ವಯಸ್ಸಾದವರ ಅತ್ಯಂತ ಗಂಭೀರ ಸಮಸ್ಯೆಯೆಂದರೆ, ಜ್ಞಾಪಕ ಶಕ್ತಿ ನಷ್ಟ. ಆದರೆ, ಇಂದು ಯುವಕರಲ್ಲಿಯೂ ಜ್ಞಾಪಕ ಶಕ್ತಿ ಕಳೆದುಕೊಳ್ಳುವುದು, ಮರೆತು ಹೋಗುವುದು ಸಾಮಾನ್ಯವಾಗಿದೆ. ಈ ಸರಳವಾದ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ಬುದ್ಧಿವಂತಿಕೆ ಮತ್ತು ಸ್ಮರಣೆಯನ್ನು ಹೆಚ್ಚಿಸಬಹುದು. ನಿಮ್ಮ ಜ್ಞಾಪಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುವ ಸಲಹೆಗಳು 1. ವ್ಯಾಯಾಮ: ಏರೋಬಿಕ್ ವ್ಯಾಯಾಮ ಅಥವಾ ಮಧ್ಯಮ ವ್ಯಾಯಾಮವು ಹೃದಯದ ಆರೋಗ್ಯ ಮಾತ್ರವಲ್ಲದೆ, ಅದಕ್ಕಿಂತ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ವ್ಯಾಯಾಮವು ನಿಮ್ಮ ಮೆದುಳಿನ ಆರೋಗ್ಯಕ್ಕೂ ಪ್ರಯೋಜನವನ್ನು ನೀಡುತ್ತವೆ. 2. ಆರೋಗ್ಯಕರ ತಿನ್ನುವ ಅಭ್ಯಾಸ: ನಟ್ಸ್, ಸಾಲ್ಮನ್, ಧಾನ್ಯಗಳು, ಆಲಿವ್ ಎಣ್ಣೆ ಮತ್ತು ತಾಜಾ ಉತ್ಪನ್ನಗಳಂತಹ ಆರೋಗ್ಯಕರ ಆಹಾರಗಳನ್ನು ತಿನ್ನುವುದು ನಿಮ್ಮ ಮೆದುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುವುದರ ಜೊತೆಗೆ, ಈ ರೀತಿಯ ಆಹಾರವು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹ ನೆರವಾಗುತ್ತದೆ. 3. ಮೆದುಳನ್ನು ಉತ್ತೇಜಿಸುವ ವ್ಯಾಯಾಮಗಳು: ಮೆದುಳನ್ನು ಉತ್ತೇಜಿಸುವ ವ್ಯಾಯಾಮಗಳು ನರ ಕೋಶಗಳ ನಡುವೆ ಹೊಸ ಸಂಪರ್ಕಗಳನ್ನು ಸೃಷ್ಟಿಸುತ್ತವೆ.…
Author: AIN Author
