ ನೋಡಿಕೊಂಡಿದ್ದಾರೆ. ಜೆಡಿಎಸ್-ಬಿಜೆಪಿ ನಾಯಕರ ನಡುವೆ ಯಾವುದೇ ವಿಶ್ವಾಸ ಕಡಿಮೆಯಾಗಿಲ್ಲ. ನಮ್ಮ ಶಕ್ತಿ ಬಗ್ಗೆ ಮತನಾಡಿದ್ದೆನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿದರು
Lok Sabha Elections: ಅಶ್ವಿನಿ ಪುನೀತ್ ರಾಜ್ ಕುಮಾರ್ ಭೇಟಿಯಾದ ಸಂಸದೆ ಶೋಭಾ ಕರಂದ್ಲಾಜೆ: ಕಾರಣವೇನು?
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ನಮಗೆ ನೀವು ರಾಜಕೀಯವಾಗಿ ವಿಷಹಾಕಿ ಕೊಂದಿದ್ದೀರಿ ನಮ್ಮ ಶಕ್ತಿಯನ್ನು ಕುಗ್ಗಿಸಲು ಹೊರಟಿದ್ದಿರಿ.ಮಂಡ್ಯದಲ್ಲಿ ನಿಖಿಲ್ಗೆ ಏನು ಮಾಡಿದ್ರಿ ಅದನ್ನ ನಾವು ಮಾಡಿದ್ರೆ ನಿಮ್ಮ ತಮ್ಮ ಮನೆಗೆ ಬರಬೇಕಿತ್ತು. ಡಿಕೆ ಸುರೇಶ್ ಗೆಲ್ಲಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ವಿ. ಆದ್ರೆ ನೀವು ಕೊಟ್ಟ ಬಳುವಳಿ ಏನು ನಮ್ಮನ್ನ ಒಡೆಯಲು ನೀವು ಪ್ರಯತ್ನಪಡುತ್ತಿದ್ದಿರಿ.ಈಗ ಜೆಡಿಎಸ್ ಕಾರ್ಯಕರ್ತರು ನಮ್ಮ ಪಕ್ಚಕ್ಕೆ ಬನ್ನಿ ನಿಮಗೆ ರಕ್ಷಣೆ ಇಲ್ಲ ಅಂತಿದ್ದಾರೆ. ಕಾರ್ಪೊರೇಷನ್ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ತಿದ್ದಿರಿ ಇಷ್ಟು ಲೀಡ್ ಕೊಡಬೇಕು ಅಂತ ಕೇಳುತ್ತಿದ್ದೀರಾ..? ಎಂದು ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.( ಶಾಲಿಗೌಡ)
ಬಿಜೆಪಿಯವರು ನನಗೆ ಗೌರವ ಕೊಟ್ಟಿದ್ದಾರೆ ನನ್ನ ಕುತ್ತಿಗೆ ಕೋಯ್ದಿಲ್ಲ.ನಿಮ್ಮ ಅನುಕಂಪ ನನಗೆ ಗೊತ್ತಿಲ್ಲ ಬೆ.ಗ್ರಾಮಾಂತರದಲ್ಲಿ ಮಸಲ್ ಪವರ್, ಹಣದ ತೈಲಿ ಇಟ್ಟುಹೊಗ್ತಿದ್ದಿರಿ.2002ರ ಚುನಾವಣೆಯನ್ನು ಡಿಕೆ ಶಿವಕುಮಾರ್ಗೆ ಅಧಿಕಾರದಲ್ಲಿದ್ರಿ. ಆಗ ದೇವೇಗೌಡರನ್ನು ಸೋಲಿಸಲು ಪ್ರಯತ್ನಿಸಿದ್ದಿರಿ.ಅದನ್ನ ನೆನಪು ಮಾಡಿಕೊಳ್ಳಿ ಎಂದು ಕಿಡಿಕಾರಿದ್ದರು.