ದಾವಣಗೆರೆ: ಕೋವಿಡ್ ಲಸಿಕೆ ಪಡೆದ ಅನೇಕ ಯುವಜನರಿಂದು ಯಾವುದೇ ಅನಾರೋಗ್ಯವಿಲ್ಲದೇ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿ ಕಾರಿದ್ದಾರೆ. ದಾವಣಗೆರೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಲಸಿಕೆ ಪಡೆದ ಯುವಜನರು ಯಾವುದೇ ಅನಾರೋಗ್ಯವಿಲ್ಲದಿದ್ದರೂ ಹೃದಯಾಘಾತದಿಂದ ಸಾಯುತ್ತಿದ್ದಾರೆ.
ಏಕೆಂದರೆ ಇದು ಮೋದಿಜೀಗೆ (PM Modi) 51 ಸಾವಿರ ಕೋಟಿ ದೇಣಿಗೆ ನೀಡಿದ ಬಾಂಡ್ (Electoral Bonds) ಖರೀದಿಸಿದ ಕಂಪನಿ ತಯಾರಿಸಿದ್ದ ಲಸಿಕೆ. ಲಸಿಕೆ ಪ್ರಮಾಣ ಪತ್ರದಲ್ಲಿ ಯಾರ ಫೋಟೋ ಇತ್ತು ನೆನಪಿದೆಯಾ? ಮೋದಿ ಫೋಟೋ ಇತ್ತು ಅಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ಅಧಿಕಾರಕ್ಕೆ ಬಂದು 10 ವರ್ಷಗಳಾದರೂ ರೈತರ ಸಾಲ ಮನ್ನಾ ಮಾಡಲಿಲ್ಲ. ಇದರಿಂದ ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಇದು ಒಂದು ಕಡೆಯಾದರೆ, ಚುನಾವಣಾ ಬಾಂಡ್ಗಳ ಮೂಲಕ ಹಣ ಪಡೆಯುತ್ತಿದ್ದದ್ದು ಮತ್ತೊಂದು ಕಡೆಯಾಗಿತ್ತು ಎಂದಿದ್ದಾರೆ.
APL Card: ಸಿಹಿ ಸುದ್ದಿ: ಜೂನ್ʼನಿಂದ APL ಪಡಿತರ ಚೀಟಿ ವಿತರಣೆ..! ಹೊಸ ಕಾರ್ಡ್ʼಗಳಿಗೆ ಅರ್ಜಿ ಆಹ್ವಾನ
ಇದೇ ವೇಳೆ ಗುಜರಾತ್ನಲ್ಲಿ ತೂಗು ಸೇತುವೆ ಕುಸಿದು (Morbi bridge collapse) ನೂರಾರು ಜನ ಸಾವನ್ನಪ್ಪಿದ್ದ ಪ್ರಕರಣ ಉಲ್ಲೇಖಿಸಿದ ಪ್ರಿಯಾಂಕಾ, ಗುಜರಾತ್ನಲ್ಲಿ ಬೀಳುವಂತಹ ತೂಗು ಸೇತುವೆ ಕಟ್ಟಿದವನಿಂದ, ಕೋವಿಡ್ ಲಸಿಕೆ ತಯಾರಿಸಿದವರಿಂದಲೂ ಚುನಾವಣಾ ಬಾಂಡ್ ಮೂಲಕ ಹಣ ಪೀಕಿದೆ. ಇದೆಲ್ಲವೂ ಹೊರಗೆ ಬರಬಾರದು ಅಂತಾ ಮೋದಿ ಸ್ನೇಹಿತರು ಮಾಧ್ಯಮಗಳ ಬಾಯಿಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಯಾರು ಇವರ ವಿರುದ್ಧ ಮಾತನಾಡುತ್ತಾರೋ ಅವರನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡ್ತಿದ್ದಾರೆ ಎಂದು ದೂರಿದ್ದಾರೆ.