ಇತ್ತೀಚಿನ ಅಧ್ಯಯನಗಳ ಪ್ರಕಾರ, ಬಾದಾಮಿಯ ನಿಯಮಿತ ಸೇವನೆಯಿಂದ ಮಧುಮೇಹ ಪೂರ್ವ ಹಂತದಲ್ಲಿರುವ ವ್ಯಕ್ತಿಳಿಗೆ ಮಧುಮೇಹ ಸಂಬಂಧಿತ ತೊಂದರೆಗಳು ಎದುರಾಗುವ ಸಾಧ್ಯತೆ ಕಡಿಮೆಗೊಳ್ಳುತ್ತದೆ. ವಿಶೇಷವಾಗಿ ಯುವ ಜನಾಂಗ ಈ ಅಭ್ಯಾಸದಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ: ಕೊಂಚ ದುಬಾರಿ ಎಂಬ ಒಂದೇ ಅಂಶವನ್ನು ಬಿಟ್ಟರೆ ಬಾದಾಮಿ ತಿನ್ನದೇ ಇರಲು ಯಾವುದೇ ಕಾರಣ ಉಳಿಯುವುದಿಲ್ಲ. ಇದು ಅತ್ಯಂತ ಆರೋಗ್ಯಕರ ಅಹಾರವಾಗಿದೆ ಹಾಗೂ ನಿತ್ಯವೂ ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಉತ್ತಮಗೊಳಿಸುವುದು, ಕೊಲೆಸ್ಟ್ರಾಲ್ ನಿಯಂತ್ರಣ, ಮೂಳೆಯ ಆರೋಗ್ಯ ವೃದ್ದಿಸುವುದು ಹಾಗೂ ತೂಕ ಇಳಿಕೆಯ ಪ್ರಯತ್ನಗಳಿಗೆ ಹೆಚ್ಚಿನ ಬೆಂಬಲ ಒದಗಿಸುವುದು ಈ ಪ್ರಯೋಜನಗಳಲ್ಲಿ ಕೆಲವು. ಕ್ಯಾಲೋರಿಗಳು: 161 ನಾರಿನ ಅಂಶ : 3.5 ಗ್ರಾಂ ಪ್ರೋಟೀನ್: 6 ಗ್ರಾಂ ಕಾರ್ಬೋಹೈಡ್ರೇಟುಗಳು : 2.5 ಗ್ರಾಂ ಕೊಬ್ಬು: 14 ಗ್ರಾಂ ನಿತ್ಯದ ಶಿಫಾರಸ್ಸು ಮಾಡಲ್ಪಟ್ಟ ಪ್ರಮಾಣದ 37% ವಿಟಮಿನ್ ಇ ನಿತ್ಯದ ಶಿಫಾರಸ್ಸು ಮಾಡಲ್ಪಟ್ಟ ಪ್ರಮಾಣದ 32% ಮೆಗ್ನೀಶಿಯಮ್ ಈ…
ನಕ್ಕಾಗ ಹಲ್ಲುಗಳು ಮುತ್ತಿನಂತೆ ಹೊಳೆದರೆ ನೋಡುಗರಿಗೆ ನಿಮ್ಮ ಮುಖ ಮತ್ತಷ್ಟು ಆಕರ್ಷಕವಾಗಿ ಕಾಣುವುದು. ಇಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ಹಲ್ಲುಗಳನ್ನು ಕೆಲವು ಸರಳ ವಿಧಾನ ಬಳಸಿ ಬೆಳ್ಳಗಾಗಿಸುವ ಟಿಪ್ಸ್ ನೀಡಿದ್ದೇವೆ ನೋಡಿ: ಅರಿಶಿಣ ನಿಮ್ಮ ಟೂತ್ಬ್ರೆಷ್ ಮೇಲೆ ಸ್ವಲ್ಪ ಅರಿಶಿಣ ಹಾಕಿ ಹಲ್ಲುಜ್ಜಿ, ನಂತರ ಪೇಸ್ಟ್ನಿಂದ ಹಲ್ಲು ತಿಕ್ಕಿದರೆ ಹಲ್ಲು ಬೆಳ್ಳಗಾಗುವುದು. ಸ್ಟ್ರಾಬೆರಿ ಹಾಗೂ ಅಡುಗೆ ಸೋಡಾ ಸ್ಟ್ರಾಬೆರಿ ಮೇಲೆ ಅಡುಗೆ ಸೋಡ ಚಿಮುಕಿಸಿ ಅದರಿಂದ ಹಲ್ಲು ತಿಕ್ಕಿದರೆ ಹಲ್ಲು ಬೆಳ್ಳಗಾಗುವುದು. ತುಳಸಿ ತುಳಸಿ ಎಲೆಯನ್ನು