ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮೈಸೂರು ಪೇಟ ತೊಡಿಸಿ ಬರಪರಿಹಾರ ಕೇಳಿದ್ದೆವು. ಬಳಿಕ ಸುಪ್ರೀಂ ಕೋರ್ಟ್ ನಲ್ಲಿ ಮಾಡಿದ ಕಾನೂನು ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಮಾತನಾಡಿದ ಅವರು,
ರಾಜ್ಯ ಸರ್ಕಾರದ ಸುಪ್ರೀಂ ಕೋರ್ಟ್ ನಲ್ಲಿ ನಡೆದ ಕಾನೂನು ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ ಎಂದರು. ಕೇಂದ್ರದ ಅನ್ಯಾಯ ವಿರುದ್ಧ ನಮಗೆ ಜಯ ಸಿಕ್ಕಿದೆ. ಬರ ಪರಿಹಾರ ನೀಡದ ನಿಮಗೆ ವೋಟು ಕೇಳುವ ಹಕ್ಕಿಲ್ಲ. ಪರಿಹಾರ ವಿಚಾರವಾಗಿ ಒಂದು ವಾರದಲ್ಲಿ ನಿರ್ಧಾರ ಮಾಡ್ತೇವೆ ಅಂದಿದ್ದಾರೆ.
ಮತಗಟ್ಟೆಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುತ್ತಿದ್ದೀರಾ!?.. ಹಾಗಿದ್ರೆ ಈ ಸುದ್ದಿ ಓದಿ!
ನಿಮಗೆ ರಾಜ್ಯದ ಜನರ ಬಗ್ಗೆ ಕಾಳಜಿ ಇದ್ಯಾ? ಕಾಳಜಿ ಇದ್ದರೆ ತಕ್ಷಣ ಹಣವನ್ನು ಬಿಡುಗಡೆ ಮಾಡಿ ಎಂದರು. ನಿಮ್ಮ ಹಣ ನಾವು ಒಂದು ಪೈಸೆ ಇಟ್ಟುಕೊಳ್ಳಲ್ಲ. ಎಲ್ಲಾ ಹಣವನ್ನು ರೈತರ ಅಕೌಂಟಿಗೆ ಹಾಕುತ್ತೇವೆ. ತಕ್ಷಣ ಬರಪರಿಹಾರವನ್ನ ಬಿಡುಗಡೆ ಮಾಡಿ ಎಂದು ಕೇಂದ್ರಕ್ಕೆ ಕೃಷ್ಣಬೈರೇಗೌಡ ಆಗ್ರಹಿಸಿದರು.