ಗದಗ:- SIT ಅಧಿಕಾರಿಗಳಿಂದ ಎಚ್.ಡಿ ರೇವಣ್ಣ ಬಂಧನ ಹಿನ್ನಲೆ ಗದಗನಲ್ಲಿ ವಿನಯ್ ಕುಲಕರ್ಣಿ ಪ್ರತಿಕ್ರಿಯೆ ನೀಡಿದ್ದಾರೆ.
ಕಣ್ಮುಚ್ಚಿ ತೆಗೆಯೋದ್ರಲ್ಲಿ ಡಿಕೆ ಶಿವಕುಮಾರ್ ಸ್ವಾಗತಕ್ಕೆ ತಂದಿದ್ದ ಸೇಬು ಹಾರ ಉಡೀಸ್
ರೇವಣ್ಣ ಬಂಧನ ಬಗ್ಗೆ ಸಂಪೂರ್ಣ ಮಾಹಿತಿ ನನಗೆ ಇಲ್ಲ. ಈಗ ತಾನೆ ಕೆಲವರು ಹೇಳಿದರು. ಅವರ ಮೇಲೆ ಇರುವ ದೂರು, ನಿನ್ನೆ, ಇವತ್ತು, ಸಾಕಷ್ಟು ಜನ ಕಂಪ್ಲೆಟ್ ಕೊಟ್ಟಿದ್ದಾರೆ. ಸಹಜವಾಗಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಆ ಕೃತ್ಯ ನೋಡಿದಂತಹ ಟೈಮ್ ನಲ್ಲಿ ಯಾರಿಗಾದ್ರೂ ಭಾರತ ದೇಶದಲ್ಲಿ ಇದು ಪ್ರಥಮ ಕೃತ್ಯ ಆಗಿರಬಹುದು.
ಮಹಿಳೆಯರಿಗೆ ಆದ ಅಗೌರವ ನೋಡಿದಾಗ ನಿಜವಾಗಿ ನೋವಿನ ಸಂಗತಿ. ಇದರಿಂದ ಚುನಾವಣೆಗೆ ಪರಿಣಾಮ ಪಡುವುದಿಲ್ಲ. ಅವರು ಏನು ಅಂತ ಜನ್ರಿಗೆ ಗೊತ್ತಾಯಿತು. ಮುಂದೆ ಜನ ಅವರನ್ನು ತಿರಸ್ಕರಿಸುತ್ತಾರೆ. ಪ್ರಜ್ವಲ್ ರೇವಣ್ಣ ವಿಷಯ. ಇವರನ್ನು ಅರೆಸ್ಟ್ ಮಾಡಿದಾರೆ ಅಂದ್ರೆ ಅವರನ್ನು ಯಾಕೆ ಬಿಡ್ತಾರೆ. ಎಸ್.ಐಟಿ ಗೆ ಕೊಟ್ಟಿದೆ. ವಿದೇಶಕ್ಕೆ ಮಾಹಿತಿ ನೀಡಿ ತರೆಸಿಕೊಳ್ಳುವ ಕೆಲಸ ಮಾಡ್ತಾರೆ.
ಕೇಂದ್ರ ಸರ್ಕಾರ ಸಹ ಇದಕ್ಕೆ ಬೆಂಬಲಿಸಬೇಕು ಎಂದರು.