ಒಣಗಿಸಿ ಪುಡಿ ಮಾಡಿ, ಆ ಪುಡಿಯನ್ನು ಟೂತ್ಪೇಸ್ಟ್ ಜತೆ ಮಿಕ್ಸ್ ಮಾಡಿ ಹಚ್ಚುವುದರಿಂದ ಹಲ್ಲಿನಲ್ಲಿರುವ ಹಳದಿ ಬಣ್ಣವನ್ನು ಹೋಗಲಾಡಿಸಬಹುದು. ಎಣ್ಣೆಯಿಂದ ಬಾಯಿ ಮುಕ್ಕಳಿಸುವುದು ಆಯಿಲ್ ಪುಲ್ಲಿಂಗ್ ಅಥವಾ ಎಣ್ಣೆಯಿಂದ 5 ನಿಮಿಷ ಬಾಯಿ ಮುಕ್ಕಳಿಸಿ, ನಂತರ ತಣ್ಣೀರಿನಿಂದ ಬಾಯಿ ತೊಳೆಯಬೇಕು. ಈ ರೀತಿ ಮಾಡಿದರೆ ಹಲ್ಲಿನ ಆರೋಗ್ಯ ಹೆಚ್ಚುವುದು. ಬಾಳೆಹಣ್ಣಿನ ಸಿಪ್ಪೆ ಬಾಳೆ ಹಣ್ಣಿನ ಸಿಪ್ಪೆಯನ್ನು ಹಲ್ಲಿಗೆ ತಿಕ್ಕಿ, ನಂತರ ಟೂತ್ಪೇಸ್ಟ್ನಿಂದ ತಿಕ್ಕಿದರೆ ಬಿಳುಪು…
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಹೊಸ ಬಸ್ ನಿಲ್ದಾಣ ಹತ್ತಿರ ರಬಕವಿ ಮಿರಜ್ ಹೆದ್ದಾರಿ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ದ್ವಿಚಕ್ರ ವಾಹನ ಸವಾರಣಿಗೆ ಗಂಭೀರ ಗಾಯ ಪ್ಯಾಸೆಂಜರಗಳಿಗೆ ಸಣ್ಣಪುಟ್ಟ ಗಾಯ. ಕ್ಲೂಜರ್ ವಾಹನ KA 29 B1350. ಆಟೋ ರಿಕ್ಷಾ KA 48 8250. ದ್ವಿಚಕ್ರ ವಾಹನ KA 48 k5831 3 ವಾಹನಗಳ ಮಧ್ಯೆ ಭೀಕರ ರಸ್ತೆ ಅಪಘಾತವಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ರಬಕವಿ ಬನಹಟ್ಟಿ ಆರೋಗ್ಯ ಸಂದಾಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕ್ಲೋಸರ್ ವಾಹನ ಚಾಲಕ ಮಧ್ಯಪಾನ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ ಮತ್ತು ಚಾಲಕನನ್ನು ಪೊಲೀಸರು ಬಂದಿದ್ದಾರೆ. ತೇರದಾಳ ಪೊಲೀಸ್ ಠಾಣೆಯ ಪೊಲೀಸರು ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ತನಿಖೆ ಮಾಡಿದ ನಂತರ ಈ ಭೀಕರ ಅಪಘಾತ ಸತ್ಯಾ ಸತ್ಯತೆ ಹೊರಬರಲಿದೆ.
