ಬೆಂಗಳೂರು: ಆಕೆಯ ಹಣದಾಹಕ್ಕೆ ರಕ್ತ ಸಂಬಂಧವೆಲ್ಲಾ ಒಂದು ವಿಚಾರವೇ ಅಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿ. ಒಡ ಹುಟ್ಟಿದವಳೇ ಅಕ್ಕನ ಮನೆಗೆ ಗೆ ದ್ರೋಹ ಬಗೆದು . ಕನ್ನ ಹಾಕಿದ್ದವಳನ್ನ ಕೆಂಗೇರಿ ಪೊಲೀಸ್ರು ಬಂಧನ ಮಾಡಿ ಜೈಲಿಗೆ ಕಳುಹಿಸಿದಾರೆ ಅದರ ಡೀಟೇಲ್ಸ್ ಇಲ್ಲಿದೆ . ಹುಲಿಯೂರುದುರ್ಗ ನಿವಾಸಿಯಾಗಿರುವ ಉಮಾ, ಆಟೋ ಕನ್ಸಲ್ಟೆಂಟ್ ನಲ್ಲಿ ಕೆಲಸ ಮಾಡಿಕೊಂಡಿದ್ದವಳು. ಅಕ್ಕನ ಬಳಿ ವಿಪರೀತ ಹಣ, ಚಿನ್ನಾಭರಣ ಇರುವುದರ ಬಗ್ಗೆ ತಿಳಿದುಕೊಂಡಿದ್ದಳು. ಹೀಗಾಗಿ ಹಣದ ದುರಾಸೆಗೆ ಬಿದ್ದ ಉಮಾ ಅಕ್ಕನ ಮನೆಯಲ್ಲಿ ಕಳ್ಳತನ ಮಾಡಲು ಸ್ಕೆಚ್ ಹಾಕಿದ್ದಾಳೆ. 16 ಚಿನ್ನದ ನಾಣ್ಯ ಹಾಗು 46 ಲಕ್ಷ ಹಣವನ್ನ ಕದ್ದು ಯಾಸ್ಕಪ್ ಹಾಗಿದಾಳೆ.
ಗಂಡ ಕುನ್ನೇಗೌಡ ಹಾಗು ಸುಮಾ ಇಬ್ಬರೂ ನಾಗವಾರ ನಿವಾಸಿಯಾದ್ರೆ , ಉಮಾ ಲಗ್ಗೆರೆ ನಿವಾಸಿ. ಆರೋಪಿತೆ ಉಮಾ ಐಶಾರಾಮಿ ಜೀವನದ ಆಸೆಗೆ ಬಿದ್ದು ವಿಪರೀತ ಸಾಲ ಮಾಡಿಕೊಂಡಿದ್ದಳು. ಸ್ತ್ರಿ ಶಕ್ತಿ ಬ್ಯಾಂಕ್ ಗಳಲ್ಲಿಯೂ ಕೂಡ ಬಿಡದೆ ಸಾಲ ಪಡೆದಿದ್ದಳು. ಸಾಲ ಕೊಟ್ಟವರು ಹಿಂದೆ ಬಿದ್ದಾಗ ಸಾಲ ತೀರಿಸಲಾಗದೆ, ಬಾವ ಕುನ್ನೇಗೌಡನ ಬಳಿ ಸಾಲ ಕೇಳಿದ್ದಳಂತೆ . ಹೀಗೆ ಸಾಲ ಮಾಡಿಕೊಂಡಿದ್ದಳ ಕಣ್ಣಿಗೆ ಬಿದ್ದಿದ್ದು ಅಕ್ಕನ ಮನೆಯ ಒಡವೆಗಳು ಹಾಗು ನಗದು . ಕಳೆದ 22 ರಂದು ಹುಲಿಯೂರು ದುರ್ಗದಲ್ಲಿ ಚೌಡೇಶ್ವರಿ ಜಾತ್ರೆ ಇದ್ದ ಹಿನ್ನಲೆ ಸುಮಾ ದಂಪತಿಗಳು ಊರಿಗೆ ಹೋಗಿದ್ದರು.
Hair Care: ಕೂದಲು ದಟ್ಟವಾಗಿರಲು ವಾರಕ್ಕೆ ಎಷ್ಟು ಬಾರಿ ಎಣ್ಣೆ ಹಚ್ಚಬೇಕು ಗೊತ್ತಾ?
ಹೋಗುವ ಮುನ್ನ ಮನೆ ನೋಡಿಕೊಳ್ಳ್ಳಿ ಎಂದು ತನ್ನ ಸಂಬಂಧಿಕರಿಗೆ ಕೀ ಕೊಟ್ಟಿದ್ದರು. ಆ ಸಂಬಂಧಿ 24ನೇ ತಾರೀಕಿನಂದು ಸುಮಾಳ ಮನೆಗೆ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ನಂತರ ದೂರು ನೀಡಿದ ಬಳಿಕ ಕೀ ಪಡೆದುಕೊಂಡಿದ್ದ ಸಂಬಂಧಿಯನ್ನೂ ವಿಚಾರಿಸಲಾಗಿದೆ . ಆದ್ರೆ ಆತನೇ ಕಳ್ಳತನ ಮಾಡಿದ್ದಾನೆಂಬುದಕ್ಕೆ ಯಾವುದೇ ಸಾಕ್ಷಿಗಳಿರಲಿಲ್ಲ. ನಂತರ ಅಲ್ಲಿದ್ದ ಕೆಲ ಸಿಸಿಟಿವಿಗಳನ್ನ ಪರಿಶೀಲನೆ ನಡೆಸಿದಾಗ ಅಸಲಿ ಸಂಗತಿ ಹೊರ ಬಿದ್ದಿದೆ.
ಉಮಾ ನಕಲಿ ಕೀ ಬಳಸಿ ಅಕ್ಕನ ಮನೆಯನ್ನ ಕದ್ದಿರುವುದು ಬೆಳಕಿಗೆ ಬಂದಿದೆ. ಹಾಗು ಆ ಕದ್ದ ಒಡವೆಗಳನ್ನ ಆಟೋ ಕನ್ಸಲ್ಟೆಂಟ್ ಕಂಪನಿಗೆ ಮ್ಯಾನೇಜರ್ ಗೆ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿತೆಯಿಂದ ಕದ್ದ ಅಷ್ಟೂ ವಸ್ತುಗಳನ್ನ ರಿಕವರಿ ಮಾಡಲಾಗಿದೆ ಹೆಚ್ಚಿನ ವಿಚಾರಣೆಗಾಗಿ ಆರು ದಿನಗಳ ಕಾಲ ಉಮಾಳನ್ನ ಕಷ್ಟಡಿಗೆ ಪಡೆಯಲಾಗಿದೆ . ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.