ದಾವಣಗೆರೆ: ಕೇಸರಿಗೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇದೆ. ಅದ್ದರಿಂದ ಕೇಸರಿ ಬೆಳೆಯುವ ಕಸರತ್ತಿಗೆ ದಾವಣಗೆರೆ ಯುವಕನೊಬ್ಬ ಕೈ ಹಾಕಿದ್ದಾನೆ ದಾವಣಗೆರೆ ತಾಲೂಕಿನ ದೊಡ್ಡ ಬಾತಿ ಗ್ರಾಮದ ಯುವಕ ಜಾಕೋಬ್ ಸತ್ಯರಾಜ್. ಮೊದಲು ಆಂಧ್ರಪ್ರದೇಶಕ್ಕೆ ತೆರಳಿ ಕೇಸರಿ ಬೆಳೆಗಾರರನ್ನು ಭೇಟಿಯಾಗಿ ಮಾಹಿತಿ ಕಲೆ ಹಾಕಿದ ಯುವಕ,
ಬಳಿಕ ಉರ್ದು ಭಾಷೆ ಬರುವ ಕೆಲ ಸ್ನೇಹಿತರನ್ನು ಕರೆದುಕೊಂಡು ಕಾಶ್ಮೀರಕ್ಕೆ ತೆರಳಿ ಕೆಲ ದಿನಗಳ ಕಾಲ ಅಲ್ಲಿಯೇ ನೆಲಸಿ, ಕೇಸರಿ ಬೆಳೆಯ ಬಗ್ಗೆ ತರಬೇತಿ ಪಡೆದು ಈಗ ತನ್ನ ಗ್ರಾಮದ ಮನೆಯ ಕೋಣೆಯೊಂದ ರಲ್ಲಿಯೇ ಕೇಸರಿ ಬೆಳೆಯುತ್ತಿದ್ದಾನೆ. ಇದಲ್ಲದೇ ಜಾಕೋಬ್ ಅವರು ಬೀದರ್ ಜಿಲ್ಲೆಯಲ್ಲಿ ಕೇಸರಿ ಬೆಳೆಯುತ್ತಿರುವ ಮಹಿಳೆಯೊಬ್ಬರ ಬಳಿಯಿಂದಲೂ ಮಾರ್ಗದರ್ಶನ ಪಡೆಯುತ್ತಿದ್ದಾರೆ.
Vishu Festival: ಕೇರಳದಲ್ಲಿಂದು ವಿಶು ಸಂಭ್ರಮ! ಹಬ್ಬದ ವಿಶೇಷತೆ ಬಗ್ಗೆ ನಿಮಗೆ ಗೊತ್ತೆ..? ಇಲ್ಲಿದೆ ನೋಡಿ
ಮನೆಯ ಒಂದು ಕೋಣೆಯನ್ನು ಈ ಬೆಳೆಗೆ ಸೀಮಿತ ಮಾಡಿರುವ ಜಾಕೋಬ್ ಸತ್ಯರಾಜ್ ಅವರು ಸಾವಯವ ಗೊಬ್ಬರ ಹಾಗೂ ಪರೀಕ್ಷಿಸಿದ ಮಣ್ಣನು ಬಳಕೆ ಮಾಡಿ. ಎಸಿ ಹಾಕಿಸಿ ಬಿಸಿ ಗಾಳಿ ಒಳ ನುಸಳದಂತೆ ವ್ಯವಸ್ಥೆ ಮಾಡಿ ಕೇಸರಿ ಬೆಳೆಯುತ್ತಿದ್ದು, ಈಗಾಗಲೇ 20 ಗ್ರಾಂ ನಷ್ಟು ಕೇಸರಿ ಜಾಕೋಬ್ ರವರ ಕೈ ಸೇರಿದೆ. ಇನ್ನು ಜಾಕೋಬ್ ಹರಿಹರಕ್ಕೆ ಕುಡಿಯುವ ನೀರು ಪೂರೈಸುವ ಜಾಕ್ವೆಲ್ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ.
ಕೇಸರಿ ಬೆಳೆಯುವುದು ಹೇಗೆ: ಕೇಸರಿಯ ಸೀಡ್ಸ್ನಲ್ಲಿ ಈ ವರ್ಷ ಹೂವು ಬಿಡುತ್ತಿದೆ ಎಂದರೆ ಬಲ್ಬ್ಸ್ನಲ್ಲಿ ಎಲ್ಲಾ ರೀತಿಯ ಪ್ರೋಟೀನ್ಗಳನ್ನು ಅದು ಹಿಡಿದಿಟ್ಟುಕೊಂಡಿರುತ್ತದೆ. ಇನ್ನು ಹೂವು ಬಿಡುವ ತನಕ ಬಲ್ಬ್ಗೆ ಮಣ್ಣಿನ ಅವಶ್ಯಕತೆ ಇರುವುದಿಲ್ಲ. ಅದನ್ನು ತಂದು ಟ್ರೇನಲ್ಲಿ ಇಟ್ಟು ಇಮ್ಯುನಿಟಿ ಹಾಗೂ ಟೆಂಪ್ರೇಚರ್ ಕೊಟ್ಟರೆ ಹೂವು ಬಿಡುತ್ತದೆ. ಹೂವು ಬಿಟ್ಟಾದ ಬಳಿಕ ಸೀಡ್ ಮಲ್ಟಿಫಿಕೇಷನ್ ಪ್ರೋಸೆಸ್ ಆದರೆ ಮಾತ್ರ ಮಣ್ಣಲ್ಲಿ ಹಾಕ ಬೇಕು.
ಆಗಾ ತಾಯಿ ಬಲ್ಬ್ಸ್ನಿಂದ ಬೇರೆ ಬಲ್ಬ್ಗಳು(ಸೀಡ್ಸ್) ನಲ್ಲಿ ಹೆಚ್ಚು ಸೀಡ್ಸ್ಗಳು ಹುಟ್ಟಿಕೊಳ್ಳುವ ಸಾಧ್ಯತೆ ಇರುತ್ತದೆ. ಹೂವು ಬಿಟ್ಟ ತಕ್ಷಣ ಅದರಲ್ಲಿ ಕೇಸರಿ ಇರುತ್ತದೆ. ಅದರಲ್ಲಿ ಹೂವಿನ ಪೆಟಲ್ಸ್ ಬೇರೆ, ಕೇಸರಿ ಬೇರೆ, ಸ್ಟೆಮನ್ಸ್ ಬೇರ್ಪಡಿಸುತ್ತೇವೆ. ಈ ಕೇಸರಿಯ ಹೂವನ್ನು ಔಷಧಕ್ಕೆ ಬಳಕೆ ಮಾಡುತ್ತಾರೆ. ಕೇಸರಿಯನ್ನು ಹಲವು ರೀತಿಯಾಗಿ ಬಳಕೆ ಮಾಡುತ್ತೇವೆ. ಇನ್ನು ಸ್ಟೆಮನ್ಸ್ ಕೂಡ ಕಾಸ್ಮೆಟಿಕ್ಸ್ಗೆ ಬಳಕೆ ಮಾಡುತ್ತಾರೆ ಎಂದು ಜಾಕೋಬ್ ಮಾಹಿತಿ ನೀಡಿದರು.