ಕೋಲಾರ: ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಬಡಿದಾಟ ನಡೆಸಿ ಗಲಾಟೆಯಲ್ಲಿ ಮೂರು ಯುವಕರಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಶಿಗೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಯಲ್ದೂರು ಶೀಗೆಹಳ್ಳಿ ಗ್ರಾಮದ ಬಾಬು ಎಂಬಾತ ಹಲ್ಲೆ ನಡೆಸಿದ ಆರೋಪಿ ಎಂದು ತಿಳಿದು ಬಂದಿದೆ. https://ainlivenews.com/joint_pain_suprem_ray_treatment_reiki/ ಬಾಬು ಮತ್ತು ಪವನ್ ನಡುವೆ ಗಲಾಟೆ ನಡೆದಿದ್ದು ಗಲಾಟೆ ಬಿಡಿಸಲು ಹೋದ ಪವನ್ ನ ಅಣ್ಣ ಮೋಹನ್ ಹಾಗೂ ರವಿ ಎಂಬಾತನ ಮೇಲೂ ಬಾಬು ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಮೂವರು ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಜೈಪುರ: ಉದಯಪುರದಲ್ಲಿ ಟೈಲರ್ (Udaipur Tailor) ಕನ್ಹಯ್ಯಾ ಲಾಲ್ (Kanhaiya Lal) ಅವರನ್ನು ಭೀಕರವಾಗಿ ಹತ್ಯೆ ಮಾಡಿದ್ದ ಇಬ್ಬರು ಕೊಲೆಗಡುಕರು ಬಿಜೆಪಿಯೊಂದಿಗೆ (BJP) ನಂಟು ಹೊಂದಿದ್ದಾರೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಆರೋಪಿಸಿದ್ದಾರೆ. ಜೋಧ್ಪುರದಲ್ಲಿ ಪ್ರಚಾರದ ಜಾಥಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್, https://ainlivenews.com/joint_pain_suprem_ray_treatment_reiki/ ಉದಯಪುರ ಘಟನೆಗೂ ಕೆಲ ದಿನಗಳ ಮೊದಲು ಬೇರೊಂದು ಪ್ರಕರಣದಲ್ಲಿ ಪೊಲೀಸರು ಇವರಿಬ್ಬರನ್ನು ಬಂಧಿಸಿದ್ದರು. ಅವರನ್ನು ಬಿಡುಗಡೆ ಮಾಡಲು ಬಿಜೆಪಿ ನಾಯಕರು ಪೊಲೀಸ್ ಠಾಣೆಗೆ ಬಂದಿದ್ದರು ಎಂದು ಗೆಹ್ಲೋಟ್ ಗಂಭೀರ ಆರೋಪ ಮಾಡಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬದಲಿಗೆ ರಾಜಸ್ಥಾನದ ಪೊಲೀಸರ ವಿಶೇಷ ಕಾರ್ಯಾಚರಣೆಯ ತಂಡ (SOG) ಈ ಪ್ರಕರಣವನ್ನು ನಿರ್ವಹಿಸಿದ್ದರೆ ತನಿಖೆ ತಾರ್ಕಿಕವಾಗಿ ಸಾಗುತ್ತಿತ್ತು ಎಂದು ಹೇಳಿದರು.
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕವಾದ ಹಿನ್ನೆಲೆ ಮಾಜಿ ಸಚಿವ ಡಾ. ಕೆ. ಸುಧಾಕರ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷದ ಆಯ್ಕೆ, ಹಾಗಾಗಿ ಸ್ವಾಗತ ಮಾಡುತ್ತೇನೆ. ಒಳ್ಳೆಯದಾಗಲಿ, ಅವರಿಗೆ ಪಕ್ಷ ದೀಪಾವಳಿ ಉಡುಗೊರೆ ಕೊಟ್ಟಿದೆ. ಅದನ್ನು ಸದ್ಭಳಕೆ ಮಾಡಿಕೊಂಡು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅವರ ತಂದೆಯ ಹಾದಿಯಲ್ಲೇ ಮುನ್ನಡೆಯಲಿ ಎಂದು ಹಾರೈಸುತ್ತೇನೆ. https://ainlivenews.com/joint_pain_suprem_ray_treatment_reiki/ ಇನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಆಕಾಂಕ್ಷಿಯೇ ಅಲ್ಲ, ನಾನು ಯಾವುದಕ್ಕೂ ಆಕಾಂಕ್ಷಿಯೇ ಅಲ್ಲ. ಟಿಕೆಟ್ ಕೊಟ್ಟರೆ ಅದೆಲ್ಲಾ ಮುಂದೆ ನೋಡೋಣ. ಈಗ ಹೈದರಾಬಾದ್ನಲ್ಲಿ ಸ್ವಲ್ಪ ಕೆಲಸ ಕೊಟ್ಟಿದ್ದಾರೆ. ಕೊಟ್ಟಿರುವ ಕೆಲಸವನ್ನು ಹೋಗಿ ಪ್ರಾಮಾಣಿಕವಾಗಿ ಮಾಡುತ್ತೇನೆ. ಚುನಾವಣಾ ಫಲಿತಾಂಶ ಬಂದು ಆರು ತಿಂಗಳು ಆಗಿದೆ. ಯಾರೆಲ್ಲಾ ಕೊನೆಯ ಪಕ್ಷ ನನ್ನ ಜೊತೆ ಫೋನ್ ನಲ್ಲಿ ಮಾತಾಡಿದ್ದಾರೆ ಅಂತಾ ನನಗೆ ಗೊತ್ತಿದೆ ಎಂದರು.
