ಬೆಂಗಳೂರು: ಬಿಜೆಪಿ ಮುಖಂಡನೊಬ್ಬ ವಾಟರ್ ಮ್ಯಾನ್ ಗೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕಲ್ಲುಬಾಳು ಗ್ರಾಮ ಪಂಚಾಯಿತಿ ಕೋನಸಂದ್ರ ಗ್ರಾಮದಲ್ಲಿ ನಡೆದಿದೆ.. ಕೋನಸಂದ್ರ ಗ್ರಾಮದ ವಾಟರ್ ಮ್ಯಾನ್ ಮಾದೇವಯ್ಯ ಹಲ್ಲೇಗೊಳಗಾದ ವ್ಯಕ್ತಿ.. ಹೌದು ಬೆಂಗಳೂರು ಹೊರಗೆ ಆನೇಕಲ್ ತಾಲೂಕಿನ ಕೊಂಸಂದ್ರ ಗ್ರಾಮದಲ್ಲಿ, ಕುಡಿಯುವ ನೀರನ್ನ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಬಾರದು ಎಂದು ಸರ್ಕಾರ ಸ್ಪಷ್ಟ ಆದರ್ಶವಿದ್ದರೂ ಬಿಜೆಪಿ ಮುಖಂಡ ನವೀನ್ ಮತ್ತು ಆತನ ತಮ್ಮ ಚೇತನ್ ಅಕ್ರಮವಾಗಿ ಮತ್ತು ಅನಧಿಕೃತವಾಗಿ ನೀರನ್ನು ಪೈಪ್ ಹೊಡೆದು ಬೇರೊಂದು ಪೈಪ್ನ ಮೂಲಕ ಕುಡಿಯುವ ನೀರನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದರು.
Hair Care: ಕೂದಲು ದಟ್ಟವಾಗಿರಲು ವಾರಕ್ಕೆ ಎಷ್ಟು ಬಾರಿ ಎಣ್ಣೆ ಹಚ್ಚಬೇಕು ಗೊತ್ತಾ?
ಈ ಬಗ್ಗೆ ವಾಟರ್ ಮ್ಯಾನ್ ಮಾದೇವಯ್ಯ ಪ್ರಶ್ನೆ ಮಾಡಿದ್ದಕ್ಕೆ ನವೀನ್ ಮತ್ತು ಆತನ ಸಹೋದರ ಚೇತನ್ ಅವರ ಮಹದೇವಯ್ಯ ಮೇಲೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.. ಇನ್ನು ಮಹದೇವಯ್ಯನಿಗೆ ಹೊಟ್ಟೆ ಹಾಗೂ ಮರ್ಮಂಗಕ್ಕೆ ಹಲ್ಲೇ ನಡೆಸಿದ್ದಾರೆ ಇನ್ನು ನವೀನ್ ಮತ್ತು ಚೇತನ್ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಮಕ್ಕಳಾಗಿದ್ದು ಬಿಜೆಪಿ ಮುಖಂಡನಾಗಿ ಉಳಿಸಿಕೊಂಡಿದ್ದ ನವೀನ್..ಇನ್ನು ಈ ಹಿಂದೆ ಮಹದೇವಯ್ಯ ಮಗ ಹಾಗೂ ಕುಟುಂಬಸ್ಥರು ಕಾಂಗ್ರೆಸ್ನ ಪರವಾಗಿ ಕೆಲಸ ಮಾಡುತ್ತಿದ್ದರು.
ಅದೇ ಮನಸ್ಸಿನಲ್ಲಿ ಇಟ್ಕೊಂಡು ನವೀನ್ ಮತ್ತು ಚೇತನ್ ಖ್ಯಾತೆ ತೆಗೆದು ಹಲ್ಲೆ ಮಾಡಿದರಂತೆ ಆರೋಪ ಕೇಳಿ ಬಂದಿದೆ ..ಇನ್ನು ಗ್ರಾಮ ಪಂಚಾಯತಿ ಅಧಿಕಾರಿಗಳು ನೆಪ ಮಾತ್ರಕ್ಕೆ ಸ್ಥಳ ಪರಿಶೀಲನೆ ಮಾಡಿದ್ದು ಹಲ್ಲೇಗೊಳಗಾದ ವಾಟರ್ ಮ್ಯಾನ್ ಬಗ್ಗೆ ಯಾವುದೇ ಕಾಳಜಿ ವಹಿಸಿಲ್ಲ ಅಂತ ವಾಟರ್ ಮ್ಯಾನ್ ಗಂಭೀರ ಮಾಡಿದ್ದಾರೆ .. ಇನ್ನು ಪ್ರಕರಣ ಸಂಬಂಧ ನವೀನ್ ಗೆ ಕರೆ ಮಾಡಿ ಕೇಳಿದಾಗ ಯಾವುದೇ ಪ್ರತ್ಯುತ್ತರ ನೀಡಲಿಲ್ಲ ..ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.