ಹುಬ್ಬಳ್ಳಿ: ಭಾರತೀಯ ಸೇನೆಯ ಗಡಿ ಭದ್ರತಾ ಪಡೆಯಲ್ಲಿ (BSF) ನಿರಂತರ 22 ವರ್ಷ ಸೇವೆ ಸಲ್ಲಿಸಿ ಪಶ್ಚಿಮ ಬಂಗಾಳದಿಂದ ನಿವೃತ್ತಿ ಪಡೆದು ಸ್ವಗ್ರಾಮವಾದ ಧಾರವಾಡ ತಾಲೂಕು ಹಾರೋಬೆಳವಡಿ ಗ್ರಾಮಕ್ಕೆ ಆಗಮಿಸಿದ ವೀರ ಯೋಧರಾದ ಬಸಪ್ಪ ಸೋಮಪ್ಪ ಕಳ್ಳಿ ಅವರನ್ನು ಗ್ರಾಮದ ಮುಖಂಡರು, ಯುವ ಮಿತ್ರರು, ಕರವೇ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಸನ್ಮಾನಿಸಿದರು.
ಒಡವೆ, ಹಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಸ್ ಕಂಡಕ್ಟರ್ ; ಅಧಿಕಾರಿಗಳಿಂದ ಅಭಿನಂದನೆ
ನಂತರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಅವರನ್ನು ಚಕ್ಕಡಿಯಲ್ಲಿ ಮೆರವಣಿಗೆ ಮಾಡಿ ಅವರ ಸೇವೆಯನ್ನು ಅಭಿನಂದಿಸಲಾಯಿತು. ಮತ್ತು ಗ್ರಾಮಸ್ಥರು ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ನಾಮದೇವ ಪಟದಾರಿ, ಈರಣ್ಣ ಏಣಗಿ, ಈರಯ್ಯ ಹೊರಗಿನಮಠ, ಶಂಕರ ಅಮಟೂರ, ಶಿವಾನಂದ ಬೆಡಸೂರ, ಚೆನ್ನವೀರಯ್ಯ ಶಿದ್ಗಿರಿಮಠ, ಶಿವಾನಂದ ಕನಾಜಿ, ಶಂಕರ ಬೆಡಸೂರ, ರಾಜು ಜಕ್ಕನವರ, ರಾಯಪ್ಪ ಸೊಗಲದ ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.