ಬೆಂಗಳೂರು: ದೀಪಾವಳಿ ಹಬ್ಬದಂದೇ ನಗರದ ವಿವಿಧ ಭಾಗಗಳಲ್ಲಿ ಬೀದಿನಾಯಿಯೊಂದು ಸುಮಾರು 20 ಮಂದಿಗೆ ಕಚ್ಚಿರುವ ಘಟನೆ ನಡೆದಿದೆ. ಸೋಮವಾರ ರಾತ್ರಿ 09 ಮಂದಿ ಹಾಗೂ ಮಂಗಳವಾರ ಬೆಳಗ್ಗೆ 11 ಮಂದಿಗೆ ನಾಯಿ ಕಡಿತಕ್ಕಳಗಾಗಿದ್ದಾರೆ. ನಗರದ ಕೋರ್ಟ್ ರಸ್ತೆಯಲ್ಲಿ, ಜಿ ರಾಮೇಗೌಡ ವೃತ್ತದ ಬಳಿ, ಪ್ರಿಯಾಂಕ ಹೋಟೆಲ್, ಡಿಕ್ರಾಸ್ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ನಾಯಿ ದಾಳಿ ನಡೆಸುತ್ತಿದ್ದು ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ. https://ainlivenews.com/joint_pain_suprem_ray_treatment_reiki/ ದೀಪಾವಳಿ ಹಬ್ಬದಂದೇ ನಗರದ ವಿವಿಧ ಭಾಗಗಳಲ್ಲಿ ಬೀದಿನಾಯಿಯೊಂದು ಸುಮಾರು 20 ಮಂದಿಗೆ ಕಚ್ಚಿರುವ ಘಟನೆ ನಡೆದಿದೆ. ಸೋಮವಾರ ರಾತ್ರಿ 09 ಮಂದಿ ಹಾಗೂ ಮಂಗಳವಾರ ಬೆಳಗ್ಗೆ 11 ಮಂದಿಗೆ ನಾಯಿ ಕಡಿತಕ್ಕಳಗಾಗಿದ್ದಾರೆ. ನಗರದ ಕೋರ್ಟ್ ರಸ್ತೆಯಲ್ಲಿ, ಜಿ ರಾಮೇಗೌಡ ವೃತ್ತದ ಬಳಿ, ಪ್ರಿಯಾಂಕ ಹೋಟೆಲ್, ಡಿಕ್ರಾಸ್ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ನಾಯಿ ದಾಳಿ ನಡೆಸುತ್ತಿದ್ದು ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ.
