ಶಿವಮೊಗ್ಗ:– ತಪ್ಪು ಮಾಡಿರುವ ಪ್ರಜ್ವಲ್ ಗೆ ಶಿಕ್ಷೆ ಆಗಲೇಬೇಕು ಎಂದು ಆರ್ ಅಶೋಕ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಲೇಬೇಕು.
ಸುಮಾರು 5,000 ಪೆನ್ ಡ್ರೈವ್ ಗಳನ್ನು ಹಂಚಲಾಗಿದೆ ಅಂತ ಹೇಳುತ್ತಿದ್ದಾರೆ, ಅವೆಲ್ಲ ತಯಾರಾಗಿದ್ದು ಎಲ್ಲಿ ಮತ್ತು ಹಂಚಿದ್ದು ಯಾರು? ಹಾಗೆಯೇ ಪ್ರಜ್ವಲ್ ನನ್ನು ವಿದೇಶಕ್ಕೆ ಹಾರಿಹೋಗಲು ಬಿಟ್ಟವರು ಯಾರು? ರಾಜ್ಯದ ಗುಪ್ತಚರ ದಳ ನಿದ್ದೆ ಮಾಡ್ತಾ ಇದೆ ಮತ್ತು ಸರ್ಕಾರ ಕತ್ತೆ ಕಾಯ್ತಾ ಇದೆಯಾ? ಅವರನ್ನು ತಪ್ಪಿಸಿಕೊಳ್ಳಲು ಬಿಟ್ಟ ಕಾಂಗ್ರೆಸ್ ಸರ್ಕಾರವನ್ನು ಸೋನಿಯ ಗಾಂಧಿ ಮತ್ತು ರಾಹುಲ್ ಛೀಮಾರಿ ಹಾಕಬೇಕು ಎಂದು ಅಶೋಕ ಹೇಳಿದರು. ಪೆನ್ ಡ್ರೈವ್ ಗಳನ್ನು ಹಂಚಿದ ದುರುಳರು ನಿರಪರಾಧಿ ಮತ್ತು ಅಮಾಯಕ ಮಹಿಳೆಯರ ಬಗ್ಗೆ ಯೋಚನೆ ಮಾಡಬೇಡವೇ? ಅವರು ಇನ್ನು ಮುಂದೆ ಸಮಾಜದಲ್ಲಿ ತಲೆಯೆತ್ತಿ ತಿರುಗುವುದು ಸಾಧ್ಯವೇ? ಗೃಹ ಸಚಿವ ಪರೆಮೇಶ್ವರ್ ಪೆನ್ ಡ್ರೈವ್ಗಳನ್ನು ಈಗ ಸೀಜ್ ಮಾಡುತ್ತಾರಂತೆ, ಈಗ ಅದರಿಂದ ಏನು ಪ್ರಯೋಜನ ಎಂದು ಅಶೋಕ ಕೇಳಿದರು.