ಹುಬ್ಬಳ್ಳಿ: ವಿಕೃತ ಪ್ರೇಮಿಯಿಂದ ಹತ್ಯೆಯಾದ ಅಂಜಲಿ ನಿವಾಸಕ್ಕೆ ಸಚಿವ ಸಂತೋಷ್ ಲಾಡ್ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮಗಳಿಗೆ ಮಾತನಾಡುತ್ತಾ, ‘ ನೇಹಾ ಹತ್ಯೆ ಘಟನೆ ನಡೆದ ನಂತರ ಇನ್ನೊಂದು ಘಟನೆ ನಡೆದಿದೆ. ಅಹಿತಕರ ಚಟುವಟಿಕೆಗಳಲ್ಲಿ ಯುವಕರು ಬಲಿಯಾಗುತ್ತಿದ್ದಾರೆ.
House Fly: ಮನೆಯಲ್ಲಿ ನೊಣಗಳ ಕಾಟದಿಂದ ಬೇಸತ್ತಿದ್ದೀರಾ..? ಈ ಟ್ರಿಕ್ ಬಳಸಿ ಅವುಗಳನ್ನು ಓಡಿಸಿ!
ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಯುವಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಇದನ್ನ ಸಿಐಡಿ ತನಿಖೆಗೆ ಸರ್ಕಾರ ಕೊಡಬೇಕು ಅಂತ ನಾನು ಮನವಿ ಮಾಡುತ್ತೇನೆ. ಗೃಹ ಸಚಿವರು ಕೂಡ ಬರುತ್ತಾರೆ ಅಂತ ಹೇಳಿದ್ದಾರೆ. ಈಗಾಗಲೇ ಕುಟುಂಬಸ್ಥರು ಹೇಳಿದ್ದಾರೆ ದೂರು ಮೊದಲು ಕೊಟ್ಟಿದ್ದೆವು ಅಂತ. ಈಗಾಗಲೇ ಕ್ರಮ ಕೂಡ ಆಗಿದೆ’ ಎಂದರು.