ಬೆಂಗಳೂರು: ತಮ್ಮ ವಾಸದ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಪಡೆದ ಆರೋಪ ಸಂಬಂಧ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್ಡಿ ಕುಮಾರಸ್ವಾಮಿ, ಅಂತಹ ದೊಡ್ಡ ಅಪರಾಧ ನಡೆದಿಲ್ಲ, ನಾನೇನು ದೇಶ ಲೂಟಿ ಮಾಡಿಲ್ಲ. 2,000 ರೂಪಾಯಿಗೆ ಕರೆಂಟ್ ಕದೀಬೇಕಾ ನಾನು? ಎಂದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರಿಗೆ ಬೇರೆ ಯಾವುದೇ ಕೆಲಸ ಇಲ್ಲ. ಕಾಂಗ್ರೆಸ್ಗೆ ದೊಡ್ಡ ದೊಡ್ಡ ಹಗರಣ ಬಯಲಿಗೆ ತರುವ ಧೈರ್ಯವಿಲ್ಲ. ಕಾಂಗ್ರೆಸ್ನವರು ರಾಜ್ಯವನ್ನು ಬೆಳಗಿಸಿರುವುದನ್ನು ನೋಡಿದ್ದೇನೆ. ದರಿದ್ರ ಬಂದಿರುವುದು ಕಾಂಗ್ರೆಸ್ ನಾಯಕರಿಗೆ ಎಂದರು. https://ainlivenews.com/joint_pain_suprem_ray_treatment_reiki/ ತಮ್ಮನ್ನು ಟಾರ್ಗೆಟ್ ಮಾಡಿ ಕಾಂಗ್ರೆಸ್ ಆರೋಪ ಮಾಡುತ್ತಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, ಟಾರ್ಗೆಟ್ ಮಾಡಲಿ ಎಲ್ಲವನ್ನೂ ಅರಗಿಸಿಕೊಳ್ಳುವ ನೈತಿಕತೆ ಉಳಿಸಿಕೊಂಡಿದ್ದೇನೆ. ಯಾವುದನ್ನೂ ಮುಚ್ಚುಮರೆ ಮಾಡಲ್ಲ, ನಾನು ತೆರೆದ ಪುಸ್ತಕ ಇದ್ದಂತೆ. ಕಾಂಗ್ರೆಸ್ನವರ ದಬ್ಬಾಳಿಕೆ, ಆರೋಪಗಳನ್ನು ಅರಗಿಸಿಕೊಳ್ಳುವ ನೈತಿಕತೆ ಇದೆ. ಕಾಂಗ್ರೆಸ್ನವರ ಮಟ್ಟಕ್ಕೆ ಲೂಟಿ ಹೊಡೆಯುವ ಕೆಲಸಕ್ಕೆ ಕೈ ಹಾಕಿಲ್ಲ. ವಿಜಯಪುರದಲ್ಲಿ ಕೋ ಆಪರೇಟಿವ್ ಸೊಸೈಟಿಗೆ ನಕಲಿ ವಿಳಾಸ ನೀಡಿದ್ದಾರೆ. ಬೆಂಗಳೂರಿನ ಜಯನಗರ ಆಡ್ರೆಸ್…
ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ ತನಿಷಾ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಎಸ್ ಸಿ ಎಸ್ಟಿ ಕಾಯ್ದೆಯಡಿ ಅಟ್ರಾಸಿಟಿ ಕೇಸ್ ದಾಖಲಿಸಿಲಾಗಿದೆ.ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ ಎಂಬುವರಿಂದ ದೂರು.. ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಅವಹೇಳನಕಾರಿ ಪದ ಬಳಕೆ ಆರೋಪ.. ಪದಬಳಕೆ ಮಾಡಿ ಬೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆಂದು ದೂರು.. ತನಿಷಾ ಕುಪ್ಪುಂಡ ವಿರುದ್ದ ಆರೋಪಿಸಿ ದೂರು.. ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕು ಎಸ್ ಸಿ ಎಸ್ಟಿ ಕಾಯ್ದೆಡಿ ಕ್ರಮಕ್ಕೆ ಆಗ್ರಹಿಸಿ ದೂರು ಸಲ್ಲಿಸಲಾಗಿದೆ.