ಕೋಲಾರ: ಎರಡೂ ಪಕ್ಷಗಳು ಪ್ರಣಾಳಿಕೆಗಳನ್ನ ಬಿಡುಗಡೆ ಮಾಡಿದ್ದಾರೆ. ಪ್ರಣಾಳಿಕೆಯನ್ನ ಕೊಟ್ಟ ಪಕ್ಷಗಳಿಗೆ ಜವಾಬ್ದಾರಿ ಇರುವುದಿಲ್ಲ ಎಂದು ಕೋಲಾರದಲ್ಲಿ ಮಾಜಿ ರಾಜ್ಯ ಸಭಾ ಸದಸ್ಯ ಎಲ್.ಹನುಮಂತಯ್ಯ ಹೇಳಿದ್ದಾರೆ. ಸುದ್ದಿಗೋಷ್ಟೀ ನಡೆಸಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳಿಗೆ ಬಧ್ದತೆ ಕಡಿಮೆ ಆಗ್ತಿದೆ. ಇಂತಹ ಸಂದರ್ಭದಲ್ಲಿ ಪ್ರಣಾಳಿಕೆಗಳಿಗೆ ಬದ್ಧತೆಯಿಂದಿರುವ ಪಕ್ಷ ಯಾವುದು ಎನ್ನುವುದು ಪ್ರಶ್ನೆಯಾಗಿದೆ.
ವಿಧಾನ ಸಭೆಯ ಕಾಂಗ್ರೇಸ್ ಪ್ರಣಾಳಿಕೆಗಳು ಜಾರಿಯಾಗೋಲ್ಲ ಎಂದು ಬಿಜೆಪಿಯವರು ಹೇಳಿದ್ರು. ಕೇಂದ್ರದ ಪ್ರಣಾಳಿಕೆಗಳಲ್ಲೂ ತಕರಾರು ತೆಗೆದಿದ್ದಾರೆ. ಆದರೆ ಆರ್ಥಿಕ ತಜ್ಞರೊಂದಿಗೆ ಮಾತುಕತೆ ನಡೆಸಿ ಪ್ರಣಾಳಿಕೆಗಳನ್ನ ಘೋಷಣೆ ಮಾಡಿದ್ದೇವೆ. ಬಿಜೆಪಿ ಹಿಂದೂ ಹಿಂದೂಯೇತರ ಎಂದು ವಿಂಗಡಣೆ ಮಾಡಿದೆ. ಈ ಮೂಲಕ ಮತಗಳನ್ನ ಪಡೆದುಕೊಳ್ಳಲು ಪ್ರಧಾನಿಗಳೇ ಹೀಗೆ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಬಿಜೆಪಿಯವರು ಹತಾಶರಾಗಿ ಹೆದರಿದ್ದಾರೆ ಎಂದು ಹೇಳಿದರು.
ಇನ್ನೂ ಕೆ.ಎಚ್.ಮುನಿಯಪ್ಪ ವಿರುದ್ದ ಎಂ.ಎಲ್ಸಿ ನಸೀರ್ ಅಹ್ಮದ್ ಪುಟ್ಗೋಸಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೇ ನೀಡಿದ ಅವರು, ರಾಜ್ಯದ ಯಾವುದೇ ಪಕ್ಷದ ನಾಯಕರು, ಈ ರೀತಿ ಮಾತನಾಡುವುದು ತಪ್ಪು. ಇದರಿಂದ ಅವರ ನಾಲಿಗೆ ಅವರ ಟೇಸ್ಟ್ ಯಾವ ರೀತಿ ಇದೆ ಎಂದು ಗೊತ್ತಾಗುತ್ತೆ. ಅದಲ್ಲದೆ ಆ ರೀತಿ ಹೇಳಿಕೆ ಅವರ ಗುಣವನ್ನ ತೋರಿಸುತ್ತದೆ ಎಂದರು.
ಟಿಎಸ್ಪಿಸಿಪಿ ಹಣವನ್ನ ಗ್ಯಾರಂಟಿಗಳಿಗೆ ಬಳಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, 11 ಸಾವಿರ ಕೋಟಿಗಳನ್ನ ಗ್ಯಾರಂಟಿಗಳಿಗೆ ಉಪಯೋಗಿಸುತ್ತಿದ್ದಾರೆ. ಮೊದಲನೆ ವರ್ಷ ಗ್ಯಾರಂಟಿಗಳಿಗೆ ಹಣ ಇಟ್ಟಿರಲಿಲ್ಲ. ಅದಕ್ಕಾಗಿ ಟಿಎಸ್ಪಿಸಿಪಿ ಬಳಸಿದ್ದೇವೆ. ಈ ವರ್ಷದಿಂದ ದಲಿತರ ಹಣವನ್ನ ಬಳಸೋದಿಲ್ಲ ಎಂದು ಹೇಳಿದ್ದಾರೆ. ಮುಂದಿನ ವರ್ಷ ಈ ಹಣವನ್ನ ಬಳಕೆ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆಂದು ಮಾಜಿ ರಾಜ್ಯ ಸಭಾ ಸದಸ್ಯ ಎಲ್.ಹನುಮಂತಯ್ಯ ಹೇಳಿದ್ದಾರೆ.