ತುಮಕೂರು: ಚುನಾವಣೆ ಮುಗಿದರು ಉಪನ್ಯಾಸಕರಿಗೆ ಚುನಾವಣಾ ಬಿಸಿ ಇನ್ನೂ ತಪ್ಪಲಿಲ್ಲ.. ಕಾಲೇಜುಗಳಲ್ಲಿ ಉಪನ್ಯಾಸಕರಿಲ್ಲದೇ ವಿದ್ಯಾರ್ಥಿಗಳು ಪರದಾಟ ನಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು ಲೋಕಸಭಾ ಚುನಾವಣೆ ಹಿನ್ನೆಲೆ ಕಾಲೇಜು ಉಪನ್ಯಾಸಕರನ್ನ ಚುನಾವಣಾ ಕರ್ತವ್ಯಕ್ಕೆ ನೇಮಕ ಮಾಡಿಕೊಳ್ಳಲಾಗಿತ್ತು.. ಚುನಾವಣೆ ಮುಗಿದು 7 ದಿನಗಳು ಕಳೆದರು ಉಪನ್ಯಾಸಕರನ್ನ,
ಚುನಾವಣಾ ಕರ್ತವ್ಯದಿಂದ ಬಿಡುಗಡೆಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ. ಮಾರ್ಚ್ 18 ರಂದೇ ತುಮಕೂರು ವಿವಿಯ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ಗಳು ಆರಂಭವಾಗಿದ್ದು, ಕಾಲೇಜುಗಳಲ್ಲಿ ಉಪನ್ಯಾಸಕರಿಲ್ಲದೇ ಖಾಲಿ ಕುಳಿತು ನೂರಾರು ವಿದ್ಯಾರ್ಥಿಗಳು ವಾಪಸ್ ತೆರಳುತ್ತಿದ್ದಾರೆ.
ಕೂಡಲೇ ಕಾಲೇಜು ಉಪನ್ಯಾಸರನ್ನ ಚುನಾವಣಾ ಕರ್ತವ್ಯದಿಂದ ಬಿಡುಗಡೆಗೊಳಿಸಿ, ವಿದ್ಯಾರ್ಥಿಗಳ ಬೋದನೆಗೆ ಅವಕಾಶ ಮಾಡಿಕೊಡುವಂತೆ ಪಾವಗಡ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಚುನಾವಣಾಧಿಕಾರಿಗೆ ಪತ್ರ ಬರೆದು ಒತ್ತಾಯ ಮಾಡಿದ್ದಾರೆ.